For Quick Alerts
For Daily Alerts
ನೆಲಕಚ್ಚಿರುವ ಆಟೊಮೊಬೈಲ್ ಉದ್ಯಮ, ಪುನಶ್ಚೇತನಕ್ಕೆ ಮುಂದಾದ ಸರ್ಕಾರ
ಆರ್ಥಿಕ ಹಿಂಜರಿತ ವಾಹನ ಉದ್ಯಮವನ್ನು ಕಂಗೆಡಿಸಿದ್ದು, ನಷ್ಟ ಎದುರಿಸುವ ಸಲುವಾಗಿ ಪ್ರಮುಖ ಆಟೊಮೊಬೈಲ್ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ. ಜೊತೆಗೆ ಉತ್ಪಾದನಾ ಘಟಕಗಳನ್ನು ಮುಚ್ಚುತ್ತಿವೆ.
|
ಆರ್ಥಿಕ ಹಿಂಜರಿತ ವಾಹನ ಉದ್ಯಮವನ್ನು ಕಂಗೆಡಿಸಿದ್ದು, ನಷ್ಟ ಎದುರಿಸುವ ಸಲುವಾಗಿ ಪ್ರಮುಖ ಆಟೊಮೊಬೈಲ್ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ. ಜೊತೆಗೆ ಉತ್ಪಾದನಾ ಘಟಕಗಳನ್ನು ಮುಚ್ಚುತ್ತಿವೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದ್ದು, ಆಟೋಮೊಬೈಲ್ ಉದ್ಯಮದ ಪುನಶ್ಚೇತನ ಕಾರ್ಯ ತೀರಾ ಅವಶ್ಯಕವಾಗಿದೆ. ಹೀಗಾಗಿ ಜಿಎಸ್ಟಿ ಕಡಿತ ಮಾಡುವಂತೆ ಉದ್ಯಮ ವಲಯವು ಕೇಂದ್ರ ಸರ್ಕಾರಕ್ಕೆ ಕೋರಿತ್ತು.
ವಾಹನ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲು ತಾತ್ಕಾಲಿಕವಾಗಿ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರವನ್ನು ಕಡಿತಗೊಳಿಸುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸುವುದಾಗಿ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
ಜಿಎಸ್ಟಿ ಕಡಿತದ ಮನವಿಗೆ ಸ್ಪಂದಿಸಿರುವ ಸರ್ಕಾರ, ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಇಳಿಕೆ ಮಾಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸೆಪ್ಟೆಂಬರ್ 20ರಂದು ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಗುವುದು ಹೇಳಲಾಗಿದೆ.
English summary
Automobile: GST rate cut relief likely for compact cars
Story first published: Saturday, September 7, 2019, 10:11 [IST]