ರೈತರಿಗೆ ಮುಖ್ಯ ಸುದ್ದಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಕಡ್ಡಾಯವಲ್ಲ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ (PMFBY)ದಲ್ಲಿ ಮಹತ್ತರವಾದ ಬದಲಾವಣೆ ಮಾಡುವುದಕ್ಕೆ ಬುಧವಾರ ಸರ್ಕಾರ ಒಪ್ಪಿಕೊಂಡಿದೆ. ಏನು ಆ ಬದಲಾವಣೆ ಅಂತೀರಾ? ಕೃಷಿ ವಿಮೆ ಯೋಜನೆಯಲ್ಲಿ ಇರುವ ಹುಳುಕುಗಳನ್ನು ಸರಿ ಮಾಡಬೇಕು ಎಂಬ ಉದ್ದೇಶದಿಂದ ಈಗ ರೈತರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
PMFBY ಅಡಿಯಲ್ಲಿ ಫೆಬ್ರವರಿ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇದನ್ನು ಆರಂಭಿಸಿದ್ದರು. ಸಾಲ ಪಡೆಯುವ ರೈತರು ಈ ಯೋಜನೆ ಅಡಿಯಲ್ಲಿ ವಿಮೆ ಖರೀದಿಸುವುದು ಕಡ್ಡಾಯವಾಗಿತ್ತು. ಆದರೆ ರೈತರು ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರಿಂದ PMFBY ಕಾರ್ಯಕ್ರಮದಲ್ಲಿ ಹಲವು ಬದಲಾವಣೆ ಮಾಡಲು ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ರೈತರಿಗೆ ಸಾಲ- ಕ್ರೆಡಿಟ್ ಕಾರ್ಡ್ ಸಲೀಸು
PMFBY ಇನ್ನು ಮುಂದೆ ಕಡ್ಡಾಯ ಅಲ್ಲ. ಅದನ್ನು ಆಯ್ಕೆ ಮಾಡಿಕೊಳ್ಳುವುದು ರೈತರಿಗೆ ಬಿಟ್ಟ ಸಂಗತಿ ಎಂದು ಸಚಿವ ತಿಳಿಸಿದ್ದಾರೆ. ಇನ್ನು ಯೋಜನೆಯ ಸಾಧನೆ ಬಗ್ಗೆ ವಿವರಿಸಿದ ಅವರು, ಈ ಇನ್ಷೂರೆನ್ಸ್ ಮೂಲ 30 ಪರ್ಸೆಂಟ್ ನಷ್ಟು ಕೃಷಿ ಭೂಮಿ ಒಳಗೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.
60,000 ಕೋಟಿ ಮೌಲ್ಯದ ಇನ್ಷೂರೆನ್ಸ್ ಕ್ಲೇಮ್ ಗಳ ಚುಕ್ತಾ ಮಾಡಲಾಗಿದೆ. 13,000 ಕೋಟಿ ರುಪಾಯಿ ಪ್ರೀಮಿಯಂ ಸಂಗ್ರಹಹಿಸಲಾಗಿದೆ.