ಗೂಗಲ್ ಪೋಷಕ ಸಂಸ್ಥೆಯಾದ ಆಲ್ಫಾಬೇಟ್ ಸೆಲ್ಫ್ ಡ್ರೈವಿಂಗ್ ಟೆಕ್ನಾಲಜಿ ಯುನಿಟ್ ಆದ ವಾಯ್ಮೋದಲ್ಲಿ ಎರಡನೇ ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಈ ವರ್ಷದಲ್ಲಿ ಎರಡನೇ ಹಂತದ ಉದ್ಯೋಗ ಕಡಿತ ಘೋಷಿಸಿದ್ದು, 137 ಜನರನ್ನು ಕೆಲಸದಿಂದ ವಜಾಗೊಳಿಸಿದೆ. ಒಟ್ಟಾಗಿ ಶೇಕಡ 8ರಷ್ಟು ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಜನವರಿಯಲ್ಲಿ 12000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಇತ್ತೀಚೆಗೆ ವಜಾಗೊಳಿಸಿದ 137 ಜನರನ್ನು ಸೇರಿದಂತೆ ಒಟ್ಟಾಗಿ ಸಂಸ್ಥೆಯು 209 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಇಂಜಿನಿಯರ್ಗಳನ್ನು ಕೂಡಾ ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಮುಖ್ಯವಾಗಿ ಈ ಹಿಂದೆ ಹಲವಾರು ಸಂಸ್ಥೆಗಳು ನೀಡಿರುವ ಕಾರಣದಂತೆಯೇ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತ ಮಾಡಲಾಗುತ್ತದೆ. ಆಟೋ ಮತ್ತು ಟೆಕ್ ಇಂಡಸ್ಟ್ರೀಯಲ್ಲಿ ಉದ್ಯೋಗ ಕಡಿತ ನಡೆಯುತ್ತಿರುವಂತೆಯೇ ವಾಯ್ಮೊದಲ್ಲಿ ಉದ್ಯೋಗ ಕಡಿತ ನಡೆದಿದೆ.

ಜಾಗತಿಕವಾಗಿ ಉದ್ಯೋಗ ಕಡಿತದ ಪರ್ವ ಮುಂದುವರಿದಿರುವಂತೆ, ಗೂಗಲ್ನ ಮಾತೃ ಕಂಪನಿಯಾದ ಆಲ್ಬಾಬೆಟ್ ಇದೀಗ ತನ್ನ ಪ್ರಧಾನ ಕಚೇರಿಯಲ್ಲಿದ್ದ ಕೆಫೆಟೇರಿಯಾಗಳನ್ನು ಸ್ವಚ್ಚಗೊಳಿಸುವ ರೋಬೋಟ್ಗಳನ್ನು ಕೂಡಾ ಕೆಲಸದಿಂದ ತೆಗೆದು ಹಾಕಿದೆ. ಕಳೆದ ತಿಂಗಳಷ್ಟೇ ಟೆಕ್ ದೈತ್ಯ ಕಂಪೆನಿ 12000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ್ದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಆಲ್ಬಾಬೆಟ್ನ "ಎವರಿಡೇ ರೋಬೋಟ್ಸ್" ಪ್ರಾಜೆಕ್ಟ್ನಡಿ ಗೂಗಲ್ನ ಎಕ್ಸಿಪಿರಿಮೆಂಟ್ ಎಕ್ಸ್ ಲ್ಯಾಬೋರೇಟರಿಯನ್ನು ಸಿಇಒ ಸುಂದರ್ ಪಿಚ್ಚೈ ಮುಚ್ಚಿದ್ದಾರೆ.
ಗೂಗಲ್ ಇಂಡಿಯಾ 453 ಉದ್ಯೋಗಿಗಳನ್ನು ವಜಾಗೊಳಿಸಿದೆ. ಗೂಗಲ್ ಇಂಡಿಯಾ ಘೋಷಿಸಿದ 453 ಉದ್ಯೋಗ ಕಡಿತವು ಈ ಹಿಂದೆ ಘೋಷಿಸಿದ 12,000 ಉದ್ಯೋಗ ಕಡಿತದಲ್ಲೇ ಸೇರ್ಪಡೆಯಾಗುತ್ತದೆಯೇ, ಬೇರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಹಿಂದೆ ನಡೆದ ಉದ್ಯೋಗ ಕಡಿತಗಳು
ಗೂಗಲ್ ಮಾತ್ರವಲ್ಲ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಅಮೆಜಾನ್ ಸುಮಾರು 18,000 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಅದಕ್ಕೂ ಮುನ್ನ 10 ಸಾವಿರ ಮಂದಿಯನ್ನು ವಜಾಗೊಳಿಸುವ ಘೋಷಣೆ ಮಾಡಿತ್ತು. ಮೆಟಾ ಸಂಸ್ಥೆಯು 13,000 ಮಂದಿಯನ್ನು ವಜಾಗೊಳಿಸಿದೆ. ಮೈಕ್ರೋಸಾಫ್ಟ್ನಲ್ಲಿ ಶೇಕಡ 5ರಷ್ಟು ಅಥವಾ 10,000 ಉದ್ಯೋಗ ಕಡಿತ ನಡೆದಿದೆ.
ಸೇಲ್ಸ್ಫೋರ್ಸ್ನಲ್ಲಿ ಶೇಕಡ 10ರಷ್ಟು ಅಥವಾ 8,000, ಡೆಲ್ನಲ್ಲಿ ಶೇಕಡ 5ರಷ್ಟು ಅಥವಾ 6,650, ಐಬಿಎಂಯಲ್ಲಿ ಶೇಕಡ 2ರಷ್ಟು ಅಥವಾ 3,900, ಎಸ್ಎಪಿನಲ್ಲಿ ಶೇಕಡ 3ರಷ್ಟು ಅಥವಾ 3,000, ಜೂಮ್ನಲ್ಲಿ ಶೇಕಡ 15ರಷ್ಟು ಅಥವಾ 1,300, ಕಾಯಿನ್ಬೇಸ್ನಲ್ಲಿ ಶೇಕಡ 20ರಷ್ಟು ಅಥವಾ 950, ಯಾಹೂವಿನಲ್ಲಿ ಶೇಕಡ 20ರಷ್ಟು ಅಥವಾ 1,600, ಗಿಟ್ಹಬ್ನಲ್ಲಿ ಶೇಕಡ 10ರಷ್ಟು ಅಥವಾ 300 ಉದ್ಯೋಗ ಕಡಿತ ಮಾಡಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications