For Quick Alerts
For Daily Alerts
ಮೋದಿಗೆ ಮನಮೋಹನ್ ಸಿಂಗ್ ಪಾಠ! ಆರ್ಥಿಕ ಚೇತರಿಕೆಗೆ ಸಿಂಗ್ ನೀಡಿದ ಸಲಹೆಗಳೇನು?
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿಯವರಿಗೆ ಪ್ರಚಾರದ ವ್ಯಾಮೋಹ ಬಿಟ್ಟು ಆರ್ಥಿಕ ಚೇತರಿಕೆಗೆ ಹೆಚ್ಚು ಆದ್ಯತೆ ನೀಡಲು ಸಲಹೆ ನೀಡಿದ್ದಾರೆ.
|
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿಯವರಿಗೆ ಪ್ರಚಾರದ ವ್ಯಾಮೋಹ ಬಿಟ್ಟು ಆರ್ಥಿಕ ಚೇತರಿಕೆಗೆ ಹೆಚ್ಚು ಆದ್ಯತೆ ನೀಡಲು ಸಲಹೆ ನೀಡಿದ್ದಾರೆ.
ಮೋದಿಯವರಿಗೆ ಕುಟುಕಿರುವ ಮನಮೋಹನ್ ಸಿಂಗ್ ಆರ್ಥಿಕತೆ ಕುಸಿದಿರುವ ಇಂತಹ ಸಂದರ್ಭದಲ್ಲಿ ಸರಿಯಾದ ಸುಧಾರಣಾ ಕ್ರಮಗಳನ್ನು ಕೈಗೊಂಡರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಪ್ರಧಾನವಾಗಿ ಆರು ಸಲಹೆಗಳನ್ನು ನೀಡಿದ್ದಾರೆ.
ಜಿಎಸ್ಟಿಯನ್ನು ಸರಳೀಕರಿಸಿ ತರ್ಕಬದ್ಧಗೊಳಿಸಬೇಕು, ಗ್ರಾಮೀಣ ಬಳಕೆಯನ್ನು ವೇಗ ನೀಡಬೇಕು, ಕೃಷಿಯನ್ನು ಪುನರುಜ್ಜೀವನಗೊಳಿಸಬೇಕು, ಉದ್ಯೋಗ, ರಪ್ತು ಮತ್ತು ಬಂಡವಾಳ ಸೃಷ್ಟಿಗೆ ಸಾಲದ ಕೊರತೆಯನ್ನು ನಿಭಾಯಿಸುವುದು ಹೇಗೆ ಎಂದು ಸಿಂಗ್ ವಿವರಿಸಿದ್ದಾರೆ.
1. ತಾತ್ಕಾಲಿಕವಾಗಿ ಆದಾಯ ನಷ್ಟವಾದರೂ ಕೂಡ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸರಳಗೊಳಿಸಬೇಕು.
2. ಸರ್ಕಾರವು ಕೃಷಿ ಕ್ಷೇತ್ರದ ಸುಧಾರಣೆಗೆ ಹೊಸ ಕ್ರಮಗಳನ್ನು ಕೈಗೊಳ್ಳಬೇಕು.
3. ಸಾರ್ವಜನಿಕ ಬ್ಯಾಂಕ್ಗಳು ಹಾಗು ಎನ್ಬಿಎಫ್ಸಿಗಳು ಬಂಡವಾಳ ಕೊರತೆ ಎದುರಿಸುತ್ತಿರುವುದರಿಂದ ಬಂಡವಾಳ ಸಂಗ್ರಹಕ್ಕೆ ಹೆಚ್ಚು ಗಮನ ನೀಡಬೇಕು.
4. ಜವಳಿ, ವಾಹನ ಉದ್ಯಮ, ಎಲೆಕ್ಟ್ರಾನಿಕ್ಸ್, ಹೌಸಿಂಗ್ ಕ್ಷೇತ್ರ ಚೇತರಿಕೆ ಹಾಗು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು.
5. ಜಾಗರೂಕತೆಯಿಂದ ಯುಎಸ್ ಚೀನಾ ವಾಣಿಜ್ಯ ಸಮರದ ಲಾಭವನ್ನು ಪಡೆದು, ಹೊಸ ರಫ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವಂತಾಗಬೇಕು.
6. ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ ಹಾಗು ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಬೇಕು.
English summary