ಕೇಂದ್ರ ಸರ್ಕಾರ ದೇಶದ ಸಣ್ಣ ಸಾಲಗಾರರಿಗೆ ಸಂತಸದ ಸುದ್ದಿ ನೀಡುವ ಸುಳಿವು ನೀಡಿದೆ. ದಿವಾಳಿತನ ಕಾನೂನಿನ ಚೌಕಟ್ಟಿನಡಿಯಲ್ಲಿ, ಸಾಲದ ಸುಳಿಯಲ್ಲಿ ಸಿಲುಕಿ ತೊಂದರೆಗಿಡಾಗಿರುವ ಸಣ್ಣ ಸಾಲಗಾರರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಸರ್ಕಾರ ಯೋಜನೆ.
ಕೇಂದ್ರ ಸರ್ಕಾರ ದೇಶದ ಸಣ್ಣ ಸಾಲಗಾರರಿಗೆ ಸಂತಸದ ಸುದ್ದಿ ನೀಡುವ ಸುಳಿವು ನೀಡಿದೆ. ದಿವಾಳಿತನ ಕಾನೂನಿನ ಚೌಕಟ್ಟಿನಡಿಯಲ್ಲಿ, ಸಾಲದ ಸುಳಿಯಲ್ಲಿ ಸಿಲುಕಿ ತೊಂದರೆಗಿಡಾಗಿರುವ ಸಣ್ಣ ಸಾಲಗಾರರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಸರ್ಕಾರ ಯೋಜನೆ ರೂಪಿಸುತ್ತಿದೆ.
ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಶ್ರೀನಿವಾಸ್ ಅವರು, ಆರ್ಥಿಕವಾಗಿ ದುರ್ಬಲ ವಿಭಾಗದಿಂದ (ಇಡಬ್ಲ್ಯೂಎಸ್) ಸಾಲಗಾರರಿಗೆ ಉದ್ದೇಶಿತ ಮನ್ನಾ ಮಾಡುವ ಮಾನದಂಡಗಳ ಬಗ್ಗೆ ಮೈಕ್ರೊ ಫೈನಾನ್ಸ್ ಇಂಡಸ್ಟ್ರಿಯೊಂದಿಗೆ ಉದ್ಯಮದೊಂದಿಗೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಸುಸ್ತಿದಾರರಿಗೆ ಅನ್ವಯ
ಸರ್ಕಾರದ ಸಣ್ಣ ಸಾಲಗಾರರ ಸಾಲ ಮನ್ನಾ ಯೋಜನೆಯು ವ್ಯಕ್ತಿಗತ ದಿವಾಳಿತನ ಅಂದರೆ ಸಾಲ ಪಡೆದು ತೀರಿಸಲಾಗದೇ ಸುಸ್ತಿದಾರರಾದವರಿಗೆ ಅನ್ವಯ ಆಗಲಿದೆ. ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಪೈಕಿ ಕಡು ಬಡತನ ಇರುವಂತಹ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ.
ರೂಪುರೇಷೆ ಹೇಗಿದೆ?
ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಸಾಲಮನ್ನಾ ಯೋಜನೆಯ ಕರಡು ರೂಪುರೇಷೆ ಅನ್ವಯ, ಒಂದು ಬಾರಿ ಸಾಲ ಮನ್ನಾ ಪ್ರಯೋಜನ ಪಡೆದರೆ ಮುಂದಿನ ಐದು ವರ್ಷಗಳವರೆಗೆ ಈ ಪ್ರಯೋಜನ ಪಡೆಯುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮೈಕ್ರೋ ಫೈನಾನ್ಸ್ ಉದ್ಯಮಕ್ಕೆ ಆರ್ಥಿಕವಾಗಿ ಧಕ್ಕೆ ಆಗದ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ನಿಯಮ ಮತ್ತು ಅರ್ಹತೆ
ಈ ಸಾಲ ಮನ್ನಾ ನಿಯಮಗಳ ಪ್ರಕಾರ ಸಾಲಗಾರನ ವಾರ್ಷಿಕ ಆದಾಯ ರೂ. 60,000 ಮೀರುವಂತಿರಬಾರದು. ಸಾಲಗಾರನ ಆಸ್ತಿ ರೂ. 20,000 ಮೀರಿರಬಾರದು ಮತ್ತು ಆತನ ಸಾಲ ರೂ. 35,000 ರೂಪಾಯಿಯನ್ನು ಮೀರಿರಬಾರದು. ಇದಲ್ಲದೇ ಸಾಲಗಾರನಿಗೆ ಸ್ವಂತ ಮನೆ ಇರಬಾರದು. ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ಸಾಲಗಾರರ ಸಾಲ ಮನ್ನಾ ಮಾಡಲಾಗುವುದು.
ಐಬಿಸಿ ನಿಬಂಧನೆ
ಇದಲ್ಲದೆ, ಪಾಲುದಾರಿಕೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್ ಸಾಲಗಾರ ವೈಯಕ್ತಿಕ ಖಾತರಿಗಾರನಿಗೆ ಸಂಬಂಧಿಸಿದ ಐಬಿಸಿ ನಿಬಂಧನೆಗಳು ತಕ್ಷಣದಿಂದ ಜಾರಿಗೆ ಬರಲಿವೆ. ಮಾರುಕಟ್ಟೆ ಆಧಾರಿತ ಮತ್ತು ಸಮಯಕ್ಕೆ ಅನುಗುಣವಾದ ಪ್ರಕ್ರಿಯೆಯ ಮೂಲಕ ತೊಂದರೆಗೀಡಾದ ಸ್ವತ್ತುಗಳೊಂದಿಗೆ ವ್ಯವಹರಿಸಲು ಐಬಿಸಿ ಚೌಕಟ್ಟನ್ನು ಒದಗಿಸುತ್ತದೆ.
ಕೊನೆ ಮಾತು
ದಿವಾಳಿತನ ಸಂಹಿತೆ ಕೋಡ್(ಐಬಿಸಿ) ಅಡಿಯಲ್ಲಿ 'ಫ್ರೆಶ್ ಸ್ಟಾರ್ಟ್' ನಿಬಂಧನೆಗಳ ಭಾಗವಾಗಿ ಉದ್ದೇಶಿತ ಮನ್ನಾವನ್ನು ನೀಡಲಾಗುವುದು. ಸಾಲ ಮನ್ನಾ ವೈಯಕ್ತಿಕ ದಿವಾಳಿತನದ ಭಾಗವಾಗಿ ಇಡಬ್ಲ್ಯೂಎಸ್ ನಲ್ಲಿ ಹೆಚ್ಚು ತೊಂದರೆಗೀಡಾದವರಿಗೆ ಎಂದು ಒತ್ತಿ ಹೇಳಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications