For Quick Alerts
ALLOW NOTIFICATIONS  
For Daily Alerts

ಅದಾನಿ ಗ್ರೂಪ್‌ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್‌ಒ- ಕಾರಣ ಇಲ್ಲಿದೆ

ಅದಾನಿ ಗ್ರೂಪ್‌ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಿದೆ ಎಂದು ಅದಾನಿ ಗ್ರೂಪ್ ಸಿಎಫ್‌ಒ ಹೇಳಿದ್ದಾರೆ. ಈ ಎರಡೂ ಘಟನೆಗಳನ್ನು ಅವರು ಹೋಲಿಕೆ ಮಾಡಿದ್ದೇಕೆ ಎಂಬುದರ ಕಾರಣ ಇಲ್ಲಿದೆ. ಓದಿ.

|

ಮುಂಬೈ, ಜನವರಿ 30: ಅದಾನಿ ಗ್ರೂಪ್‌ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಿದೆ ಎಂದು ಅದಾನಿ ಗ್ರೂಪ್‌ನ ಹಿರಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಅವರು ಮಿಂಟ್‌ ಪತ್ರಿಕೆಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಈ ಮಾತುಗಳನ್ನು ಆಡಿದ್ದಾರೆ. ಅದಾನಿ ಗ್ರೂಪ್ ಕುರಿತ ಯುಎಸ್ ಶಾರ್ಟ್-ಸೆಲ್ಲರ್ ವರದಿಯು ದೇಶ ಮತ್ತು ಅದರ ಸಂಸ್ಥೆಗಳ ಮೇಲಿನ 'ಲೆಕ್ಕಾಚಾರದ ದಾಳಿ' ಆಗಿದೆ ಎಂದು ಹೇಳಿದ್ದಾರೆ.

ಕಳೆದ ವಾರ ಹಿಂಡೆನ್‌ಬರ್ಗ್ ವರದಿಯು ಕಲ್ಲಿದ್ದಲು-ಬಂದರುಗಳ ಅದಾನಿ ಗ್ರೂಪ್‌ನ ಹೆಚ್ಚಿನ ಸಾಲದ ಪ್ರಮಾಣ ಹಾಗೂ ಕಡಲಾಚೆಯ ಘಟಕಗಳ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆವಾಗಿನಿಂದ ಅದಾನಿ ಅವರ ಏಳು ಪಟ್ಟಿಮಾಡಿದ ಕಂಪನಿಗಳು ಒಟ್ಟು $65 ಶತಕೋಟಿ ಕಳೆದುಕೊಂಡಿವೆ. ಆದರೆ, ಹಿಂಡೆನ್‌ಬರ್ಗ್ ವರದಿಯನ್ನು ಅದಾನಿ ಗ್ರೂಪ್‌ ಅಲ್ಲಗಳೆದಿದೆ. ಮಾಲೀಕ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಿಂದ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈ ಕುರಿತು ಮಾತನಾಡಿರುವ ಅದಾನಿ ಗ್ರೂಪ್‌ನ ಹಣಕಾಸು ಮುಖ್ಯಸ್ಥ ಜುಗೇಶಿಂದರ್ ಸಿಂಗ್, 'ಇದು ಕೇವಲ ಯಾವುದೇ ನಿರ್ದಿಷ್ಟ ಕಂಪನಿಯ ಮೇಲಿನ ಅನಗತ್ಯ ದಾಳಿಯಲ್ಲ. ಭಾರತದ ಮೇಲಿನ ನಿರ್ಧಿಷ್ಟ ದಾಳಿ. ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟದ ಮೇಲಿನ ಲೆಕ್ಕಾಚಾರದ ದಾಳಿಯಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಿದೆ'

ಅದಾನಿ ಗ್ರೂಪ್‌ನ ಹಣಕಾಸು ಮುಖ್ಯಸ್ಥರಾಗಿರುವ ಜುಗೇಶಿಂದರ್ ಸಿಂಗ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ್ದಾರೆ.

ಪಂಜಾಬ್‌ನ ಅಮೃತಸರ ನಗರದಲ್ಲಿ ಬ್ರಿಟಿಷರ ಆಡಳಿತದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಭಾರತೀಯ ಹೂಡಿಕೆದಾರರ ವರ್ತನೆಯನ್ನು ಜುಗೇಶಿಂದರ್ ಸಿಂಗ್ ಹೋಲಿಸಿದ್ದಾರೆ.

ಏಪ್ರಿಲ್ 13, 1919 ರಂದು, ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ನಿರಾಯುಧ ಭಾರತೀಯರ ಮೇಲೆ ಗುಂಡು ಹಾರಿಸಲು ಬ್ರಿಟಿಷ್ ಅಧಿಕಾರಿಯೊಬ್ಬರು ಸುಮಾರು 50 ಭಾರತೀಯ ಸೇನೆಯ ಸೈನಿಕರಿಗೆ ಆದೇಶ ನೀಡಿದ್ದರು. ಅಧಿಕೃತ ದಾಖಲೆಯ ಪ್ರಕಾರ, ಈ ದುರ್ಘಟನೆಯಲ್ಲಿ ಕನಿಷ್ಠ 379 ಜನರು ಮೃತಪಟ್ಟಿದ್ದರು. ಭಾರತೀಯರ ವಿರುದ್ಧ ಭಾರತೀಯರನ್ನೇ ಎತ್ತಿ ಕಟ್ಟಲಾಯಿತು ಎಂದು ಅವರು ಹೇಳಿದ್ದಾರೆ.

'ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಿದೆ'

'ಪಂಜಾಬ್‌ನ ಜಲಿಯನ್‌ ವಾಲಾ ಬಾಗ್‌ ಘಟನೆಯಲ್ಲಿ, ಒಬ್ಬ ಆಂಗ್ಲ ಅಧಿಕಾರಿ ಮಾತ್ರ ಆದೇಶವನ್ನು ನೀಡಿದರು. ಭಾರತೀಯರೇ ಆಗಿದ್ದ ಪೊಲೀಸ್‌ ಅಧಿಕಾರಿಗಳು ಇತರ ಭಾರತೀಯರ ಮೇಲೆ ಗುಂಡು ಹಾರಿಸಿದರು' ಎಂದು ಸೋಮವಾರ ಪ್ರಕಟವಾದ 'ಮಿಂಟ್' ಸಂದರ್ಶನದಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಮೆರಿಕ ಮೂಲದ ಹಿಂಡೆನ್‌ಬರ್ಗ್ ವರದಿಯನ್ನು ಭಾರತದ ಷೇರು ಮಾರುಕಟ್ಟೆ ಏಕೆ ನಂಬುತ್ತದೆ ಎಂದು ಕೇಳಿದಾಗ ಅವರು ಈ ಉತ್ತರವನ್ನು ನೀಡಿದ್ದಾರೆ.

'ಹಾಗಾದರೆ ಭಾರತೀಯರ ವರ್ತನೆಯಿಂದ ನನಗೆ ಆಶ್ಚರ್ಯವಾಗಿದೆಯೇ? ಇಲ್ಲ' ಎಂದೂ ಅವರು ತಿಳಿಸಿದ್ದಾರೆ.

ಹಿಂಡೆನ್‌ಬರ್ಗ್ ವರದಿಯಲ್ಲಿರುವ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಿದೆ'

ಹಿಂಡೆನ್‌ಬರ್ಗ್ ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ, ಅದಾನಿ ಗ್ರೂಪ್ 'ಮೂಲಭೂತ ಸಮಸ್ಯೆಗಳಿಂದ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಬದಲಿಗೆ ರಾಷ್ಟ್ರವಾದದ ನಿರೂಪಣೆಯನ್ನು ಹುಟ್ಟು ಹಾಕುತ್ತಿದೆ' ಎಂದು ಅವರು ತಿಳಿಸಿದ್ದಾರೆ.

'ನಿರ್ಧಿಷ್ಟವಾಗಿ ಹೇಳುವುದಾದರೆ, ಅದಾನಿ ಗ್ರೂಪ್ ತನ್ನ ಉಲ್ಕಾಪಾತದ ಏರಿಕೆ ಮತ್ತು ಅದರ ಅಧ್ಯಕ್ಷ ಗೌತಮ್ ಅದಾನಿಯವರ ಸಂಪತ್ತನ್ನು ಭಾರತದ ಯಶಸ್ಸಿನೊಂದಿಗೆ ಸಂಯೋಜಿಸಲು ಅದಾನಿ ಗ್ರೂಪ್‌ ಯತ್ನಿಸಿದೆ' ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ.

ಗೌತಮ್‌ ಅದಾನಿ ಇಡೀ ಭಾರತವನ್ನು ಪ್ರತಿನಿಧಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷದ ಶಾಸಕ ಜವಾಹರ್ ಸಿರ್ಕಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ: "ಅದಾನಿ = ಭಾರತ ಯಾವಾಗಿನಿಂದ?" ಎಂದು ಪ್ರಶ್ನಿಸಿದ್ದಾರೆ.

'ಭಾರತವೇ ಮೋದಿಜಿ, ಮೋದಿಯೇ ಭಾರತ, ಭಾರತ ಅದಾನಿ ಗ್ರೂಪ್‌, ಅದಾನಿ ಗ್ರೂಪ್‌ ಭಾರತ, ಭಾರತವೇ ಬಿಜೆಪಿ, ಬಿಜೆಪಿಯೇ ಭಾರತ, ಭಾರತವೆಂದರೆ ಷೇರು ಮಾರುಕಟ್ಟೆ, ಷೇರು ಮಾರುಕಟ್ಟೆಯೇ ಭಾರತ, ನವ ಭಾರತದಲ್ಲಿ ಭಾರತವನ್ನು ಪಟ್ಟಿ ಮಾಡಲು ದಯವಿಟ್ಟು ನನಗೆ ಸಹಾಯ ಮಾಡಿ' ಎಂದು ಶಿವಸೇನೆ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚುತುರ್ವೇದಿ ಟ್ವೀಟ್‌ ಮಾಡಿದ್ದಾರೆ.

ಅದಾನಿ ಪ್ರಸರಣ, ಅದಾನಿ ಅನಿಲ, ಅದಾನಿ ಪವರ್, ಅದಾನಿ ವಿಲ್ಮರ್ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ & SEZ, ಸೇರಿದಂತೆ ಹಲವು ಕಂಪನಿಗಳನ್ನು ಅದಾನಿ ಗ್ರೂಪ್‌ ಒಳಗೊಂಡಿದೆ.

English summary

Adani Group CFO says Hindenburg Research similar to Jallianwala Bagh massacre

The Adani Group CFO said the Hindenburg report was like the colonial-era massacre of Jallianwala Bagh,
Story first published: Monday, January 30, 2023, 17:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X