Bengaluru High Speed Train: ಇನ್ಮೇಲೆ 1 ಗಂಟೆಯಲ್ಲಿ ಬೆಂಗಳೂರು ತಲುಪಬಹುದು! ಬರಲಿದೆ ಹೊಸ ರೈಲು?

ಕೇಂದ್ರ ಬಜೆಟ್‌ 2026 (Union Budget 2026) ಮಂಡನೆಯಾದಾಗಿನಿಂದ ಭಾರತೀಯ ರೈಲ್ವೇ ಭಾರೀ ಸುದ್ದಿಯಲ್ಲಿದೆ. ಭಾರತದ ದಕ್ಷಿಣ ಭಾಗದಲ್ಲಿ ರೈಲ್ವೇ ಕ್ರಾಂತಿಯನ್ನುಂಟುಮಾಡುವ ನಿರೀಕ್ಷೆಯೊಂದಿಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (FM Nirmala Sitharaman) ಅವರು ಫೆಬ್ರವರಿ 1, 2026 ರಂದು 7 ಹೈಸ್ಪೀಡ್‌ ರೈಲ್‌ ಕಾರಿಡಾರ್‌ಗಳನ್ನು ಘೋಷಣೆ ಮಾಡಿದ್ದಾರೆ. ಈ ಘೋಷಣೆಯಲ್ಲಿ ಚೆನ್ನೈ-ಬೆಂಗಳೂರು ಹೈಸ್ಪೀಡ್‌ ರೈಲ್‌ ಕಾರಿಡಾರ್‌ (Chennai-Bengaluru High Speed Rail Corridor) ಭಾರೀ ಮಹತ್ವವನ್ನು ಪಡೆದುಕೊಂಡಿದೆ. ಈಗಾಗಲೇ 6 ಗಂಟೆಗಳಿಗಿಂತ ಹೆಚ್ಚು ಪ್ರಯಾಣ ಸಮಯ ಬೇಕಾಗುವ ಈ ಮಾರ್ಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.

ಇನ್ಮೇಲೆ 1 ಗಂಟೆಯಲ್ಲಿ ಬೆಂಗಳೂರು ತಲುಪಬಹುದು! ಬರಲಿದೆ ಹೊಸ ರೈಲು?

ಇನ್ನು ನಿರ್ಮಲಾ ಸೀತಾರಾಮನ್‌ ಈ ಯೋಜನೆ ಘೋಷಣೆ ಬೆನ್ನಲ್ಲೇ, ಕೇಂದ್ರ ರೈಲ್ವೇ ಸಚಿವರು ಅಶ್ವಿನಿ ವೈಷ್ಣವ್‌ ಅವರು ಈ ಯೋಜನೆಯನ್ನು "ಸೌತ್‌ ಹೈಸ್ಪೀಡ್‌ ಡೈಮಂಡ್"‌ ಎಂದು ಕರೆದಿದ್ದಾರೆ. ಏಕೆಂದರೆ ಈ ರೈಲ್‌ ಕಾರಿಡಾರ್‌ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳನ್ನು ಸಂಪರ್ಕಿಸಲಿದೆ.

ಭಾರತದಲ್ಲಿ ಪ್ರಮುಖ ನಗರಗಳ ನಡುವೆ ಕ್ರಾಂತಿಕಾರಿ ಬದಲಾವಣೆ ತರಬಲ್ಲ 7 ನೂತನ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಕಾರಿಡಾರ್‌ಗಳು ಮಹಾನಗರಗಳಿಗೆ ಸುಗಮ ಸಂಪರ್ಕ ಒದಗಿಸಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟು ಸುಮಾರು 4,000 ಕಿಲೋಮೀಟರ್ ಉದ್ದಕ್ಕೆ ವಿಸ್ತರಿಸಲಿರುವ ಈ ಏಳು ಕಾರಿಡಾರ್‌ಗಳು ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಹಾಗೂ ವಾರಣಾಸಿ-ಸಿಲಿಗುರಿ ಮಾರ್ಗಗಳಲ್ಲಿ ಕಾರ್ಯಾಚರಣ ಮಾಡಲಿದೆ. ಅಂದಾಜು ₹16 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಈ ಯೋಜನೆಗಳು ಹೊಂದುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ದೇಶದಾದ್ಯಂತ ಎಲ್ಲಾ ಹೈಸ್ಪೀಡ್ ರೈಲು ಮಾರ್ಗಗಳನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಈ ಏಳು ನೂತನ ಕಾರಿಡಾರ್‌ಗಳು ದೇಶದ ಸಾರಿಗೆ ವಲಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ರೈಲು ಕಾರಿಡಾರ್‌ಗಳು ಪ್ರಯಾಣದ ಅವಧಿಯನ್ನು ಸಹ ಗಣನೀಯವಾಗಿ ಕಡಿಮೆ ಮಾಡಲಿದೆ.

ದಕ್ಷಿಣ ಭಾರತದ ರೈಲ್ವೇ ಮಾರ್ಗಗಳ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಚೆನ್ನೈ, ಬೆಂಗಳೂರು, ಮತ್ತು ಹೈದರಾಬಾದ್ ಪ್ರಮುಖ ಹೈಸ್ಪೀಡ್ ಕಾರಿಡಾರ್‌ ಆಗಲಿವೆ ಎಂದು ಭರವಸೆ ನೀಡಿದರು. ಈ ಯೋಜನೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಐದು ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಒಂದು ಸೇವೆ, ಹಲವು ಪ್ರಯೋಜನ!
ಒಂದು ವೇಳೆ ಈ ಮಾರ್ಗಗಳು ಕಾರ್ಯಾಚರಣೆ ಆರಂಭಿಸಿದರೆ ಪ್ರಯಾಣ ಸಮಯ ಕೂಡಾ ಇಳಿಕೆಯಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಈ ರೈಲ್ವೇ ಕಾರಿಡಾರ್‌ನಿಂದಾಗಿ ಚೆನ್ನೈ-ಬೆಂಗಳೂರು ಪ್ರಯಾಣ ಕೇವಲ 1 ಗಂಟೆ 13 ನಿಮಿಷಗಳಿಗೆ ಇಳಿಯಲಿದೆ. ಬೆಂಗಳೂರು-ಹೈದರಾಬಾದ್ ಸಂಚಾರ ಸುಮಾರು 2 ಗಂಟೆಗಳಲ್ಲಿ ಮುಗಿಯುತ್ತದೆ. ಹಾಗೆಯೇ ಚೆನ್ನೈ-ಹೈದರಾಬಾದ್‌ಗೆ 2 ಗಂಟೆ 55 ನಿಮಿಷಗಳು, ಮುಂಬೈ-ಪುಣೆಗೆ 48 ನಿಮಿಷಗಳು, ಪುಣೆ-ಹೈದರಾಬಾದ್‌ಗೆ 1 ಗಂಟೆ 55 ನಿಮಿಷಗಳು, ವಾರಣಾಸಿ-ಸಿಲಿಗುರಿಗೆ ಅಂದಾಜು 2 ಗಂಟೆ 55 ನಿಮಿಷಗಳು, ದೆಹಲಿ-ವಾರಣಾಸಿ ಪ್ರಯಾಣಕ್ಕೆ 3 ಗಂಟೆ 50 ನಿಮಿಷಗಳಲ್ಲಿ ತಲುಪಲಿದೆ ಎಂದು ಸಚಿವರು ಹೇಳಿದ್ದಾರೆ.

ಯಾವಾಗ ಆರಂಭ?
ಸದ್ಯ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ಇನ್ನೂ ಪ್ರಸ್ತಾಪದ ಹಂತದಲ್ಲಿದೆ. ಆದ್ದರಿಂದ ಸಂಪೂರ್ಣ ಆರಂಭದ ದಿನಾಂಕ ಇನ್ನೂ ನಿರ್ಧರಿಸಲಾಗಿಲ್ಲ. ಸರ್ವೇಗಳು, ಡಿಪಿಆರ್‌ ತಯಾರಿ ನಡೆಯುತ್ತಿದ್ದು, ನಂತರ ನಿರ್ಮಾಣ ಕೆಲಸಗಳು ಆರಂಭವಾಗಲಿದೆ. ವರದಿ ಪ್ರಕಾರ, ಈ ಸೇವೆಗಳು 2027 ರ ನಂತರವೇ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+