ಮುಂಬೈ, ಜನವರಿ 07: ಇಬ್ಬರು ಸ್ನೇಹಿತರು ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ದ್ವೀಪವೊಂದನ್ನು ಖರೀದಿಸುವ ಯೋಚನೆ ಮಾಡಿದ್ದರು. ಆದರೆ, ತಮ್ಮ ಐಷಾರಾಮಿ ಕನಸಿನ ಆಸೆಯನ್ನು ಪೂರೈಸುವುದಕ್ಕೆ ಅವರ ಬಳಿ ಹಣವಿರಲಿಲ್ಲ. ಆದರೆ, ಇದಕ್ಕೊಂದು ಅವರು ಉಪಾಯವನ್ನು ಹುಡುಕಿದ್ದು, ಆ ಮೂಲಕ ಹೂಡಿಕೆಯನ್ನು ಆಹ್ವಾನಿಸಿದ್ದರು. ಪರಿಣಾಮವಾಗಿ 18,0000 ಡಾಲರ್ ಮೊತ್ತಕ್ಕೆ ಜಗತ್ತಿನ ಮೊದಲ ಕ್ರೌಡ್ ಫಂಡಿಂಗ್ ದ್ವೀಪವನ್ನು ಖರೀದಿಸಿದ್ದಾರೆ.
ಈ ದ್ವೀಪವು ಕಾಫಿ ಕೇಯ್ ಆಗಿದ್ದು, ಇದು ಕೆರಿಬಿಯನ್ನಲ್ಲಿದೆ. ಅಲ್ಲದೆ, ಬೆಲೀಜ್ ದೇಶದ ಕರಾವಳಿಯಿಂದ ಕೇವಲ 15 ನಿಮಿಷಗಳ ದೂರದಲ್ಲಿ ಈ ದ್ವೀಪವಿದೆ. ಈ ದ್ವೀಪವನ್ನು ಪರಿಚಯಿಸಿರುವ ಇಬ್ಬರು ವ್ಯಕ್ತಿಗಳೆಂದರೆ ಮಾರ್ಷಲ್ ಮೇಯರ್ ಹಾಗೂ ಗರೆಥ್ ಜಾನ್ಸನ್. ಇವರು ಲೆಟಸ್ ಬೈ ಆನ್ ಐಲ್ಯಾಂಡ್ ಕ್ರೌಡ್ಫಂಡಿಂಗ್ ಅಭಿಯಾನದ ಸಹಸ್ಥಾಪಕರೂ ಆಗಿದ್ದಾರೆ.

ಈ ದ್ವೀಪವು ಹೆಚ್ಚು ವಿಸ್ತಾರವನ್ನು ಹೊಂದಿಲ್ಲ. ಆದರೆ ಉತ್ತರ ಗೋಳಾರ್ಧದ ಅತಿದೊಡ್ಡ ತಡೆಗೋಡೆಯಾದ ಬೆಲೀಜ್ ಬ್ಯಾರಿಯರ್ ರೀಫ್ ರಿಸರ್ವ್ ವ್ಯವಸ್ಥೆಯಡಿ ನೆಲೆಗೊಂಡಿದೆ. ಈ ವಿಭಿನ್ನ ದ್ವೀಪವನ್ನು 2019ರಲ್ಲಿ ಖರೀದಿಸಲಾಗಿದೆ. ಈ ದ್ವೀಪವು ಮೊದಲು ಬೆಲೀಜಿಯನ್-ಲೆಬನಾನ್ ದಂಪತಿಗೆ ಸೇರಿತ್ತು. ವಿಶೇಷವೆಂದರೆ, ಈ ದ್ವೀಪವು ಮ್ಯಾಂಗ್ರೋವ್ ಹಾಗೂ ತೆಂಗಿನ ಮರಗಳಿಂದ ಆವೃತಗೊಂಡಿವೆ.
ಈ ದ್ವೀಪವನ್ನು ಖರೀದಿಸುವುದಕ್ಕೆ ಇದರ ಸಂಸ್ಥಾಪಕರು 100ಕ್ಕೂ ಹೆಚ್ಚು ಮಂದಿಯಿಂದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಈ ಭೂಮಿಗೆ ಅವರೆಲ್ಲರೂ ಪಾಲುದಾರರಾಗಿದ್ದಾರೆ. ಈ ದ್ವೀಪದ ಪ್ರತಿ ಷೇರುಬೆಲೆ 3250 ಡಾಲರ್. ಹೂಡಿಕೆದಾರರಿಗೆ ಈ ಹೂಡಿಕೆಯು ಹೆಚ್ಚಿನ ಲಾಭವನ್ನು ಉಂಟು ಮಾಡುವುದಕ್ಕೆ ಈ ದ್ವೀಪವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಲೆಟಸ್ ಬೈ ಆನ್ ಐಲ್ಯಾಂಡ್ನ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಗರೆಥ್ ಜಾನ್ಸನ್ ಅವರು ಉದ್ಯಮಿಯಾಗಿದ್ದು, ಯಂಗ್ ಪಯೊನೀರ್ ಟೂರ್ಸ್ ಎಂಬ ಕಂಪನಿಯನ್ನು ಹೊಂದಿದ್ದಾರೆ. ಯುಕೆ ಮೂಲದ ಇವರು ನಾರ್ತ್ ಕೊರಿಯಾ, ನಗರೋನೊ ಸೇರಿದಂತೆ ಜಗತ್ತಿನ ಬಹಳ ಅಪರೂಪವಾದ ತಾಣಗಳಿಗೆ ಪ್ರವಾಸಿಗಳನ್ನು ಕರೆಯೊಯ್ಯುತ್ತಾರೆ.
ಸದ್ಯಕ್ಕೆ ಈ ದ್ವೀಪವು ಸ್ವಾಯತ್ತತೆಯನ್ನು ಪಡೆದುಕೊಂಡಿಲ್ಲ. ಈಗಲೂ ಬೆಲೀಜ್ನ ಭಾಗವಾಗಿಯೇ ಇದೆ. ಆದರೆ, ಅದರ ಮಾಲೀಕರು ಪ್ರತ್ಯೇಕ ಧ್ವಜ ಹಾಗೂ ಸಂವಿಧಾನವನ್ನು ರಚಿಸಿಕೊಂಡಿದ್ದಾರೆ. ಪ್ರತಿ ಹೂಡಿಕೆದಾರರು ಕೂಡ ಈ ಪ್ರಜಾಪ್ರಭುತ್ವದ ಭಾಗವಾಗಿದ್ದು, ಯಾವುದೇ ನಿರ್ಧಾರಗಳಿಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಕಡಲ್ಕೊರೆತ ತಪ್ಪಿಸುವುದಕ್ಕೆ ಈ ದ್ವೀಪದ ಸುತ್ತಲೂ ತಡೆಗೋಡೆಯನ್ನು ನಿರ್ಮಿಸುವ ನಿರ್ಧಾರ ಕೂಡ ಮಾಡಿಕೊಂಡಿದ್ದಾರೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications