Bank Holiday Alert: ಇಲ್ಲಿ ಕೇಳಿ..! ನಾಳೆ ಬ್ಯಾಂಕ್ಗೆ ರಜೆ ಇದ್ಯಾ..? ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದ್ದಿಯಾ...ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು.
ಹೌದು,ರಿಸರ್ವ್ ಬ್ಯಾಂಕ್ (RBI) ಪ್ರಕಾರ,ಬ್ಯಾಂಕ್ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ನಿರ್ಧರಿಸಲಾಗುತ್ತದೆ.ಈ ತಿಂಗಳು ನೀವು ನಿಮ್ಮ ಬ್ಯಾಂಕ್ಗೆ ಭೇಟಿ ನೀಡಬೇಕಾದರೆ, ಇಂದೇ (ಏಪ್ರಿಲ್ 11) ಒಳಗೆ ಎಲ್ಲವನ್ನೂ ಮುಗಿಸಲು ಮರೆಯದಿರಿ. ಹಾಗಿದ್ರೆ ಏ.12, 14 ರಂದು ಬ್ಯಾಂಕ್ ಹೊರತುಪಡಿಸಿ ಯಾವೆಲ್ಲಾ ಸೇವೆಗಳು ಇರುತ್ತೇವೆ ಎಂಬ ಹೆಚ್ಚಿನ ವಿವರವನ್ನು ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಏಪ್ರಿಲ್ 12, 14 ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಬ್ಯಾಂಕ್ಗಳು ಕ್ಲೋಸ್ ಆಗಿರುತ್ತೇವೆ. ಅನೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಸತತ ಮೂರು ದಿನಗಳವರೆಗೆ ಏಪ್ರಿಲ್ 12 ರಿಂದ ಏಪ್ರಿಲ್ 14 ರವರೆಗೆ ಮುಚ್ಚಲ್ಪಡುತ್ತವೆ. ಈ ದೀರ್ಘ ವಾರಾಂತ್ಯದಲ್ಲಿ ಎರಡನೇ ಶನಿವಾರ, ಭಾನುವಾರ ಮತ್ತು ಅಂಬೇಡ್ಕರ್ ಜಯಂತಿ, ವಿಷು, ಬಿಹು ಮತ್ತು ತಮಿಳು ಹೊಸ ವರ್ಷದಂತಹ ಹಲವಾರು ಸಾರ್ವಜನಿಕ ರಜಾದಿನಗಳು ಸೇರಿವೆ. ಅಂದರೆ ಹಲವಾರು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಬ್ಯಾಂಕ್ಗಳ ರಜಾ ದಿನಗಳನ್ನು ರಿಸರ್ವ್ ಬ್ಯಾಂಕ್ (RBI) ಪ್ರಕಾರ,ಬ್ಯಾಂಕ್ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ನಿರ್ಧರಿಸಲಾಗುತ್ತದೆ.
ಏಪ್ರಿಲ್ 2025 ರ ಬ್ಯಾಂಕ್ ರಜಾ ಪಟ್ಟಿ
ಏಪ್ರಿಲ್ 11 (ಶುಕ್ರವಾರ): ಬ್ಯಾಂಕುಗಗಳು ಕಾರ್ಯ ನಿರ್ವಹಿಸುತ್ತವೆ. ದೀರ್ಘ ವಾರಾಂತ್ಯದ ಮೊದಲು ಇಂದು ಕೊನೆಯ ಕೆಲಸದ ದಿನವಾಗಿದೆ. ನಗದು ಠೇವಣಿ, ಚೆಕ್ ಕ್ಲಿಯರೆನ್ಸ್ ಅಥವಾ ಶಾಖೆಗೆ ಭೇಟಿ ನೀಡುವಂತಹ ಎಲ್ಲಾ ಅಗತ್ಯ ಕೆಲಸಗಳನ್ನು ಈ ದಿನದಂದು ನೀವು ಮುಗಿಸುವುದು ಉತ್ತಮ.
ಏಪ್ರಿಲ್ 12 (ಶನಿವಾರ): ಬ್ಯಾಂಕುಗಳಿಗೆ ರಜೆ ಇರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳ ಪ್ರಕಾರ,ಭಾರತದಾದ್ಯಂತ ಎಲ್ಲಾ ಬ್ಯಾಂಕುಗಳು ಎರಡನೇ ಶನಿವಾರ ಮುಚ್ಚಲ್ಪಡುತ್ತವೆ.
ಏಪ್ರಿಲ್ 13 (ಭಾನುವಾರ): ಬ್ಯಾಂಕುಗಳಿಗೆ ರಜೆ ಇರುವುದಿಲ್ಲ.
ಭಾನುವಾರದಂದು ಪ್ರಮಾಣಿತ ರಜೆಯಾಗಿದ್ದು, ಈ ದಿನಯಾವುದೇ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ.
ಏಪ್ರಿಲ್ 14 (ಸೋಮವಾರ): ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಜೊತೆಗೆ ಪ್ರಾದೇಶಿಕ ಹಬ್ಬಗಳ ಆಚರಣೆಯೂ ಸಹ ಇರುತ್ತದೆ.
ವಿಷು (ಕೇರಳ)
ಬಿಹು (ಅಸ್ಸಾಂ)
ತಮಿಳು ಹೊಸ ವರ್ಷ (ತಮಿಳುನಾಡು)
ಏಪ್ರಿಲ್ 2025 ರಲ್ಲಿ ಹೆಚ್ಚಿನ ಬ್ಯಾಂಕ್ ರಜಾದಿನಗಳು: ರಾಜ್ಯವಾರು ವಿವರ ಇಲ್ಲಿದೆ ನೋಡಿ.
ಏಪ್ರಿಲ್ 15 (ಮಂಗಳವಾರ): ಬಂಗಾಳಿ ಹೊಸ ವರ್ಷ, ಹಿಮಾಚಲ ದಿನ, ಬೋಹಾಗ್ ಬಿಹು,ಅಸ್ಸಾಂ, ಪಶ್ಚಿಮ ಬಂಗಾಳ,ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಏಪ್ರಿಲ್ 18 (ಶುಕ್ರವಾರ): ಶುಭ ಶುಕ್ರವಾರ
ಹೆಚ್ಚಿನ ಪ್ರಮುಖ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅವು ಈ ಕೆಳಗಿನವುಗಳಲ್ಲಿ ಮಾತ್ರ ತೆರೆದಿರುತ್ತವೆ.
ತ್ರಿಪುರ, ಅಸ್ಸಾಂ, ರಾಜಸ್ಥಾನ, ಜಮ್ಮು, ಹಿಮಾಚಲ ಪ್ರದೇಶ ಮತ್ತು ಶ್ರೀನಗರ.
ಏಪ್ರಿಲ್ 21 (ಸೋಮವಾರ): ಗರಿಯಾ ಪೂಜೆ
ತ್ರಿಪುರಾದಲ್ಲಿ ಸ್ಥಳೀಯ ರಜೆ: ಬ್ಯಾಂಕ್ಗಳಿಗೆ ರಜೆ ಇರುತ್ತದೆ.
ಏಪ್ರಿಲ್ 29 (ಮಂಗಳವಾರ): ಪರಶುರಾಮ ಜಯಂತಿ
ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಏಪ್ರಿಲ್ 30 (ಬುಧವಾರ): ಬಸವ ಜಯಂತಿ ಮತ್ತು ಅಕ್ಷಯ ತೃತೀಯ
ಈ ಹಬ್ಬಗಳಿಗೆ ಕರ್ನಾಟಕದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ
ನೀವು ವೈಯಕ್ತಿಕ ಬ್ಯಾಂಕಿಂಗ್ ಅನ್ನು ಅವಲಂಬಿಸಿದ್ದರೆ, ನಿಮ್ಮ ಭೇಟಿಗಳನ್ನು ಮೊದಲೇ ಯೋಜಿಸಿ. ಹಲವಾರು ಸಾರ್ವಜನಿಕ ರಜಾದಿನಗಳು ಹತ್ತಿರ ಬರುವುದರಿಂದ, ಏಪ್ರಿಲ್ ತಿಂಗಳು ಬ್ಯಾಂಕ್ಗಳಿಗೆ ಹೆಚ್ಚಿನ ದಿನಗಳ ಕಾಲ ರಜೆ ಇರುತ್ತದೆ.
ಯಾವೆಲ್ಲಾ ಸೇವೆಗಳು ಲಭ್ಯ?
ಎಟಿಎಂ, ಆನ್ಲೈನ್ ಬ್ಯಾಕಿಂಗ್, ಡಿಜಿಟಲ್ ಪಾವತಿಗಳ ಮೂಲಕ ನೀವು ಹಣಕಾಸಿನ ವ್ಯವಹಾರವನ್ನು ಮಾಡಬಹುದು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications