ಭಾರತ ಮೂಲದ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆ ಮತ್ತು ದೇಶದ ಅತಿದೊಡ್ಡ ವ್ಯಾಪಾರ ಘಟಕಗಳಲ್ಲಿ ಒಂದಾಗಿರುವ ಅದಾನಿ ಗ್ರೂಪ್ ಈ ವರ್ಷದ ಜನವರಿಯಿಂದ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದೆ. ಎನರ್ಜಿ, ಸಂಪನ್ಮೂಲಗಳು, ಲಾಜಿಸ್ಟಿಕ್ಸ್, ಅಗ್ರಿಬಿಸಿನೆಸ್, ರಿಯಲ್ ಎಸ್ಟೇಟ್ ಮತ್ತು ಹಣಕಾಸು ಸೇವೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಅದಾನಿ ಸಮೂಹವು ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ನೇತೃತ್ವದಲ್ಲಿದೆ.
ಅದಾನಿ ಗ್ರೂಪ್ ಇತ್ತೀಚೆಗೆ ಭಾರೀ ಚರ್ಚೆಗೆ ಒಳಗಾಗಿರುವುದು ಒಂದು ಸಣ್ಣ ವಿಚಾರದಿಂದ ಏನಲ್ಲ. ಗ್ರೂಪ್ ಅತೀ ಗಂಭೀರವಾದ ಆರೋಪವನ್ನು ಎದುರಿಸುತ್ತಿದೆ. ಇದು ಪ್ರಸ್ತುತ ಸಂಪೂರ್ಣ ಭಾರತದ ಹಣಕಾಸು ಸ್ಥಿತಿಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಲ್ಲಂತಹ ಒಂದು ದೊಡ್ಡ ಆರೋಪವಾಗಿದೆ. ಭಾರತದ ಮೇಲೆ ಅದಾನಿ ಗ್ರೂಪ್ನ ಈ ವಿವಾದಗಳ ಪ್ರಭಾವದ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಓದಿ....

ಮೊದಲನೆಯ ಗೊಂದಲ
ಮೊದಲನೆಯದಾಗಿ, ಅದಾನಿ ಗ್ರೂಪ್ನ ಸಂಸ್ಥಾಪಕ ಗೌತಮ್ ಅದಾನಿ ಸಂಪತ್ತು ತ್ವರಿತವಾಗಿ ಏರಿಕೆಯಾದ ಬಗ್ಗೆ ಕಳವಳಗಳಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕವಾಗಿ ಆರ್ಥಿಕ ಕುಸಿತ ಉಂಟಾಗಿದೆ. ಆದರೆ ಈ ನಡುವೆಯೂ 2020 ರಲ್ಲಿ ಗೌತಮ್ ಅದಾನಿ ನಿವ್ವಳ ಆದಾಯವು ಗಗನಕ್ಕೇರಿದೆ. ಈ ಹಠಾತ್ ಆದಾಯ ಏರಿಕೆ ಆಶ್ಚರ್ಯಕ್ಕೆ ಕಾರಣವಾಗಿದೆ. ಹಾಗೆಯೇ ಸಂಸ್ಥೆಯಲ್ಲಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಕಾರ್ಪೊರೇಟ್ ಆಡಳಿತದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.
ಸರ್ಕಾರ ಮತ್ತು ಅದಾನಿ ಗ್ರೂಪ್
ಎರಡನೆಯದಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಮತ್ತು ಅದಾನಿ ಗ್ರೂಪ್ನಂತಹ ದೊಡ್ಡ ಸಂಸ್ಥೆಗಳ ನಡುವಿನ ನಿಕಟ ಸಂಬಂಧಗಳು ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ದುರ್ಬಲಗೊಳಿಸುತ್ತಿವೆ ಎಂಬ ವಾದವಾಗಿದೆ. ಸರ್ಕಾರ ಹಾಗೂ ಈ ದೊಡ್ಡ ಸಂಸ್ಥೆಗಳ ನಡುವಿನ ಅತೀ ನಿಕಟ ಸಂಬಂಧವೇ ಪ್ರಶ್ನೆಗೆ ಕಾರಣವಾಗಿದೆ. ಸರ್ಕಾರದ ಕೆಲವು ನೀತಿಗಳು ದೊಡ್ಡ ಸಂಸ್ಥೆಗಳಿಗೆ ಸಹಾಯವಾಗುವಂತೆ, ಸಣ್ಣ ಸಂಸ್ಥೆಗಳಿಗೆ ತೊಂದರೆ ಉಂಟು ಮಾಡುವಂತಿದೆ ಎಂಬುವುದು ವಿಮರ್ಶಕರ ಆರೋಪವಾಗಿದೆ.

ಮೂರನೆಯ ಗೊಂದಲ
ಮೂರನೆಯದಾಗಿ, ಆಸ್ಟ್ರೇಲಿಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಯಂತಹ ಹಲವಾರು ವಿವಾದಾತ್ಮಕ ಯೋಜನೆಗಳಲ್ಲಿ ಅದಾನಿ ಗ್ರೂಪ್ನ ಒಳಗೊಳ್ಳುವಿಕೆಯ ಬಗ್ಗೆ ಪರಿಸರ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಅದಾನಿ ಗ್ರೂಪ್ ಒಳಗೊಂಡಿರುವ ಈ ಯೋಜನೆಗಳು ಜಾಗತಿಕವಾಗಿ ಹವಾಮಾನ ಬದಲಾವಣೆಗೆ ಪ್ರಭಾವ ಉಂಟು ಮಾಡುವ ಗಂಭೀರ ಸ್ಥಿತಿಗೆ ಕಾರಣವಾಗಿದೆ.
ಅದಾನಿ ಸಂಸ್ಥೆಯ ಸಾಲ, ಆರ್ಥಿಕ ಅಪಾಯ
ಇನ್ನು ಅಂತಿಮವಾಗಿ, ಆದರೆ ಅತೀ ಮುಖ್ಯವಾಗಿ ಅದಾನಿ ಗ್ರೂಪ್ನ ಹೆಚ್ಚಿನ ಸಾಲದ ಮಟ್ಟ ಅತೀ ಅಪಾಯಕಾರಿಯಾಗಿದೆ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ವಿಶೇಷವಾಗಿ ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳನ್ನು ಗಮನಿಸಿದರೆ ಅಪಾಯಕಾರಿಯಾಗಿದೆ ಎಂಬ ವಾದವಿದೆ. ಇಂತಹ ಸಂಸ್ಥೆಗಳ ಸಾಲಗಳನ್ನು ಪೂರೈಸುವ ಸಾಮರ್ಥ್ಯವು ಈ ಸಂಸ್ಥೆಗಳ ಒಟ್ಟಾರೆ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಈ ಸಂಸ್ಥೆಗೆ ಸಾಲ ನೀಡಿದ ಬ್ಯಾಂಕ್ಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಮೇಲಿನ ಎಲ್ಲ ಅಂಶಗಳನ್ನು ನಾವು ನೋಡಿದಾಗ ಇತ್ತೀಚೆಗೆ ಅದಾನಿ ಗ್ರೂಪ್ ಕಡೆಗೆ ಏಕೆ ಅಧಿಕ ಗಮನ ಹರಿಸಲಾಗುತ್ತಿದೆ ಎಂಬುವುದು ಸ್ಪಷ್ಟವಾಗುತ್ತದೆ. ಅದಾನಿ ಗ್ರೂಪ್ನ ವಿರುದ್ಧದ ಈ ಆರೋಪವು ಸಾಬೀತಾದರೆ ಆಂತರಿಕವಾಗಿ ಮಾತ್ರವಲ್ಲದೆ ಬಾಹ್ಯವಾಗಿಯೂ ಅತೀ ಅಧಿಕ ಪ್ರಭಾವ ಬೀರುತ್ತದೆ. ದೇಶದ ಅತೀ ದೊಡ್ಡ ಬ್ಯಾಂಕ್ಗಳು ಅದಾನಿ ಗ್ರೂಪ್ಗೆ ಸಾಲ ನೀಡಿರುವ ಕಾರಣದಿಂದಾಗಿ ಭಾರತದ ಆರ್ಥಿಕ ಭವಿಷ್ಯದ ಮೇಲೆ ಅತೀ ಹೆಚ್ಚಿನ ಪ್ರಭಾವ ಉಂಟು ಮಾಡುತ್ತದೆ.
ಉದ್ದೇಶಿತ ಪರಿಶೀಲನೆ
ಜನವರಿ 2021 ರಿಂದ, ಅದಾನಿ ಸಮೂಹದ ಕಂಪನಿಗಳು ನಿಯಂತ್ರಕ ಸಂಸ್ಥೆಗಳು ಮತ್ತು ಮಾಧ್ಯಮಗಳಿಂದ ಭಾರೀ ಪರಿಶೀಲನೆಗೆ ಒಳಗಾಗುತ್ತಿದೆ. ಅದಾನಿ ಷೇರುಗಳಲ್ಲಿನ ತ್ವರಿತ ಹೆಚ್ಚಳವು ಈ ಎಲ್ಲ ಆರೋಪಕ್ಕೆ ಕಾರಣವಾಗಿದೆ. ಈ ಈ ಆರೋಪಗಳು ಗುಂಪಿನೊಳಗೆ ಕಾರ್ಪೊರೇಟ್ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಿಯಂತ್ರಕ ಸಂಸ್ಥೆಗಳ ಪ್ರತಿಕ್ರಿಯೆ
ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಸೆಬಿ (ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಕೆಲವು ಅದಾನಿ ಸಮೂಹ ಕಂಪನಿಗಳ ಷೇರುಗಳಲ್ಲಿ ಕಂಡುಬರುವ ಅಸಾಮಾನ್ಯ ವ್ಯಾಪಾರದ ಮಾದರಿಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಇದಲ್ಲದೆ ಎನ್ಎಸ್ಡಿಎಲ್ (ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್) ಈ ಕಂಪನಿಗಳಲ್ಲಿ ತಮ್ಮ ಆಸ್ತಿಯ ಗಮನಾರ್ಹ ಹೂಡಿಕೆ ಹೊಂದಿರುವ ಮೂರು ವಿದೇಶಿ ಫಂಡ್ಗಳನ್ನು ಸ್ಥಗಿತಗೊಳಿಸಿದೆ.
ಹೂಡಿಕೆದಾರರ ಭಾವನೆಯ ಮೇಲೆ ಬೀರುವ ಪ್ರಭಾವ
ಈ ಬೆಳವಣಿಗೆಗಳು ಹಲವಾರು ಅದಾನಿ ಸಂಸ್ಥೆಗಳ ಷೇರುಗಳ ಬೆಲೆಯಲ್ಲಿ ತೀವ್ರ ಏರಿಳಿತಕ್ಕೆ ಕಾರಣವಾಗಿದೆ. ಇದು ಹೂಡಿಕೆದಾರರ ಭಾವನೆ ಮೇಲೆ ಪ್ರಭಾವ ಬೀರಿದೆ. ಕೆಲವು ಹೂಡಿಕೆದಾರರು ಅದಾನಿ ಗ್ರೂಪ್ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಒಂದು ಅವಕಾಶವಿದು ಎಂದುಕೊಂಡರೆ ಇನ್ನು ಹಲವಾರು ಮಂದಿ ಆತಂಕಕ್ಕೆ ಒಳಗಾಗಿದ್ದಾರೆ, ಸಂಸ್ಥೆಯ ಷೇರು ಖರೀದಿಯಿಂದ ದೂರ ಉಳಿಯುತ್ತಿದ್ದಾರೆ.
ಕಾರ್ಪೊರೇಟ್ ಆಡಳಿತಕ್ಕೆ ಪರಿಣಾಮಗಳು
ಈ ಆರೋಪಗಳು, ವಿವಾದಗಳು ಒಂದು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ನಿಯಂತ್ರಕರ ಗಮನ ಎಷ್ಟು ಮುಖ್ಯ ಎಂಬುವುದನ್ನು ಸಾಬೀತುಪಡಿಸುತ್ತದೆ. ಹೂಡಿಕೆದಾರರ ವಿಶ್ವಾಸವನ್ನು ಸಂಸ್ಥೆಯು ಎಷ್ಟು ಬೇಗ ಕಳೆದುಕೊಳ್ಳಬಹುದು ಎಂಬುವುದಕ್ಕೆ ಈ ಒಂದು ವಿವಾದ ಎತ್ತಿ ತೋರಿಸುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications