ಬೆಂಗಳೂರು ತಂಪು ತಂಪು ಕೂಲ್ ಕೂಲ್​; ಇಂದು ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಬೆಂಗಳೂರಿನ ಕೆಲವು ಭಾಗಗಳಲ್ಲಿ ನಿನ್ನೆ(ಏಪ್ರಿಲ್‌ 15) ಮಂಗಳವಾರ ಸಂಜೆಯಿಂದ ತಡರಾತ್ರಿಯವರೆಗೆ ಮಳೆಯಾಗಿದ್ದು, ಇಂದು ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ತಿಳಿಸಿದೆ.

ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಬೆಂಗಳೂರು ನಗರದಲ್ಲಿ ರಾತ್ರಿ 11.30 ರವರೆಗೆ 2.8 ಮಿಮೀ ಮಳೆ ಮತ್ತು HAL ವಿಮಾನ ನಿಲ್ದಾಣವು 3.1 ಮಿಮೀ ಮಳೆಯನ್ನು ದಾಖಲಿಸಿದೆ. ಬೆಂಗಳೂರು ನಗರದ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) ಇದೇ ಅವಧಿಯಲ್ಲಿ 4 ಮಿಮೀ ಮಳೆಯನ್ನು ದಾಖಲಿಸಿದೆ.

ಬೆಂಗಳೂರು ತಂಪು ತಂಪು ಕೂಲ್ ಕೂಲ್​; ಇಂದು ಸಹ ಗುಡುಗು ಸಹಿತ  ಮಳೆ

ನಾಲ್ಕೈದು ದಿನಗಳ ಒಣ ಹವಾಮಾನದ ನಂತರ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ಮಾಹಿತಿಯನ್ನು ಹೇಳಿದ್ದಾರೆ.

ಜೂನ್ ತಿಂಗಳಿನಲ್ಲಿ ಮಾನ್ಸೂನ್ ವರೆಗೆ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಮಾನ್ಸೂನ್ ಪೂರ್ವ ಮಳೆಯ ಸಮಯದಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ ಮತ್ತು ಗುಡುಗು ಮತ್ತು ಮಿಂಚು ಸಾಮಾನ್ಯವಾಗಿ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 16 ರಿಂದ ಭಾರತದ ಹಲವಾರು ಭಾಗಗಳಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ದೆಹಲಿ, ಪಂಜಾಬ್, ಹರಿಯಾಣ, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಉಷ್ಣ ಅಲೆಯ ಇರಲಿದೆ.

ಮುಂದಿನ ವಾರ ರಾಜ್ಯದ ವಿವಿಧ ಭಾಗಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು,ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ(Yellow Alert) ಮಾಡಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?

ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ತುಮಕೂರು ಮತ್ತು ಕೋಲಾರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು sh ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ ವಾರ ಎಲ್ಲಿಲ್ಲೆ ಮಳೆ?

ಮುಂದಿನ ವಾರ ಕರಾವಳಿ ಮತ್ತು ಉತ್ತರ ಒಳನಾಡಿನ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕಲಬುರಗಿ, ಯಾದಗಿರಿ ಮತ್ತು ಬೀದರ್‌ನಲ್ಲಿ ಒಣ ಹವಾಮಾನದ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಬೆಂಗಳೂರಿಗೆ ಮಳೆ ಕಾಟ!

ಬೆಂಗಳೂರಿನಲ್ಲಿ ಇಂದು ಕೆಲವು ಗಂಟೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಸಂಚಾರ ದಟ್ಟಣೆಯಾಗಿ ಬೆಂಗಳೂರಿಗೆ ಮಳೆ ಕಾಟ ಎದುರಾಗಬಹುದು. ನಿನ್ನೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ನೈಋತ್ಯ ಭಾಗಗಳಾದ ಕೆಂಗೇರಿ, ಆರ್.ಆರ್. ನಗರ, ಉತ್ತರಹಳ್ಳಿ ಮತ್ತು ನಾಯಂಡಹಳ್ಳಿಗಳಲ್ಲಿ ಮಳೆ ಕಡಿಮೆಯಾಯಿತು. ಅಯ್ಯಪ್ಪ ಸ್ವಾಮಿ ದೇವಸ್ಥಾನ ಜಂಕ್ಷನ್ ಬಳಿಯ ಹೊಸೂರು ರಸ್ತೆ ಮತ್ತು ಒಆರ್‌ಆರ್‌ನ ಕೆಲವು ಭಾಗಗಳಲ್ಲಿಯೂ ಸಂಚಾರ ದಟ್ಟಣೆ ಉಂಟಾಗಿದೆ.

ಹೆಬ್ಬಾಳ, ಲಿಂಗರಾಜಪುರಂ, ಕಲ್ಯಾಣ್ ನಗರ, ಇಂದಿರಾನಗರ, ಕಂಟೋನ್ಮೆಂಟ್ ಪ್ರದೇಶ, ಬಿಟಿಎಂ ಲೇಔಟ್, ಜೆಪಿ ನಗರ ಮತ್ತು ಜಯನಗರ ಸೇರಿದಂತೆ ಉತ್ತರ, ಮಧ್ಯ ಮತ್ತು ಆಗ್ನೇಯ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಲಘು ಮಳೆಯಾಗಿದೆ.

ಮಳೆಯಿಂದ ಪಾರಾಗಲು ಕೆಲವು ಸರಳ ಸಲಹೆಗಳನ್ನು ಅನುಸರಿಸಿ

1. ಹೆಚ್ಚು ಸುರಕ್ಷಿತ ಸ್ಥಳವನ್ನು ಹುಡುಕಿ: ಮಳೆಯ ಸಮಯದಲ್ಲಿ ತಕ್ಷಣವೇ ಶೆಡ್, ಅಂಗಡಿ ಅಥವಾ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಿರಿ.ಬೀದಿ ಬದಿಯಲ್ಲಿ ನಿಲ್ಲಬೇಡಿ.

2. ರೇನ್‌ಕೋಟ್ ಅಥವಾ ಛತ್ರಿ ಬಳಸಿ: ಯಾವಾಗಲೂ ನಿಮ್ಮ ಜೊತೆ ಒಂದು ರೇನ್‌ಕೋಟ್ ಅಥವಾ ಛತ್ರಿ ಇರಿಸಿಕೊಳ್ಳಿ

3. ವಾಟರ್‌ಪ್ರೂಫ್ ಬ್ಯಾಗ್ ಅಥವಾ ಕವರ್: ಮಳೆ ಬರುವ ಸಾಧ್ಯತೆ ಇರುವ ಸಮಯದಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳು, ಪುಸ್ತಕಗಳು ಇತ್ಯಾದಿಗಳನ್ನು ಪ್ಲಾಸ್ಟಿಕ್ ಕವರ್ ಅಥವಾ ವಾಟರ್‌ಪ್ರೂಫ್ ಬ್ಯಾಗ್‌ನಲ್ಲಿ ಇಡಿ.

4. ರಸ್ತೆ ಸ್ಥಿತಿ ಬಗ್ಗೆ ಎಚ್ಚರ ವಹಿಸಿ: ಮಳೆಯ ಸಮಯದಲ್ಲಿ ರಸ್ತೆಗಳು ಇಳಿಜಾರಾಗಿರಬಹುದು ಅಥವಾ ಜಾರಬಹುದಾದವು.ಎಚ್ಚರಿಕೆಯಿಂದ ಹೋಗಿ.ವಾಹನ ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ.

5. ಹವಾಮಾನ ಮುನ್ಸೂಚನೆ ನೋಡಿ: ಹೊರಗೆ ಹೋಗುವ ಮೊದಲು ಹವಾಮಾನ ಮುನ್ಸೂಚನೆ ನೋಡಿರಿ. ಮಳೆ ಬರುವ ಸಾಧ್ಯತೆ ಇದ್ದರೆ ಅಗತ್ಯ ಬದಲಾವಣೆಯನ್ನು ಮಾಡಿಕೊಳ್ಳಿ

6. ಮಳೆಗಾಲದ ಲಭ್ಯವಿರುವ ಆಹಾರ, ಔಷಧಿ ಸಿದ್ಧಮಾಡಿಕೊಳ್ಳಿ: ಭಾರಿ ಮಳೆ ಸಮಯದಲ್ಲಿ ಮನೆಯಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ, ಆದ್ದರಿಂದ ಅಗತ್ಯವಿರುವ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+