ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಂವೇದನಾ ಕೊಠಡಿ ಆರಂಭ... ವಿಶೇಷತೆಗಳೇನು?

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಂವೇದನಾ ಕೊಠಡಿ ಆರಂಭವಾಗಿದೆ.ಹೌದು, ಬೆಂಗಳೂರು ವಿಮಾನ ನಿಲ್ದಾಣವು ಡೈವರ್ಜೆಂಟ್ ಪ್ರಯಾಣಿಕರಿಗೆ ಸಂವೇದನಾ ಕೊಠಡಿಯನ್ನು ಪರಿಚಯಿಸಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಟರ್ಮಿನಲ್ 2 ರ 4 ನೇ ಹಂತದ ಅಂತರರಾಷ್ಟ್ರೀಯ ಲಾಂಜ್ ಬಳಿ ವಿಶೇಷಚೇಚನ ಪ್ರಯಾಣಿಕರ ಅನುಕೂಲಕ್ಕಾಗಿ ಮೊದಲ ರೀತಿಯ ಸಂವೇದನಾ ಕೊಠಡಿಯನ್ನುಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪರಿಚಯ ಮಾಡಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಂವೇದನಾ ಕೊಠಡಿ ಆರಂಭ

ಬೆಂಗಳೂರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಸಂವೇದನಾ ಕೊಠಡಿ ಆರಂಭಿಸುವುದರ ಮೂಲಕ ವೈಶಿಷ್ಟ್ಯತೆಯನ್ನು ಒಳನೋಟವನ್ನು ಹೊಂದಿದೆ. ಈ ಕೊಠಡಿ ಆಟಿಸಂ ಸ್ಪೆಕ್ಟ್ರಮ, ಸಂವೇದನಾ ಸಂಸ್ಕರಣಾ ಸಮಸ್ಯೆಗಳು, ಆತಂಕ, ಮತ್ತು PTSD (ನಂತರದ ಆಘಾತಕಾರಿ ಒತ್ತಡ) ಮುಂತಾದ ಸಮಸ್ಯೆಗಳಿಗಿರುವ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಶಾಂತ ವಾತಾವರಣವನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಈ ವಿನೂತನ ಆಯ್ಕೆಯು ಡೈವರ್ಜೆಂಟ್ ಪ್ರಯಾಣಿಕರಿಗೆ ತಮ್ಮ ವಿಮಾನ ಪ್ರಯಾಣದ ಅನುಭವವನ್ನು ಸುಲಭವಾಗಿಸಲು ಆತಂಕವನ್ನು ತಪ್ಪಿಸಲು ಸಹಾಯ ಮಾಡುತ್ತದೆ.ಇದರಿಂದಾಗಿ, ಸಾಮಾಜಿಕ ಶಾಂತಿ ಮತ್ತು ಸಮರ್ಪಕ ರೀತಿಯಲ್ಲಿ, ವೈಶಿಷ್ಟ್ಯ ಅಗತ್ಯಗಳನ್ನು ಹೊಂದಿರುವ ಪ್ರಯಾಣಿಕರಿಗೂ ಉತ್ತಮವಾಗಿದೆ ವಾತಾವರಣವನ್ನು ಒದಗಿಸಲು ಅದು ಸಹಾಯಮಾಡುತ್ತದೆ.

ಭಾರತದಲ್ಲಿ ಇತರ ವಿಮಾನ ನಿಲ್ದಾಣಗಳಿಗೆ ಮಾದರಿಯಾಗಲು ಸಾಧ್ಯವಿರುವಂತೆ, ದೇಶಾದ್ಯಾಂತ ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಇದು ಪ್ರೇರಣೆಯಾಗಲಿದೆ.ಎಲ್ಲರನ್ನೂ ಒಳಗೊಂಡ ವಿಮಾನ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವರ್ತನೆಯ ವಿಜ್ಞಾನ ಮತ್ತು ಔದ್ಯೋಗಿಕ ಚಿಕಿತ್ಸಾ ಸಂಶೋಧನೆಯಿಂದ ಬೆಂಬಲಿತವಾದ ಈ ಹೊಸ ಸೌಲಭ್ಯವು ಆಟಿಸಂ ಸ್ಪೆಕ್ಟಮ್ ಅಸ್ವಸ್ಥತೆ, ಸಂವೇದನಾ ಸಂಸ್ಕರಣಾ ಅಸ್ವಸ್ಥತೆ, ಆತಂಕದ ಅಸ್ವಸ್ಥತೆಗಳು,ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆ ಇತ್ಯಾದಿಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಶಾಂತ, ನಿಯಂತ್ರಿತ ಸ್ಥಳವನ್ನು ನೀಡಲಾಗಿದೆ.

ಹೊಸ ಸೌಲಭ್ಯವು ಪ್ರತಿದಿನದ ವಿಮಾನ ಪ್ರಯಾಣದಲ್ಲಿ ಭಾಗವಹಿಸುವ ವಿಶೇಷ ಅಗತ್ಯಗಳನ್ನು ಹೊಂದಿದ ಪ್ರಯಾಣಿಕರಿಗೆ ಒಂದು ಸೂಕ್ತ ಹಾಗೂ ಆರಾಮದಾಯಕ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪೂರಕ ಸೇವೆಗಳ ಮೂಲಕ ಆಟಿಸಂ, ಸಂವೇದನಾ ಸಂಸ್ಕರಣಾ ಸಮಸ್ಯೆಗಳು, ಆತಂಕ ಹಾಗೂ PTSD (ನಂತರದ ಆಘಾತಕಾರಿ ಒತ್ತಡ) ಮುಂತಾದ ಸ್ಥಿತಿಗಳಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಶಾಂತ, ನಿಯಂತ್ರಿತ ಹಾಗೂ ಆರೋಗ್ಯಕರ ವಾತಾವರಣವನ್ನು ನೀಡಲು ಈ ಹೊಸ ಸೌಲಭ್ಯವನ್ನು ಅನುಷ್ಠಾನದಲ್ಲಿ ತರಲು ಕಾರ್ಯನಿರ್ವಹಿಸುತ್ತಿದೆ.

ಈ ರೀತಿಯ ಸೌಲಭ್ಯವು ಅತ್ಯಗತ್ಯ, ಮತ್ತು ಸಂವೇದನಾಶೀಲತೆ ಮತ್ತು ಮನೋಭಾವಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇಲ್ಲದೆ, ವಿಮಾನ ನಿಲ್ದಾಣದಲ್ಲಿ ಬೃಹತ್ ಅಥವಾ ಅಪಾಯದಿಂದ ಗೊಂದಲದಿಂದ ದೂರವಾಗಿರುವ ಒಂದು ಆರಾಮದಾಯಕ ಸ್ಥಳವನ್ನು ಒದಗಿಸುತ್ತದೆ.ಈ ಮೂಲಕ ಪ್ರಯಾಣಿಕರ ಭಯವನ್ನು ಕಡಿಮೆ ಮಾಡಬಹುದು.

ಈ ರೀತಿಯ ಯೋಜನೆಗಳು ಸಾರ್ವಜನಿಕ ಸೇವೆಗಳ ಮತ್ತು ಯೋಜನೆಗಳ ಜೊತೆಗೆ ಸಾಂಸ್ಕೃತಿಕ ಮತ್ತು ಮಾನವಿಕ ನೆಲೆಗಳನ್ನು ಒಳಗೊಂಡಿವೆ ಇದರಿಂದ ಇತರರಿಗೂ ಮಾದರಿಯಾಗುತ್ತದೆ.

ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೈವಿಕ, ಸುಸ್ಥಿರ ಟರ್ಮಿನಲ್ 2 ಆಗಿರಬಹುದು ಅಥವಾ ದಕ್ಷತೆಯನ್ನು ಹೆಚ್ಚಿಸುವ ಡಿಜಿಟಲ್ ಪರಿಹಾರಗಳಾಗಿರಬಹುದು. ಇತ್ತೀಚಿನ ಆವಿಷ್ಕಾರಗಳನ್ನು ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರಯಾಣಿಕ ಸ್ನೇಹಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರಾರ್ ಹೇಳಿಕೆ ನೀಡಿದ್ದಾರೆ.

ಪ್ರತಿಯೊಬ್ಬ ಪ್ರಯಾಣಿಕರಿಗೂ ತಡೆರಹಿತ ಮತ್ತು ಒತ್ತಡ ಮುಕ್ತ ಪ್ರಯಾಣ ಅನುಭವವನ್ನು ಸೃಷ್ಟಿಸುವ ನಮ್ಮ ಧೈಯಕ್ಕೆ ಸಂವೇದನಾ ಕೋಣೆಯ ಸೇರ್ಪಡೆಯಾಗುತ್ತದೆ. ಇದು ನಮ್ಮಗೆ ಕೇವಲ ಒಂದು ವೈಶಿಷ್ಟ್ಯವಲ್ಲ, ಆದರೆ ನಮಗೆ ಒಂದು ಪ್ರಮುಖ ಮೌಲ್ಯವಾಗಿದೆ.

ಈ ಸಂವೇದನಾ ಕೊಠಡಿಯು ಟರ್ಮಿನಲ್ 2 ರ 4 ನೇ ಹಂತದ ಅಂತರರಾಷ್ಟ್ರೀಯ ಲೌಂಜ್ ಬಳಿ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+