ಹೊಸ ವರ್ಷ (New Year) ಆರಂಭವಾಗುತ್ತಿದ್ದಂತೆ ಸರ್ಕಾರ ಕೂಡಾ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಲ್ಲದೇ ಸರ್ಕಾರಿ ರಜಾ ದಿನಗಳು, ಶಾಲಾ ರಜಾದಿನಗಳು, ಬ್ಯಾಂಕ್ ರಜಾದಿನಗಳನ್ನು ಸಹ ಪರಿಷ್ಕರಿಸಲಾಗುತ್ತದೆ (Bank Holidays). ಇಲ್ಲಿ ಕೆಲವು ರಜಾದಿನಗಳು ಸರ್ಕಾರಿ ರಜೆಗಳಾದ್ರೆ, ಇನ್ನೂ ಕೆಲವು ಸ್ಥಳೀಯ ಹಬ್ಬಗಳಿಗೆ, ಆಚರಣೆಗಳಿಗೆ ಸಂಬಂಧಿಸಿ ರಜೆ ನೀಡಲಾಗುತ್ತದೆ.

ಇದೀಗ ಹೊಸ ವರ್ಷದ ಆರಂಭದೊಂದಿಗೆ, 2026ರ ಜನವರಿ ತಿಂಗಳಲ್ಲಿ ದೇಶಾದ್ಯಂತದ ಬ್ಯಾಂಕ್ಗಳಿಗೆ ಹಲವು ದಿನ ರಜೆ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ರಾಜ್ಯವಾರು ಮತ್ತು ನಗರವಾರು ಬ್ಯಾಂಕ್ ರಜಾದಿನಗಳ ಸಂಪೂರ್ಣ ವಿವರ ಇಲ್ಲಿದೆ. ಈ ಕ್ಯಾಲೆಂಡರ್ ನೋಡಿಕೊಂಡರೆ, ಗ್ರಾಹಕರು ತಮ್ಮ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಬಹುದು.
ಜನವರಿ 1ರ ಗುರುವಾರ ಹೊಸ ವರ್ಷದ ದಿನ:
ಜನವರಿ 1 ರ ಗುರುವಾರ ಹೊಸ ವರ್ಷದ ದಿನವನ್ನು ಆಚರಿಸುವುದರಿಂದ ಮಿಜೋರಾಂ, ತಮಿಳುನಾಡು, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಮತ್ತು ಮೇಘಾಲಯದ ಬ್ಯಾಂಕ್ಗಳಿಗೆ ರಜೆ ಇರಲಿದೆ. ಅಲ್ಲದೇ ಐಜ್ವಾಲ್, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಶಾಖಾ ಸೇವೆಗಳು ಲಭ್ಯವಿರುವುದಿಲ್ಲ.
ಜನವರಿ 2ರ ಶುಕ್ರವಾರ, ಮನ್ನಂ ಜಯಂತಿ:
ಜನವರಿ 2ರ ಶುಕ್ರವಾರ, ಕೇರಳದಲ್ಲಿ ಮನ್ನಂ ಜಯಂತಿ ಮತ್ತು ಮಿಜೋರಾಂನಲ್ಲಿ ಹೊಸ ವರ್ಷ ಆಚರಣೆಯ ಕಾರಣ ಬ್ಯಾಂಕ್ಗಳು ಬಂದ್ ಆಗಲಿವೆ. ಐಜ್ವಾಲ್, ಕೊಚ್ಚಿ ಮತ್ತು ತಿರುವನಂತಪುರಂ ಬ್ಯಾಂಕ್ಗಳು ಕ್ಲೋಸ್ ಆಗಲಿದೆ ಎಂದು ಹೇಳಲಾಗಿದೆ.
ಜನವರಿ 3ರ ಶನಿವಾರ, ಹಜ್ರತ್ ಅಲಿಯವರ ಜನ್ಮದಿನ
ಜನವರಿ 3ರ ಶನಿವಾರ, ಹಜ್ರತ್ ಅಲಿಯವರ ಜನ್ಮದಿನ ಇರುವ ಹಿನ್ನೆಲೆ, ಉತ್ತರ ಪ್ರದೇಶದಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ. ಲಕ್ನೋದಲ್ಲಿನ ಬ್ಯಾಂಕ್ಗಳು ಮುಚ್ಚಲಿದ್ದು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿದೆ.
ಸ್ವಾಮಿ ವಿವೇಕಾನಂದ ಜಯಂತಿ:
ಜನವರಿ 12, ಸೋಮವಾರದಂದು ಸ್ವಾಮಿ ವಿವೇಕಾನಂದ ಜಯಂತಿ ಸ್ಮರಣಾರ್ಥ ಪಶ್ಚಿಮ ಬಂಗಾಳದ ಬ್ಯಾಂಕ್ಗಳು ಮುಚ್ಚಿರುತ್ತದೆ. ಕೋಲ್ಕತ್ತಾದ ಬ್ಯಾಂಕ್ ಶಾಖೆಗಳೂ ಈ ದಿನ ಬಂದ್ ಇರಲಿದೆ ಎಂದು ಹೇಳಲಾಗಿದೆ.
ಮಕರ ಸಂಕ್ರಾಂತಿ:
ಜನವರಿ 14, ಬುಧವಾರದಂದು ಮಕರ ಸಂಕ್ರಾಂತಿ ಮತ್ತು ಮಾಘ ಬಿಹು ಹಬ್ಬಗಳನ್ನು ಆಚರಿಸುವ ಹಿನ್ನೆಲೆ ಅಸ್ಸಾಂ, ಒಡಿಶಾ, ಅರುಣಾಚಲ ಪ್ರದೇಶ,ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರಲಿದೆ. ಅಹ್ಮದಾಬಾದ್, ಭುವನೇಶ್ವರ, ಗುವಾಹಟಿ, ಇಟಾನಗರದ ಬ್ಯಾಂಕ್ಗಳು ಈ ದಿನ ಮುಚ್ಚಲಿವೆ.
ಜನವರಿ 15, ಗುರುವಾರ, ಉತ್ತರಾಯಣ ಪುಣ್ಯಕಾಲ, ಪೊಂಗಲ್ ಮತ್ತು ಮಕರ ಸಂಕ್ರಾಂತಿ ಆಚರಣೆಗಾಗಿ ದಕ್ಷಿಣ ರಾಜ್ಯಗಳು ಹಾಗೂ ಕೆಲವು ಇತರ ಪ್ರದೇಶಗಳ ಬ್ಯಾಂಕ್ಗಳು ಮುಚ್ಚಿರುತ್ತದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಜಯವಾಡ ಸೇರಿ ಹಲವು ನಗರಗಳ ಶಾಖೆಗಳು ಈ ದಿನ ಕಾರ್ಯನಿರ್ವಹಿಸುವುದಿಲ್ಲ.
ತಮಿಳುನಾಡಿನಲ್ಲಿ ಜನವರಿ 16, ಶುಕ್ರವಾರ ತಿರುವಳ್ಳುವರ್ ದಿನವನ್ನು ಆಚರಿಸುವುದರಿಂದ ಚೆನ್ನೈ ಬ್ಯಾಂಕ್ಗಳಿಗೆ ರಜೆ ಇರುತ್ತದೆ.
ಜನವರಿ 17, ಶನಿವಾರವನ್ನು ತಮಿಳುನಾಡಿನಲ್ಲಿ ಉಜವರ್ ತಿರುನಾಳ್ ಎಂದು ಆಚರಿಸುವ ಕಾರಣ, ಈ ದಿನದಂದೂ ಚೆನ್ನೈ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
ಜನವರಿ 23, ಶುಕ್ರವಾರದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ, ಸರಸ್ವತಿ ಪೂಜೆ ಮತ್ತು ಬಸಂತ ಪಂಚಮಿ ಹಬ್ಬಗಳಿಗೆ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ತ್ರಿಪುರಾದಲ್ಲಿ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಅಗರ್ತಲಾ, ಭುವನೇಶ್ವರ, ಚೆನ್ನೈ ಮತ್ತು ಕೋಲ್ಕತ್ತಾ ಬ್ಯಾಂಕ್ಗಳಿಗೂ ರಜೆ ನೀಡಲಾಗಿದೆ.
ಗಣರಾಜ್ಯೋತ್ಸವ:
ಜನವರಿ 26, ಸೋಮವಾರ ಗಣರಾಜ್ಯೋತ್ಸವವಿರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ. ನವದೆಹಲಿ, ಮುಂಬೈ, ಬೆಂಗಳೂರು, ಕರ್ನಾಟಕ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಅಹ್ಮದಾಬಾದ್, ಲಕ್ನೋ, ಭುವನೇಶ್ವರ ಸೇರಿದಂತೆ ಹಲವು ಪ್ರಮುಖ ನಗರಗಳ ಬ್ಯಾಂಕ್ಗಳು ಬಂದ್ ಇರಲಿದೆ. ಆದರೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
More From GoodReturns

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Central Govt: ಇನ್ಮೇಲೆ ವಾಹನ ವರ್ಗಾಯಿಸುವುದು ಮತ್ತಷ್ಟು ಸುಲಭ? ಕೇಂದ್ರದಿಂದ ಮಹತ್ವದ ಕ್ರಮ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

8th Pay Commission: ಕೇಂದ್ರ ಸರ್ಕಾರದ ನೌಕರರೇ…8ನೇ ವೇತನ ಆಯೋಗಕ್ಕೆ ಈ ದಿನಾಂಕದೊಳಗೆ ಅಭಿಪ್ರಾಯ ಸಲ್ಲಿಸಿ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications