ಅದಾನಿ ಪವರ್ ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಅನ್ನು ಸರಬರಾಜು ಮಾಡಲಿದೆ ಎಂದು ವರದಿಯಾಗಿದೆ. ಈ ಹಿಂದೆ ಬಾಂಗ್ಲಾ ನಿರ್ವಹಣೆ ಮಾಡುವ ವಿದ್ಯುತ್ ಅಭಿವೃದ್ಧಿ ಮಂಡಳಿಯಾದ ಆದ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿ (ಬಿಡಿಡಿಬಿ) ಜಾರ್ಖಂಡ್ನಲ್ಲಿರುವ ತನ್ನ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಅದಾನಿ ಪವರ್ನೊಂದಿಗೆ ಮಾಡಿಕೊಂಡ ವಿದ್ಯುತ್ ಖರೀದಿ ಒಪ್ಪಂದವನ್ನು (ಪಿಪಿಎ) ಪರಿಷ್ಕರಿಸಲು ಹೇಳಿದೆ ಎಂದು ವರದಿಯಾಗಿದೆ.
"ಬಾಂಗ್ಲಾದೇಶದ ಕಲ್ಲಿದ್ದಲು-ಚಾಲಿತ ಸ್ಥಾವರಗಳಿಂದ ಅದೇ ಬೆಲೆಗೆ ಅದಾನಿ ತನ್ನ ಸ್ಥಾವರಗಳಿಗೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ," ಎಂದು ಅದಾನಿ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಬಾಂಗ್ಲಾದೇಶ ಮೂಲದ ಪ್ರೋಥೋಮ್ ಅಲೋ ಪತ್ರಿಕೆ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. "ಬಾಂಗ್ಲಾದೇಶದ ಅದಾನಿ ಗುಂಪಿನ ಉನ್ನತ ಅಧಿಕಾರಿಯೊಬ್ಬರು ಪ್ರೋಥೋಮ್ ಅಲೋಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ," ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಬಾಂಗ್ಲಾದೇಶದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಬಾಂಗ್ಲಾದೇಶ ನಿರ್ವಹಣೆ ಮಾಡುವ ಪವರ್ ಡೆವಲಪ್ಮೆಂಟ್ ಬೋರ್ಡ್ (ಪಿಡಿಬಿ) ಈ ತಿಂಗಳ ಆರಂಭದಲ್ಲಿ ಅದಾನಿ ಪವರ್ ಲಿಮಿಟೆಡ್ನೊಂದಿಗೆ 2017 ರ ವಿದ್ಯುತ್ ಖರೀದಿ ಒಪ್ಪಂದ ಪರಿಷ್ಕರಿಸಲು ಪ್ರಯತ್ನಿಸಿತ್ತು. ಏಕೆಂದರೆ ಕಲ್ಲಿದ್ದಲು-ಉತ್ಪಾದಿತ ವಿದ್ಯುತ್ನ ಬೆಲೆ ತುಂಬಾ ದುಬಾರಿಯಾಗಿದೆ. ಇನ್ನು ಭಾರತದ ಜಾರ್ಖಂಡ್ನಲ್ಲಿರುವ ಅದಾನಿ ಸ್ಥಾವರಕ್ಕಾಗಿ ಖರೀದಿಸಿದ ಕಲ್ಲಿದ್ದಲು ಬೆಲೆ ಹೆಚ್ಚಳದ ಬಗ್ಗೆ ಅದಾನಿ ಪವರ್ ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಧಾನಕ್ಕಾಗಿ ಐದು ಸದಸ್ಯರ ನಿಯೋಗವನ್ನು ಕಳುಹಿಸಿದೆ ಎಂದು ವರದಿಯಾಗಿದೆ.
ಜಾರ್ಖಂಡ್ನ ಗೊಡ್ಡಾ ಜಿಲ್ಲೆಯ 1,600 ಮೆಗಾವ್ಯಾಟ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಭಾರತದಲ್ಲಿ ಎಲ್ಸಿಗಳನ್ನು ತೆರೆಯುವ ವಿಚಾರವಾಗಿ ಅದಾನಿ ಪವರ್ ಮನವಿಯನ್ನು ಮಾಡಿದೆ. ಇದಾದ ಬೆನ್ನಲ್ಲೇ ಬಾಂಗ್ಲಾದೇಶವು ಬೆಲೆ ಪರಿಷ್ಕರಣೆಯನ್ನು ಕೋರಿದೆ ಎಂದು ವರದಿಯಾಗಿದೆ. ಅದಾನಿ ಪವರ್ಗೆ ಬಾಂಗ್ಲಾದೇಶದಿಂದ ಬೇಡಿಕೆಯ ಪಟ್ಟಿ ಲಭ್ಯವಾಗಬೇಕಾಗಿದೆ. ಈ ಬೇಡಿಕೆ ಪಟ್ಟಿಯನ್ನು ಕಲ್ಲಿದ್ದಲು ಆಮದಿನ ವಿರುದ್ಧ ಎಲ್ಸಿಗಳನ್ನು ತೆರೆಯುವ ಮೊದಲು ಭಾರತೀಯ ಅಧಿಕಾರಿಗಳಿಗೆ ಪ್ರಸ್ತುತಪಡಿಸಲಾಗುತ್ತದೆ.
ಬಾಂಗ್ಲಾದೇಶವು ಪ್ರಸ್ತುತ ಭಾರತದಿಂದ 1,160MW ವಿದ್ಯುಚ್ಛಕ್ತಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ 2017 ರ ಒಪ್ಪಂದದ ಪ್ರಕಾರ ಅದಾನಿ ಪವರ್ ಲಿಮಿಟೆಡ್ನಿಂದ 25 ವರ್ಷಗಳವರೆಗೆ ವಿದ್ಯುತ್ ಖರೀದಿಸಲಿದೆ. ಇದು ಈ ವರ್ಷದ ಮಾರ್ಚ್ನಿಂದ ವಿದ್ಯುತ್ ಪಡೆಯುವುದನ್ನು ಪ್ರಾರಂಭಿಸುತ್ತದೆ. ಅದಾನಿ ಗ್ರೂಪ್ನ ಷೇರು ಬೆಲೆಗಳು ಇತ್ತೀಚೆಗೆ ಭಾರೀ ಇಳಿಕೆಯಾಗಿದೆ. ಸಂಸ್ಥೆಯ ವಿರುದ್ಧ ಹಿಂಡನ್ಬರ್ಗ್ ವಂಚನೆಯ ಆರೋಪ ಮಾಡಿದ ಬಳಿಕ ಹೂಡಿಕೆದಾರರಿಗೆ ಭಾರೀ ನಷ್ಟ ಉಂಟಾಗಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications