ಜಾಗತಿಕವಾಗಿ ಉದ್ಯೋಗ ಕಡಿತದ ಪರ್ವ ಮುಂದುವರಿದಿರುವಂತೆ, ಗೂಗಲ್ನ ಮಾತೃ ಕಂಪನಿಯಾದ ಆಲ್ಬಾಬೆಟ್ ಇದೀಗ ತನ್ನ ಪ್ರಧಾನ ಕಚೇರಿಯಲ್ಲಿದ್ದ ಕೆಫೆಟೇರಿಯಾಗಳನ್ನು ಸ್ವಚ್ಚಗೊಳಿಸುವ ರೋಬೋಟ್ಗಳನ್ನು ಕೂಡಾ ಕೆಲಸದಿಂದ ತೆಗೆದು ಹಾಕಿದೆ. ಕಳೆದ ತಿಂಗಳಷ್ಟೇ ಟೆಕ್ ದೈತ್ಯ ಕಂಪೆನಿ 12000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ್ದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಆಲ್ಬಾಬೆಟ್ನ "ಎವರಿಡೇ ರೋಬೋಟ್ಸ್" ಪ್ರಾಜೆಕ್ಟ್ನಡಿ ಗೂಗಲ್ನ ಎಕ್ಸಿಪಿರಿಮೆಂಟ್ ಎಕ್ಸ್ ಲ್ಯಾಬೋರೇಟರಿಯನ್ನು ಸಿಇಒ ಸುಂದರ್ ಪಿಚ್ಚೈ ಮುಚ್ಚಿದ್ದಾರೆ.
ಇದು ಕಂಪನಿಯ ಕೆಫೆಟೇರಿಯಾಗಳನ್ನು ಸ್ವಚ್ಚಗೊಳಿಸಲು ಸಹಾಯ ಮಾಡಲೆಂದು ಒಂದು ಕೈಯ ಹಾಗೂ ಚಕ್ರಗಳನ್ನು ಹೊಂದಿರುವ 100 ರೋಬೋಟ್ಗಳನ್ನು ತರಬೇತುಗೊಳಿಸಿತ್ತು. ಅವುಗಳ ಪೈಕಿ ಗೂಗಲ್ನ ಬೇ ಏರಿಯಾಗಳಲ್ಲಿ ಸೇವೆಗಳಲ್ಲಿ ಉಪಯುಕ್ತ ಕೆಲಸಗಳನ್ನು ಮಾಡುತ್ತಿದ್ದ ಹಲವು ಮೂಲಮಾದರಿ ರೋಬೋಟ್ಗಳನ್ನು ಲ್ಯಾಬ್ಗಳಿಂದ ಬೇರೆಡೆಗೆ ಸಾಗಾಟ ಮಾಡಲಾಗಿದೆ.

ಈ ರೋಬೋಟ್ಗಳು ಟೇಬಲ್ ಕ್ಲೀನ್ ಮಾಡುವುದು, ತ್ಯಾಜ್ಯ ಮತ್ತು ಮರುಬಳಕೆಯ ವಸ್ತುಗಳನ್ನು ಬೇರ್ಪಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದವು. ಕೊವೀಡ್ ಸಾಂಕ್ರಾಮಿಕ ಸಮಯದಲ್ಲಿ ಕಾನ್ಪರೆನ್ಸ್ ರೂಮ್ ಸ್ವಚ್ಚಗೊಳಿಸಲು ಕೂಡಾ ಇವು ಸಹಾಯ ಮಾಡಿದ್ದವು. ರೋಬೋಟ್ ವಿಭಾಗವನ್ನು ಈಗ ಸ್ಥಗಿತಗೊಳಿಸಿರುವುದರಿಂದ ಇದರ ಕೆಲವು ತಂತ್ರಜ್ಞಾನವನ್ನು ಸಂಸ್ಥೆ ತನ್ನ ಇತರ ವಿಭಾಗಗಳಲ್ಲಿ ಬಳಸಿಕೊಳ್ಳಬಹುದು.
ಆಲ್ಫಾಬೆಟ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಕಲಿಕೆಗಾಗಿ ಸಮಗ್ರ ಹಾರ್ಡ್ವೇರ್ ಆಂಡ್ ಸಾಫ್ಟ್ವೇರ್ ಅಭಿವೃದ್ಧಿಗೆ ಹಣ ಖರ್ಚು ಮಾಡಿದ್ದು, ವರ್ಚುವಲ್ನಿಂದ ನಿಜ ಜಗತ್ತಿಗೆ ಜ್ಞಾನವನ್ನು ವರ್ಗಾಯಿಸುವ ಪ್ರಕ್ರಿಯೆಯೂ ಸೇರಿದೆ. ಈ ರೋಬೋಟ್ಗಳು ನಿಧಾನವಾಗಿ ತಮ್ಮ ಸುತ್ತಲಿನ ಪ್ರಪಂಚದ ಗ್ರಹಿಕೆಯನ್ನು ಪಡೆದುಕೊಂಡಿದ್ದವು.
ಜತೆಗೆ ಬಲವರ್ಧನೆಯ ಕಲಿಕೆ, ಸಹಯೋಗದ ಕಲಿಕೆ ಹಾಗೂ ಪ್ರದರ್ಶನದಿಂದ ಕಲಿಕೆಯಂಥ ಮೆಷಿನ್ ಕಲಿಕೆಯ ತಂತ್ರಗಳ ಸಂಯೋಜನೆ ಬಳಸಿಕೊಂಡು ಸಾಮಾನ್ಯ ಕೆಲಸಗಳನ್ನು ಕಾರ್ಯಗತಗೊಳಿಸುವಲ್ಲಿ ಹೆಚ್ಚು ಪ್ರಾವೀಣ್ಯತೆಯನ್ನು ಪಡೆದಿದ್ದವು. ಈ ನಡುವೆ ವೆಚ್ಚವನ್ನು ಮತ್ತಷ್ಟು ಕಡಿಮೆಗೊಳಿಸಲು ಗೂಗಲ್ ತನ್ನ ಕಚೇರಿಗೆ ಮರಳುತ್ತಿರುವ ಉದ್ಯೋಗಿಗಳಲ್ಲಿ ತಮ್ಮ ವರ್ಕ್ ಡೆಸ್ಕ್ಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿತ್ತು. ಆ ಮೂಲಕ ಕಚೇರಿ ಸ್ಥಳಾವಕಾಶವನ್ನು ಹೆಚ್ಚಿಸುವ ಪ್ರಯತ್ನ ಮಾಡಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications