ಬಡವರಿಗಾಗಿ ಸ್ಲಂ ಬೋರ್ಡ್‌ನಿಂದ 36,789 ಮನೆ ಮಂಜೂರು

ಬೆಂಗಳೂರು, ಮಾರ್ಚ್‌ 4: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಪೂರ್ವ ಬೆಂಗಳೂರಿನ ಕೆಆರ್ ಪುರಂನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡವರಿಗೆ 36,789 ಮನೆಗಳನ್ನು ಮಂಜೂರು ಮಾಡಿದೆ.

ಈ ಮನೆಗಳು ರಾಜ್ಯಾದ್ಯಂತ ಇದೆ ಎಂದು ವಸತಿ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಅವರು ಹೇಳಿದರು, ವಸತಿ ಯೋಜನೆಯ ಪ್ರತಿಯೊಬ್ಬ ಫಲಾನುಭವಿಯ ಪಾಲು ಸರ್ಕಾರವು 5 ಲಕ್ಷ ರೂ. ನೀಡಿದೆ ಎಂದು ತಿಳಿಸಿದರು.

ಬಡವರಿಗಾಗಿ ಸ್ಲಂ ಬೋರ್ಡ್‌ನಿಂದ 36,789 ಮನೆ ಮಂಜೂರು

ಅನೇಕ ಫಲಾನುಭವಿಗಳು ತಮ್ಮ ಪಾಲನ್ನು ಪಾವತಿಸಲು ಸಾಧ್ಯವಾಗದ ಕಾರಣ ಸರ್ಕಾರವು ವೆಚ್ಚವನ್ನು ಭರಿಸಲು ನಿರ್ಧರಿಸಿದೆ ಎಂದು ಖಾನ್ ಹೇಳಿದರು. ಎಲ್ಲಾ ಫಲಾನುಭವಿಗಳ ಕಂತು ಪಾವತಿಸಲು 6,170 ಕೋಟಿ ರೂಪಾಯಿ ವೆಚ್ಚವಾಗಲಿದೆ. ಮೊದಲ ಕಂತಾಗಿ 500 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ ಎಂದರು.

ಮಂಡಳಿಯು ಮುಂದಿನ ವರ್ಷ 1,80,253 ಮನೆಗಳನ್ನು ಮಂಜೂರು ಮಾಡಲು ಯೋಜಿಸಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಳ್ಳಲು 1.54 ಲಕ್ಷ ಸಹಾಯಧನ ನೀಡಿದ್ದರೆ, 1.38 ಲಕ್ಷ ಜಿಎಸ್‌ಟಿ ಕಡಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಎಸ್‌ಟಿ ಮನ್ನಾ ಮಾಡುವಂತೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+