ಭೌಗೋಳೀಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಭೀತಿಯಿಂದ ಭಾರತೀಯ ಷೇರುಪೇಟೆ ಮಾರಾಟದ ಒತ್ತಡದ ಮಧ್ಯೆ ತೀವ್ರ ನಷ್ಟವನ್ನು ಅನುಭವಿಸಿತು.
ಭೌಗೋಳೀಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಭೀತಿಯಿಂದ ಭಾರತೀಯ ಷೇರುಪೇಟೆ ಮಾರಾಟದ ಒತ್ತಡದ ಮಧ್ಯೆ ತೀವ್ರ ನಷ್ಟವನ್ನು ಅನುಭವಿಸಿತು.
ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 642.22 ಪಾಯಿಂಟ್ ಗಳಷ್ಟು ಕುಸಿದು 36,481 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕವು 185.90 ಅಂಕ ಕುಸಿತದೊಂದಿಗೆ 10,817.60 ಮಟ್ಟಕ್ಕೆ ತಲುಪಿದೆ.
ನಿಫ್ಟಿ ಸೂಚ್ಯಂಕದಲ್ಲಿ ಹೀರೋ ಮೊಟೊಕಾರ್ಪ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಮಾರುತಿ ಸುಜುಕಿ ನಷ್ಟ ಕಂಡವು. ಗೇಲ್, ಎಚ್ಯುಎಲ್, ಟೈಟಾನ್ ಕಂಪನಿ, ಏಷ್ಯನ್ ಪೇಂಟ್ಸ್ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ಲಾಭ ಗಳಿಸಿದವು.
ಷೇರು ಮಾರುಕಟ್ಟೆಯ ಪ್ರಮುಖ ಅಂಶಗಳು ಇಲ್ಲಿವೆ
- ಸೆನ್ಸೆಕ್ಸ್ ಷೇರುಗಳಲ್ಲಿ ಹೀರೋ ಮೊಟೊಕಾರ್ಪ್ 4.4%, ಆಕ್ಸಿಸ್ ಬ್ಯಾಂಕ್ 3.75% ಕುಸಿದಿದ್ದರೆ, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಬಜಾಜ್ ಆಟೋ, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಮಾರುತಿ, ಎಚ್ಡಿಎಫ್ಸಿ ಮತ್ತು ಭಾರ್ತಿ ಏರ್ಟೆಲ್ ಶೇಕಡಾ 2 ರಿಂದ 3 ರಷ್ಟು ಕುಸಿದವು.
- ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರು ವರ್ಷಗಳಲ್ಲಿ ಕನಿಷ್ಠ ಶೇಕಡಾ 5ಕ್ಕೆ ಕುಸಿದ ನಂತರ, ತೈಲ ಬೆಲೆಗಳ ಏರಿಕೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
- ದಾಳಿಯ ನಂತರವೂ ತೈಲ ಬೆಲೆ ಏರಿಕೆ ಮುಂದುವರಿದರೆ ಭಾರತದ ಚಾಲ್ತಿ ಖಾತೆ ಮತ್ತು ಹಣಕಾಸಿನ ಕೊರತೆ ಎದುರಾಗಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
- ಸೌದಿ ಅರೇಬಿಯಾದ ಕಚ್ಚಾ ತೈಲ ಉತ್ಪಾದಕ ಘಟಕಗಳ ಮೇಲಿನ ದಾಳಿಗೆ ಮಿಲಿಟರಿ ಪ್ರತಿಕ್ರಿಯೆಯ ಪರಿಣಾಮ ತೈಲ ಬೆಲೆಗಳು ಇಂದು 4 ತಿಂಗಳ ಗರಿಷ್ಠ ಮಟ್ಟದಲ್ಲಿ ಉಳಿದಿವೆ. ತೈಲ ಘಟಕಗಳ ಮೇಲಿನ ಡ್ರೋನ್ ದಾಳಿಯು ತೈಲ ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
- ಜಿಎಸ್ಟಿ ಸಭೆ ಸೆಪ್ಟೆಂಬರ್ 20 ರಂದು ನಿಗದಿಯಾಗಿದೆದ್ದು, ಪ್ರಸ್ತುತ ಸನ್ನಿವೇಶದಲ್ಲಿ, ಮಾರುಕಟ್ಟೆಗಳು ಚಂಚಲವಾಗಿರಲಿವೆ ಎಂದು ನಾವು ನಿರೀಕ್ಷಿಸಲಾಗಿದೆ.
- ತೈಲ ಮಾರಾಟಗಾರರು ಬಿಪಿಸಿಎಲ್, ಇಂಡಿಯನ್ ಆಯಿಲ್ ಮತ್ತು ಎಚ್ಪಿಸಿಎಲ್ ನಷ್ಟವನ್ನು ಎರಡನೇ ದಿನಕ್ಕೂ ಮುಂದುವರೆದಿದ್ದು, ಶೇಕಡಾ 2 ರಿಂದ 3% ನಷ್ಟಿದೆ.
ರೂಪಾಯಿ ಮೌಲ್ಯ ಕುಸಿತ
ವಾರದ ಆರಂಭದಿಂದಲೂ ಭಾರತೀಯ ರೂಪಾಯಿ ತೀವ್ರವಾಗಿ ದುರ್ಬಲಗೊಂಡಿದೆ. 96 ಪೈಸೆ ಕುಸಿದಿದ್ದು, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 72ರಷ್ಟಿದೆ. ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ಪ್ರತಿಕೂಲ ಪರಿಣಾಮ ಬೀರಿದೆ.
ವಿದೇಶಿ ವ್ಯಾಪಾರಿಗಳು ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್ ದಾಳಿಯು ಯುಎಸ್ ಡಾಲರ್ ನಂತಹ ಸುರಕ್ಷಿತ ಕರೆನ್ಸಿಗಳಿಗೆ ಬೇಡಿಕೆಯನ್ನು ಉಂಟುಮಾಡಿದೆ ಎಂದಿದ್ದಾರೆ.
ಡ್ರೋನ್ ದಾಳಿ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ
ಸೆಪ್ಟೆಂಬರ್ 14 ರಂದು, ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ಸಂಸ್ಕರಣಾ ಘಟಕ ಸೇರಿದಂತೆ ತೈಲ ಉದ್ಯಮದ ಹೃದಯಭಾಗದಲ್ಲಿರುವ ಎರಡು ಸೌದಿ ಅರಾಮ್ಕೊ ಘಟಕಗಳ ಮೇಲೆ ಡ್ರೋನ್ಗಳಿಂದ ದಾಳಿ ಮಾಡಲ್ಪಟ್ಟವು. ಅಬ್ಕೈಕ್ ತೈಲ ಸಂಸ್ಕರಣಾ ಘಟಕ ಮತ್ತು ಖುರೈಸ್ ತೈಲ ಕ್ಷೇತ್ರ ಎಂಬ ಎರಡು ಘಟಕಗಳ ಮೇಲಿನ ದಾಳಿಯು ದಿನಕ್ಕೆ 5.7 ಮಿಲಿಯನ್ ಬ್ಯಾರೆಲ್ಗಳ ತಾತ್ಕಾಲಿಕ ಕೊರತೆಗೆ ಕಾರಣವಾಯಿತ. ಇದು ಜಾಗತಿಕ ಕಚ್ಚಾ ತೈಲ ಪೂರೈಕೆಯ 5 ಪ್ರತಿಶತ ಅಥವಾ ಸೌದಿಯ ತೈಲ ಉತ್ಪಾದನೆಯ 50 ಪ್ರತಿಶತ ಕುಸಿಯಿತು.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications