ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರ ಯಾವುದೇ ಉತ್ತೇಜನ ನೀಡಲು ಬದ್ದವಾಗಿಲ್ಲದ ಕಾರಣ ದೇಶೀಯ ಷೇರುಪೇಟೆ ಗುರುವಾರ ಭಾರೀ ಕುಸಿತಕ್ಕೆ ಒಳಗಾಯಿತು.
ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರ ಯಾವುದೇ ಉತ್ತೇಜನ ನೀಡಲು ಬದ್ದವಾಗಿಲ್ಲದ ಕಾರಣ ದೇಶೀಯ ಷೇರುಪೇಟೆ ಗುರುವಾರ ಭಾರೀ ಕುಸಿತಕ್ಕೆ ಒಳಗಾಯಿತು.
ರಿಯಾಲ್ಟಿ, ಮೆಟಲ್, ಆಟೋ ಮತ್ತು ಪಿಎಸ್ಯು ಬ್ಯಾಂಕ್ ಷೇರುಗಳು ಅತೀ ಹೆಚ್ಚು ನಷ್ಟ ಅನುಭವಿಸಿದವು. ಬ್ಯಾಂಕಿಂಗ್ ಮತ್ತು ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು.
ಎಫ್ಪಿಐ ನಿಯಮಗಳ ಕುರಿತು ಸೆಬಿ ಕೈಗೊಂಡ ಕ್ರಮಗಳು ಉತ್ತಮವಾಗಿವೆ. ಆದರೆ ಬಜೆಟ್ ನಲ್ಲಿ ಮಂಡಿಸಿದ ಎಫ್ಪಿಐ ತೆರಿಗೆ ಪ್ರಸ್ತಾಪಗಳ ಕುರಿತು ಸ್ಪಷ್ಟೀಕರಣ ಇಲ್ಲದಿರುವುದರಿಂದ ಹೂಡಿಕೆದಾರರು ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದಾರೆ.
ಷೇರುಪೆಟೆ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳು ಇಲ್ಲಿವೆ:
ಸರ್ಕಾರದ ಬದ್ಧತೆ
ಕೇಂದ್ರ ಸರ್ಕಾರದಿಂದ ಆರ್ಥಿಕ ಉತ್ತೇಜನ ಕೊಡುಗೆಗಳು ಸಿಗುವುದಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿರುವುದು ಹೂಡಿಕೆದಾರರ ಮೇಲೆ ನಕರಾತ್ಮಕ ಪರಿಣಾಮ ಬೀರಿತು. ಹೂಡಿಕೆದಾರರ ಖರೀದಿಯ ಉತ್ಸಾಹಕ್ಕೆ ತಣ್ಣೀರೆರಚಿತು.
ಜಾಗತಿಕ ತಲ್ಲಣಗಳು
ಯುಎಸ್-ಚೀನಾ ವಾಣಿಜ್ಯ ಸಮರ, ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿರುವುದು ದೇಶೀ ಮಾರುಕಟ್ಟೆ ಮೇಲೂ ದುಷ್ಪರಿಣಾಮ ಬೀರಿತು.
ಇನ್ನೊಂದೆಡೆ ಯುಎಸ್ ಬಡ್ಡಿದರಗಳ ಅನಿಶ್ಚಿತತೆ ಮತ್ತು ಜಾಗತಿಕ ಹಣಕಾಸು ಪ್ರಚೋದನೆಯ ಫಲವಾಗಿ ಏಷ್ಯಾದ ಷೇರುಗಳು ಕುಸಿತ ಕಂಡಿವೆ. ಕಳೆದ ತಿಂಗಳು ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸಿದ್ದು ಯುರೋಪಿಯನ್ ಷೇರುಗಳ ಮೇಲೆ ಪ್ರಭಾವ ಉಂಟುಮಾಡಿತ್ತು.
ಆರ್ಥಿಕ ಕುಸಿತ ಭಾರತಕ್ಕೆ ಹೊಡೆತ
ಭಾರತದ ಆರ್ಥಿಕ ಬೆಳವಣಿಗೆಯು (ಜಿಡಿಪಿ) ಪ್ರಸಕ್ತ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 5.7ಕ್ಕೆ ಇಳಿಕೆಯಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ನುಮುರಾ ವರದಿ ಮಾಡಿದೆ.
ಗ್ರಾಹಕರ ಅನುಬೋಗ, ಖರಿದಿ ಸಾಮರ್ಥ್ಯ ಕುಸಿರುವುದು, ದುರ್ಬಲ ಹೂಡಿಕೆ ಚಟುವಟಿಕೆಗಳು ಮತ್ತು ಮಂದಗತಿಯ ಸೇವಾ ವಲಯದ ಬೆಳವಣಿಗೆ ಆರ್ಥಿಕ ಪ್ರಗತಿ ದರ (ಜಿಡಿಪಿ) ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಈ ವರದಿ ಹೂಡಿಕೆದಾರರ ಮನೋಭಾವ ಮತ್ತಷ್ಟು ಕುಸಿಯುವಂತೆ ಮಾಡಿತು.
ರೂಪಾಯಿ ಮೌಲ್ಯ
ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು 42 ಪೈಸೆ ತೀವ್ರ ಕುಸಿತವಾಗಿರುವುದು ಷೇರುಪೇಟೆ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಿ ಇನ್ನಷ್ಟು ಹದಗೆಡಿಸಿತು. ವಿದೇಶಿ ನಿಧಿಯ ಹೊರಹರಿವಿನ ಮಧ್ಯೆ ರೂಪಾಯಿ ಮೌಲ್ಯ ಕುಸಿಯಿತು. ಇಂದು ದೇಶೀಯ ಕರೆನ್ಸಿ ಮೌಲ್ಯ ರೂ. 71.97 ಕ್ಕೆ ತಲುಪಿದೆ.
ಮಾರುಕಟ್ಟೆಯೆತ್ತ ಒಂದು ನೋಟ!
ಬಿಎಸ್ಇ ಸೆನ್ಸೆಕ್ಸ್ 587.44 ಪಾಯಿಂಟ್ ಅಥವಾ ಶೇ. 1.59 ರಷ್ಟು ಕುಸಿದು 36,472.93 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕವು 180.95 ಪಾಯಿಂಟ್, ಶೇ. 1.67 ರಷ್ಟು ಕುಸಿದು 10,737.75 ಕ್ಕೆ ಕೊನೆಗೊಂಡಿದೆ.
ಯೆಸ್ ಬ್ಯಾಂಕ್ ಕೆಟ್ಟ ಪ್ರದರ್ಶನ ನೀಡಿದ್ದರೆ ಮತ್ತು ಟೆಕ್ ಮಹೀಂದ್ರಾ ಅತ್ಯುತ್ತಮ ಲಾಭ ಗಳಿಸಿತ್ತು. ವೇದಾಂತ, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್ ಮತ್ತು ಎಸ್ಬಿಐ ನಷ್ಟ ಕಂಡು, ಶೇಕಡಾ 12 ರಷ್ಟು ಕುಸಿದಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications