ಬೆಂಗಳೂರು, ಜನವರಿ 23: ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಪಕ್ಕದಲ್ಲಿ ಎಕಾನಮಿ ಕ್ಲಾಸ್ನಲ್ಲಿ ಕುಳಿತು ಪ್ರಯಾಣಿಸಿದ್ದನ್ನು ಕಂಡು ಆಶ್ಚರ್ಯಚಕಿತರಾದರು.
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಎಷ್ಟು ಡೌನ್ ಟು ಅರ್ಥ್ ಮತ್ತು ಅಪ್ರೋಚ್ಬಲ್ ಎಂದು ಅವರು ಪುಳಕಿತರಾದರು. ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ನರೇನ್ ಕೃಷ್ಣ ಎಂಬ ವಾಣಿಜ್ಯೋದ್ಯಮಿ ನಾರಾಯಣ ಮೂರ್ತಿ ಜೊತೆ ತಮ್ಮ ಅನಿರೀಕ್ಷಿತ ಭೇಟಿಯ ಕುರಿತು ಲಿಂಕ್ಡ್ಇನ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ಎಕಾನಮಿ ಕ್ಲಾಸ್ ಸೀಟನ್ನು ಹಂಚಿಕೊಳ್ಳುವ ಅನಿರೀಕ್ಷಿತ ಪ್ರಯಾಣದ ಅನುಭವವನ್ನು ಅವರು ಬರೆದಿದ್ದಾರೆ.

ಕೋಟ್ಯಾಧಿಪತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾನ್ಯವಾಗಿ ತಮ್ಮ ಹಳೆಯ ಮಾರುತಿ ಆಲ್ಟೊದಲ್ಲಿ ಬೆಂಗಳೂರಿನ ಸುತ್ತಲೂ ಪ್ರಯಾಣಿಸುತ್ತಾರೆ. "ನಾನು ಪ್ರಯಾಣಿಸಿದ ಕೆಲವೇ ಗಂಟೆಗಳಲ್ಲಿ ಅವರೊಂದಿಗೆ ಅನೇಕ ವಿಷಯಗಳನ್ನು ಚರ್ಚಿಸಿದೆ. ಎಐನೊಂದಿಗಿನ ಭವಿಷ್ಯದ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮುಂದೆ ಚೀನಾವನ್ನು ಸಹ ಮೀರಿಸುತ್ತಾರೆ ಮತ್ತು ನಿರೀಕ್ಷೆಗಳನ್ನು ನಿರ್ವಹಿಸುತ್ತಾರೆ. ಒತ್ತಡದಿಂದ ಮತ್ತು ಕಂಪನಿಯನ್ನು ನಿರ್ಮಿಸುವಾಗ ವೈಫಲ್ಯಗಳ ಮೂಲಕ ಕಲಿಯುತಿದ್ದೇನೆ" ಎಂದು ಕೃಷ್ಣ ಬರೆದಿದ್ದಾರೆ.
ನಾರಾಯಣ ಮೂರ್ತಿ ಅವರು ಜೀವನದಲ್ಲಿ ನಿರ್ಲಿಪ್ತತೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಇನ್ಫೋಸಿಸ್ ಪ್ರಯಾಣದ ನಿದರ್ಶನಗಳನ್ನು ಹೇಳಿದರು. ಹೆಚ್ಚಿನ ಪ್ರಯತ್ನಗಳನ್ನು ಮಾಡಿದರೂ ಕೆಲವು ಒಪ್ಪಂದಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ಅವರು ಫ್ರೆಂಚ್ ಮೈಕ್ರೋಬಯಾಲಜಿಸ್ಟ್ ಲೂಯಿಸ್ ಪಾಶ್ಚರ್ ಅವರ ಮಾತುಗಳನ್ನು ಉಲ್ಲೇಖಿಸಿ, ಅವಕಾಶವು ಸಿದ್ಧವಾದ ಮನಸ್ಸನ್ನು ಬೆಂಬಲಿಸುತ್ತದೆ" ಎಂದರು ಎಂದು ಕೃಷ್ಣ ಬರೆದಿದ್ದಾರೆ.
ಕೃತಕ ಬುದ್ಧಿಮತ್ತೆಯ ಉದಯದ ಕುರಿತು ನಾರಾಯಣ ಮೂರ್ತಿ ಕೃಷ್ಣ ಅವರೊಂದಿಗೆ ಮಾತನಾಡಿದರು. ಮುಂಬರುವ ವರ್ಷಗಳಲ್ಲಿ ಎಐ ಮಾನವ ಉತ್ಪಾದಕತೆಯನ್ನು ಘಾತೀಯವಾಗಿ ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು. "ಎಐ ವಿವಿಧ ಕ್ಷೇತ್ರಗಳಲ್ಲಿ ಮಾನವ ಉತ್ಪಾದಕತೆಯನ್ನು 10-100x ಹೇರಳವಾಗಿ ಹೆಚ್ಚಿಸುತ್ತದೆ ಎಂಬ ಅವರ ನಂಬಿಕೆಯು ನನ್ನನ್ನು ಆಶ್ಚರ್ಯವನ್ನುಂಟು ಮಾಡಿದೆ. ಅವರ ಪ್ರಕಾರ, ಮುಂಬರುವ ವರ್ಷಗಳಲ್ಲಿ ನಾವೀನ್ಯತೆಯ ವೇಗವು ಕಳೆದ ದಶಕವನ್ನು ಮೀರಿಸುತ್ತದೆ. ಈ ಸ್ಮರಣೆಯನ್ನು ದೀರ್ಘಕಾಲದವರೆಗೆ ನನ್ನ ಜೊತೆ ಬಹಳ ಬಲವಾಗಿ ಸಾಗಿಸುತ್ತದೆ" ಎಂದರು.


Click it and Unblock the Notifications