ಭಾರತದ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಡಿಸೆಂಬರ್ 3ರಿಂದ ಜಾರಿಗೊಂಡ ಹೊಸ ಪ್ರಿಪೇಯ್ಡ್ ಯೋಜನೆಗಳಲ್ಲಿದ್ದ ಇತರೆ ನೆಟ್ವರ್ಕ್ ಮೇಲಿನ ಕರೆ ದರಗಳನ್ನು ತೆಗೆದುಹಾಕುವ ಮೂಲಕ ಅನ್ಲಿಮಿಟೆಡ್ ಕರೆಗಳ ಸೌಲಭ್ಯವನ್ನು ಘೋಷಿಸಿದೆ.
ಡಿಸೆಂಬರ್ 3ರಂದು ವೊಡಾಫೋನ್ ಐಡಿಯಾ ಹಾಗೂ ಏರ್ಟೆಲ್ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿತ್ತು. ಹಿಂದೆ ಇದ್ದ ಪ್ರಿಪೇಯ್ಡ್ ಯೋಜನೆಗಳಿಗಿಂತ ಹೆಚ್ಚಿನ ದರ ವಿಧಿಸಿತ್ತು. 28 ದಿನಗಳ ಯೋಜನೆಯಲ್ಲಿ ಇತರೆ ನೆಟ್ವರ್ಕ್ಗೆ 1000 ನಿಮಿಷಗಳ ಉಚಿತ ಕರೆ, 84 ದಿನಗಳ ಯೋಜನೆಯಲ್ಲಿ 3000 ನಿಮಿಷಗಳು, 1 ವರ್ಷದ ಯೋಜನೆಯಲ್ಲಿ 12,000 ನಿಮಿಷಗಳ ಉಚಿತ ಕರೆ ಸೌಲಭ್ಯವಿತ್ತು. ಈ ಮಿತಿ ದಾಟಿದ ನಂತರ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗಿತ್ತು.

'ನಾವು ನಿಮ್ಮನ್ನು ಕೇಳಿದ್ದೇವೆ! ಮತ್ತು ನಾವು ಬದಲಾವಣೆ ಮಾಡುತ್ತಿದ್ದೇವೆ. ನಾಳೆಯಿಂದ ಎಲ್ಲಾ ಅನ್ಲಿಮಿಟೆಡ್ ಯೋಜನೆಗಳಲ್ಲಿ ಇತರೆ ನೆಟ್ವರ್ಕ್ಗೆ ಅನ್ಲಿಮಿಟೆಡ್ ಕರೆಗಳನ್ನು ಆನಂದಿಸಿ. ಯಾವುದೇ ಷರತ್ತುಗಳು ಅನ್ವಯಿಸುವುದಿಲ್ಲ' ಎಂದು ಭಾರತಿ ಏರ್ಟೆಲ್ ಟ್ವೀಟ್ ಮಾಡಿದೆ. ವೊಡಾಫೋನ್ ಐಡಿಯಾ ಕೂಡ ಟ್ವಿಟರ್ನಲ್ಲಿ ಇದೇ ರೀತಿಯ ಆಫರ್ ಘೋಷಿಸಿದೆ.
ಏರ್ಟೆಲ್, ವೊಡಾಫೋನ್ ಐಡಿಯಾ ಡಿಸೆಂಬರ್ 3ರಲ್ಲಿ ಹೊಸ ಪ್ರಿಪೇಯ್ಡ್ ಯೋಜನೆ ಘೋಷಿಸಿದ ಬಳಿಕ ಡಿಸೆಂಬರ್ 6ರಂದು ರಿಲಯನ್ಸ್ ಜಿಯೋ ಕಂಪನಿ ಆಲ್ ಇನ್ ಒನ್ ಪ್ರಿಪೇಯ್ಡ್ ಯೋಜನೆಗಳನ್ನ ಬಿಡುಗಡೆಗೊಳಿಸಿತು. ಗ್ರಾಹಕರಿಗೆ ಶೇಕಡಾ 300ರಷ್ಟು ಪ್ರಯೋಜನ ನೀಡಲಿವೆ ಎಂದು ತಿಳಿಸಿತ್ತು. ಇತರೆ ನೆಟ್ವರ್ಕ್ಗೆ ನಿಗದಿತ ಉಚಿತ ಕರೆಗಳು ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿತು. ಅಲ್ಲದೆ ಬೇರೆ ನೆಟ್ವರ್ಕ್ಗೆ ಹೋಲಿಸಿದರೆ 15 ರಿಂದ 25 ಪರ್ಸೆಂಟ್ ದರ ಕಡಿಮೆ ಇದೆ ಎಂದು ಹೇಳಿಕೊಂಡಿತ್ತು.
ಆದ್ರೀಗ ಏರ್ಟೆಲ್, ವೊಡಾಫೋನ್ ಐಡಿಯಾ ಅನ್ಲಿಮಿಟೆಡ್ ಯೋಜನೆಗಳಲ್ಲಿ ಅನ್ಲಿಮಿಟೆಡ್ ಕರೆ ಸೌಲಭ್ಯ ನೀಡಿರುವುದರಿಂದ ಜಿಯೊ ಕಂಪನಿ ಸ್ವಲ್ಪ ಮಟ್ಟಿಗೆ ತಲೆಕೆಡಿಸಿಕೊಂಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications