ಒಬ್ಬೊಬ್ಬರ ಬಯಕೆ ಒಂದೊಂದು ರೀತಿಯದಾಗಿರುತ್ತದೆ. ಕೆಲವರದು ಬಲು ಅಗ್ಗ. ಮತ್ತೆ ಕೆಲವರದು ಪರಮ ದುಬಾರಿ. ಈಗ ಅಮೆರಿಕನ್ Rapper ಲಿಲ್ ಉಜಿ ವರ್ಟ್ ಉದಾಹರಣೆಯನ್ನೇ ಹೇಳುವುದಾದರೆ, ಆತನ ಹಣೆಯ ಮೇಲೊಂದು ಪಿಂಕ್ ಡೈಮಂಡ್ ಅಳವಡಿಸಿಕೊಂಡಿದ್ದು, ದೂರದಿಂದ ನೋಡುವವರಿಗೆ ಇದೇನು ಹೀಗೆ ಹೊಳೆಯುತ್ತಿದೆ ಅಂತಷ್ಟೇ ಅನಿಸುತ್ತದೆ. ಆದರೆ ಅದರ ಬೆಲೆ ಕೇಳಿದಾಗಲೇ ನಿಜವಾಗಲೂ ಗಾಬರಿ ಆಗೋದು.
ಎಂಟಿವಿ ವಿಡಿಯೋ ಮ್ಯೂಸಿಕ್ ಪ್ರಶಸ್ತಿ ವಿಜೇತ Rapper ಲಿಲ್ ಉಜಿ ವರ್ಟ್ ಈ ವಜ್ರಕ್ಕಾಗಿ 2.4 ಕೋಟಿ ಅಮೆರಿಕನ್ ಡಾಲರ್ ಪಾವತಿಸಿದ್ದಾರಂತೆ. ಭಾರತದ ರುಪಾಯಿ ಲೆಕ್ಕದಲ್ಲಿ 143 ಕೋಟಿಗೂ ಹೆಚ್ಚಾಗುತ್ತದೆ. 2017ನೇ ಇಸವಿಯಿಂದಲೂ ಹಣ ನೀಡುತ್ತಾ ಬಂದಿದ್ದಾರೆ ಉಜಿ.
ಅಂದ ಹಾಗೆ ಉಜಿ ನಿಜವಾದ ಹೆಸರು ಸೈಮರ್ ವುಡ್ಸ್. ಪಿಂಕ್ ವಜ್ರವನ್ನು ಹಣೆಯ ಮೇಲೆ ಧರಿಸಿದ ವಿಡಿಯೋವೊಂದನ್ನು ಆತ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, "ಸೌಂದರ್ಯದ ನೋವು" ಎಂಬ ಶೀರ್ಷಿಕೆ ನೀಡಿದ್ದಾರೆ. ಹಣೆಯ ಮೇಲೆ ವಜ್ರವನ್ನು ಹಾಕಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಮೇಲೆ ಆತನನ್ನು ಯಾವ್ಯಾವುದೋ ಮಾರ್ವೆಲ್ ಪಾತ್ರಗಳಿಗೆ ಹೋಲಿಕೆ ಮಾಡಿ, ಕಾಮೆಂಟ್ ಬರುತ್ತಿದೆ.

ನಾವು ಭಾರತೀಯರು. ಆದ್ದರಿಂದ ಮಹಾಭಾರತದ ಈ ಪಾತ್ರ ಹೆಚ್ಚು ಪರಿಚಿತ. ದ್ರೋಣಾಚಾರ್ಯರ ಮಗ ಅಶ್ವತ್ಥಾಮನ ಹಣೆಯ ಮೇಲೆ ಮಣಿಯೊಂದು ಇತ್ತಂತೆ. ಅದು ಆತನಿಗೆ ಅಪಾರ ಶಕ್ತಿ ನೀಡುತ್ತಿತ್ತಂತೆ. ಹಸಿವು, ನೀರಡಿಕೆ ಮತ್ತು ಆಯಾಸ ಆಗದಂತೆ ಅವನನ್ನು ಕಾಪಾಡುತ್ತಿತ್ತಂತೆ. ಆ ನಂತರ ಮಣಿಯನ್ನು ವಾಪಸ್ ಪಡೆದು, ಕೃಷ್ಣನು ಅಶ್ವತ್ಥಾಮನನ್ನು ಶಪಿಸಿದನಂತೆ.
ವೆಲ್ತಿ ಗೊರಿಲ್ಲಾ ವರದಿ ಪ್ರಕಾರ, ಲಿಲ್ ಉಜಿ ನಿವ್ವಳ ಆಸ್ತಿ ಮೌಲ್ಯ 1.6 ಕೋಟಿ ಅಮೆರಿಕನ್ ಡಾಲರ್. ಉಜಿಯ ಈ ಹೊಸ ಅವತಾರವನ್ನು ನೋಡಿ ಕೆಲವರು ಇಷ್ಟ ಪಟ್ಟಿದ್ದರೆ, ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ. ಇರಲಿ ಬಿಡಿ, ಲೋಕ ಭಿನ್ನ ರುಚಿಃ. ಒಬ್ಬೊಬ್ಬರಿಗೆ ಒಂದೊಂದು ಇಷ್ಟವಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications