ಬೆಂಗಳೂರು, ಅ. 19: ಅಮೆರಿಕದ ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ (ಟಿಇವಿ) ಕಂಪನಿ ಜೊತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿ ಹೈಡ್ರೋಜನ್ ಫುಯಲ್ ಸೆಲ್ಗಳ ತಯಾರಿಕೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅದರಂತೆ, ಟಿಇವಿ ಸಂಸ್ಥೆ ಫುಯೆಲ್ ಸೆಲ್ ತಯಾರಿಕೆಗೆ ಬೇಕಾದ ತಂತ್ರಜ್ಞಾನವನ್ನೂ ಬಿಎಎಲ್ಗೆ ನೀಡುತ್ತದೆ.
ಬಿಇಎಲ್ ಮತ್ತು ಟಿಇವಿ ಸಹಯೋಗದಲ್ಲಿ ತಯಾರಾಗುವ ಜಲಜನಕ ಇಂಧನದ ಸೆಲ್ಗಳು ಭಾರತೀಯ ಮಾರುಕಟ್ಟೆ ಹಾಗೂ ಕೆಲ ಆಯ್ದ ವಿದೇಶೀ ಮಾರುಕಟ್ಟೆಗಳಿಗೆ ಸರಬರಾಜಾಗಲಿವೆ.
ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ಮತ್ತು ಸ್ವಚ್ಛ ಇಂಧನ ತಯಾರಿಸಲು ಕೇಂದ್ರ ಸರಕಾರ ಹೈಡ್ರೋಜನ್ ಫುಯೆಲ್ ಮಿಷನ್ಗೆ ಒತ್ತು ಕೊಟ್ಟಿದೆ. ಕ್ಲೀನ್ ಎನರ್ಜಿಗಳ ಪೈಕಿ ಒಂದು ಎಂದು ಪರಿಗಣಿಸಲಾಗಿರುವ ಹೈಡ್ರೋಜನ್ ಇಂಧನದ ತಯಾರಿಕೆಗೆ ಸರಕಾರ ಪುಷ್ಟಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಹೈಡ್ರೋಜನ್ ಫುಯಲ್ ಸೆಲ್ ತಯಾರಿಕೆಗೆ ಟಿಇವಿ ಜೊತೆ ಬಿಇಎಲ್ನ ಒಪ್ಪಂದವಾಗಿದೆ.

ಸಾರಿಗೆ, ಇಂಧನ ಸಂಗ್ರಹ ಇತ್ಯಾದಿಗೆ ಸ್ವಚ್ಛ ಇಂಧನದ ಅಳವಡಿಕೆಗೆ ಕೇಂದ್ರ ಸರಕಾರ ಆದ್ಯತೆ ಕೊಟ್ಟಿದೆ. ಅದಕ್ಕೆ ಬದ್ಧವಾಗಿ ಇ-ಮೊಬಿಲಿಟಿ (ಎಲೆಕ್ಟ್ರಿಕ್ ವಾಹನ ಸಾಗಾಟ) ಮೊದಲಾದ ಹಲವು ಕಾರ್ಯಗಳಿಗೆ ಕ್ಲೀನ್ ಎನರ್ಜಿ ಅಗತ್ಯ ಇದೆ. ಈ ಬೇಡಿಕೆ ಪೂರೈಸಲು ಟಿಇವಿ ಜೊತೆಗಿನ ಒಪ್ಪಂದ ಉಪಯುಕ್ತವಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿ ಸಂಸ್ಥೆ ಹೇಳಿದೆ.
ಟಿಇವಿಯಿಂದ ಆರ್ ಅಂಡ್ ಡಿ ಕೇಂದ್ರ
ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸತಲ್ಲ. ಅಮೆರಿಕದ ಈ ಕಂಪನಿ ಭಾರತದಲ್ಲಿ ಈಗಾಗಲೇ ತಯಾರಿಕಾ ಘಟಕ ಹಾಗೂ ಆರ್ ಅಂಡ್ ಡಿ ಕೇಂದ್ರಗಳನ್ನು ಸ್ಥಾಪಿಸಿದೆ. ಹೈಡ್ರೋಜನ್ ಇಂಧನ ಚಾಲಿತ ವಾಹನಗಳ ಕ್ಷೇತ್ರಕ್ಕೆ ಇತ್ತೀಚೆಗೆ ಅಡಿ ಇಟ್ಟಿದೆ. ಹೈಡ್ರೋಜನ್ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಬಸ್ಸುಗಳನ್ನು ತಯಾರಿಸುವ ಕಾರ್ಯವನ್ನು ಟಿಇವಿ ಆರಂಭಿಸಿದೆ.

ಮಾಲಿನ್ಯಕಾರಕವಲ್ಲದ ಹೈಡ್ರೋಜನ್ ಇಂಧನ
ವಾಯುಮಾಲಿನ್ಯ ನಿಯಂತ್ರಣಕ್ಕೆ ಹೈಡ್ರೋಜನ್ ಇಂಧನ ಬಹಳ ಪರಿಣಾಮಕಾರಿ ಎಂದು ಭಾವಿಸಲಾಗಿದೆ. ಹೈಡ್ರೋಜನ್ ಚಾಲಿತ ವಾಹನದಿಂದ ಹೊರಹೋಗುವ ಹೊಗೆಯಲ್ಲಿ ಹಾನಿಕಾರಕ ಅಂಶಗಳು ಇರುವುದಿಲ್ಲ ಎನ್ನಲಾಗುತ್ತದೆ. ಹೀಗಾಗಿ ಇದನ್ನು ಝೀರೋ ಎಮಿಷನ್ ಇಂಧನ ಎಂದು ಕರೆಯಲಾಗುತ್ತದೆ.
ಸಾಂಪ್ರದಾಯಿಕ ಎಲೆಕ್ಟ್ರಿಕ್ ವಾಹನಕ್ಕಿಂತ ಹೈಡ್ರೋಜನ್ಶಕ್ತ ವಾಹನ ಬಹಳ ಸಮರ್ಥವಾಗಿರುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ರೀಚಾರ್ಜ್ ಮಾಡಲು ಗಂಟೆಗಟ್ಟಲೆ ಬೇಕಾಗುತ್ತದೆ. ಅದರೆ, ಪೆಟ್ರೋಲ್, ಡೀಸೆಲ್ ರೀತಿ ಹೈಡ್ರೋಜನ್ ಇಂಧನವನ್ನು ಬಹಳ ಬೇಗ ಭರ್ತಿ ಮಾಡಬಹುದು.
ಹೈಡ್ರೋಜನ್ ಇಂಧನ ಸಾಮಾನ್ಯವಾಗಿ ಗ್ಯಾಸ್ ರೂಪದಲ್ಲಿರುತ್ತದೆ. ಹೈಡ್ರೋಜನ್ ಫುಯೆಲ್ ಸೆಲ್ಗಳು ಈ ಅನಿಲವನ್ನು ಶಕ್ತಿಯಾಗಿ ಮಾರ್ಪಡಿಸುವ ಕೆಲಸ ಮಾಡುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications