ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಲೈನ್ಗಾಗಿ ನಿರ್ಮಾಣ ಮಾಡ್ತಿರೋ, ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈಓವರ್...ಇದರ ಬಹುತೇಕ ವಿಭಾಗಗಳು ವಾಹನ ಸಂಚಾರಕ್ಕೆ ತೆರೆಯಲ್ಪಟ್ಟಿವೆ. ಆದ್ರೆ ಒಂದೇ ಒಂದು ಬೇಸರ ಏನಂದ್ರೆ ಈವರೆಗೂ ಪ್ರಮುಖ ರ್ಯಾಂಪ್ಗಳು ಸಂಪೂರ್ಣವಾಗಿಲ್ಲ. ಇದೇ ಕಾರಣದಿಂದ ಫ್ಲೈಓವರ್ನ ಸಂಪೂರ್ಣ ಲಾಭ ಯಾರಿಗೂ ಅನುಭವಿಸಲು ಸಿಗಲಿಲ್ಲ. ಇದೇ ನಿರಾಸೆಯ ಭಾರ ಹೊತ್ತಿದ್ದ ಬೆಂಗಳೂರಿನ ಜನತೆಗೆ ಇದೀಗ ಗುಡ್ನ್ಯೂಸ್ ಸಿಕ್ಕಿದೆ.

ಹೌದು, ಆ ಗುಡ್ನ್ಯೂಸ್ ಏನೆಂದರೆ ಫೆಬ್ರವರಿ ಅಂತ್ಯದೊಳಗೆ ಈ ಫ್ಲೈಓವರ್ ಸಂಪೂರ್ಣವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಈ ಈ ಡಬಲ್ ಡೆಕ್ಕರ್ ಫ್ಲೈಓವರ್ 5.12 ಕಿ.ಮೀ ಉದ್ದ ಮತ್ತು ₹449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದರ ಒಂದು ಅನುಕೂಲ ಏನಂದ್ರೆ ಇದರ ಮೂಲಕ ನಗರದಲ್ಲಿ ಹೆಚ್ಚು ಟ್ರಾಫಿಕ್ ಬಿಸಿ ಇರುವ, ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಲಿನ ಸಂಚಾರ ಸುಗಮಗೊಳಿಸೋದಾಗಿತ್ತು. ಹೀಗಾಗಿಯೇ ಜುಲೈ 2024 ರಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಪ್ರಮುಖ ಕಾರಿಡಾರ್ ಉದ್ಘಾಟಿಸಲಾಗಿತ್ತು.
ಆದ್ರೂ ಎಚ್ಎಸ್ಆರ್ ಲೇಔಟ್ ಮತ್ತು ಬಿಟಿಎಂ ಲೇಔಟ್ಗೆ ಸಂಪರ್ಕ ನೀಡುವ ಪ್ರಮುಖ ರ್ಯಾಂಪ್ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಸದ್ಯಕ್ಕೆ ರ್ಯಾಂಪ್ಗಳು A, B ಮತ್ತು C ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲವೂ ಒಂದೊಂದು ಮೆಟ್ರೋ ನಿಲ್ದಾಣದಿಂದ, ಮತ್ತೊಂದು ರಸ್ತೆಗೆ ಸಂಪರ್ಕ ಕಲ್ಪಿಸುತ್ತವೆ. ಅವು ಯಾವುವು, ಯಾವ ಮಾರ್ಗದ ಮೂಲಕ ಸಂಪರ್ಕ ಎಂದು ತಿಳಿಯಿರಿ.
ಮೊದಲನೆಯದಾಗಿ ರ್ಯಾಂಪ್ A ರಾಗಿಗುಡ್ಡ ಮೆಟ್ರೋ ನಿಲ್ದಾಣವನ್ನು ಹೊಸೂರು ರಸ್ತೆಗೂ ಸಂಪರ್ಕಿಸುತ್ತದೆ. ರ್ಯಾಂಪ್ B, ಎಚ್ಎಸ್ಆರ್ ಲೇಔಟ್ ಕಡೆಗೆ ಸಂಚಾರ ವಹಿಸುತ್ತದೆ. ಹಾಗೂ ರ್ಯಾಂಪ್ C, ಬಿಟಿಎಂ ಲೇಔಟ್ ಮತ್ತು ಎಚ್ಎಸ್ಆರ್ ಲೇಔಟ್ ಸಂಪರ್ಕ ಕಲ್ಪಿಸುತ್ತದೆ. ಆದ್ರೆ D ಮತ್ತು E ರ್ಯಾಂಪ್ಗಳು ಮಾತ್ರ ಪರಿಪೂರ್ಣತೆಯನ್ನ ನೋಡಲಾಗಲಿಲ್ಲ. ಇವು ಪೂರ್ಣಗೊಂಡರೆ ಮಾತ್ರ, ಎಚ್ಎಸ್ಆರ್ ಲೇಔಟ್ದಿಂದ ರಾಗಿಗುಡ್ಡ ಮತ್ತು ಬಿಟಿಎಂ ಲೇಔಟ್ ಕಡೆ ನೇರ ಸಂಪರ್ಕ ಸಾಧ್ಯವಾಗುತ್ತದೆ.
ಅಂದಹಾಗೆ ಈ ವಿಳಂಬಕ್ಕೆ ಕಾರಣ ಏನು ಎಂದು ಕೇಳಬಹುದು. ಉದಕ್ಕೆ ಕಾರಣ ಏನು ಅಂದ್ರೆ, ರಸ್ತೆಯ ಮೇಲೆ 42 ಮೀಟರ್ ಉದ್ದದ ಉಕ್ಕಿನ ಸೇತುವೆಯ ಅಳವಡಿಕೆ, ಇದು ಮೆಟ್ರೋ ವಯಡಕ್ಟ್ ಜೊತೆಗೆ ಸಂಕೀರ್ಣ ಎಂಜಿನಿಯರಿಂಗ್ ಅನ್ನು ಅಗತ್ಯವಾಯಿತು. ಬಿಎಂಆರ್ಸಿಎಲ್ ಅಧಿಕಾರಿಗಳು ಫೆಬ್ರವರಿ ಅಂತ್ಯದೊಳಗೆ ಉಳಿದ ರ್ಯಾಂಪ್ಗಳನ್ನು ಕಾರ್ಯನಿರ್ವಹಣೆಗೆ ತರುವ ಗುರಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಫ್ಲೈಓವರ್ ಪೂರ್ಣಗೊಂಡ ನಂತರ, ನಗರದಲ್ಲಿ ಸಂಚಾರ ಸುಗಮಗೊಳ್ಳಲಿದೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಲಿನ ಭಾರೀ ದಟ್ಟಣೆ ಕಡಿಮೆಯಾಗಲಿದೆ.
More From GoodReturns

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ



Click it and Unblock the Notifications