ವಾಹ್... ನಮ್ಮ ಮೆಟ್ರೋಗೆ ಹಸಿರು ಪ್ರಶಸ್ತಿ.. ಹೌದು,ಇಂಧನ ದಕ್ಷತೆ,ನೀರಿನ ಸಂರಕ್ಷಣೆ, ಸುಸ್ಥಿರ ನಿರ್ಮಾಣ ಸಾಮಗ್ರಿ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಕಟ್ಟಡ ಪ್ರಮಾಣಿಕರಿಸಿ ಬಿಎಂಆರ್ಸಿಎಲ್ನ ಐದು ನಿಲ್ದಾಣಗಳಿಗೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನಿಂದ ಪ್ಲಾಟಿನಮ್ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಹಸಿರು ಕಟ್ಟಡಗಳ ಪ್ರಮಾಣೀಕರಣ ಸಂಸ್ಥೆಯಾದ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (IGBC) ನಿಂದ MRTS ಎಲಿವೇಟೆಡ್ ಸ್ಟೇಷನ್ಸ್ ವಿಭಾಗದ ಅಡಿಯಲ್ಲಿ ಪ್ಲಾಟಿನಂ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ರೀಚ್-4B ನಲ್ಲಿರುವ ಐದು ನಿಲ್ದಾಣಗಳಾದ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇಂಧನ ದಕ್ಷತೆ, ನೀರಿನ ಸಂರಕ್ಷಣೆ, ಸುಸ್ಥಿರ ನಿರ್ಮಾಣ ಸಾಮಗ್ರಿಗಳ ಬಳಕೆ, ನವೀಕರಿಸಬಹುದಾದ ಇಂಧನ ಅಳವಡಿಕೆ ಮತ್ತು ವರ್ಧಿತ ಒಳಾಂಗಣ ಪರಿಸರ ಗುಣಮಟ್ಟ ಸೇರಿದಂತೆ ವಿವಿಧ ನಿಯತಾಂಕಗಳಲ್ಲಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಕಟ್ಟಡಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಜಿಬಿಸಿ ಪ್ರಶಸ್ತಿಗಳನ್ನು ನೀಡುತ್ತದೆ. ಬಿಎಂಆರ್ಸಿಎಲ್ ಈ ನಿಲ್ದಾಣಗಳಲ್ಲಿ ಹಲವಾರು ಹಸಿರು ಉಪಕ್ರಮಗಳನ್ನು ಜಾರಿಗೆ ತರಲಾಗಿದೆ.
ನೈಸರ್ಗಿಕ ವಸ್ತು ಬಳಕೆ BMRCL ಮೊದಲ ಆದ್ಯತೆ
BMRCL (Bangalore Metro Rail Corporation Limited) ನೈಸರ್ಗಿಕ ವಸ್ತು ಬಳಕೆ ಮತ್ತು ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನ ನೀಡುತ್ತಿದೆ. ಇವು ತನ್ನ ಕಾರ್ಯಚಟುವಟಿಕೆಗಳಲ್ಲಿ ಹಸಿರು ಸ್ಥಿತಿಗತಿ ಸಾಧಿಸಲು ಮತ್ತು ಪರಿಸರವನ್ನು ರಕ್ಷಿಸಲು ಬದ್ಧವಾಗಿದೆ.
ಇಂಧನ ದಕ್ಷತೆ ಮತ್ತು HVAC ವ್ಯವಸ್ಥೆ: ಮೆಟ್ರೋ ನಿಲ್ದಾಣಗಳಲ್ಲಿ ಇಂಧನವನ್ನು ಸೂಕ್ತವಾಗಿ ಬಳಸಿ, ಶಕ್ತಿಯ ಖರ್ಚು ಕಡಿಮೆ ಮಾಡಲಾಗುತ್ತಿದೆ. HVAC (ಹವಾನಿಯಂತ್ರಣ ಮತ್ತು ಗಾಳಿಚಲನೆ) ವ್ಯವಸ್ಥೆಯ ಉತ್ಕೃಷ್ಟ ವಿನ್ಯಾಸದಿಂದ, ಇದು ಇಂಧನದ ಬಳಕೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಸೌರಶಕ್ತಿ ಬಳಕೆ: ನಿಲ್ದಾಣಗಳಲ್ಲಿ ಸೌರಶಕ್ತಿ ಬಳಕೆ ಮುಂದುವರೆಯುತ್ತಿರುವ ಮೂಲಕ, ಬೂದು ಶಕ್ತಿಯ ಬಳಕೆ ಕಡಿಮೆಯಾಗುತ್ತದೆ ಮತ್ತು ಹವಾಮಾನವನ್ನು ಕಾಪಾಡಲು ಸಹಾಯಮಾಡುತ್ತದೆ.
ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ: ಮಳೆನೀರನ್ನು ಸಂಗ್ರಹಿಸಿ, ಅದು ನಿಲ್ದಾಣಗಳಲ್ಲಿ ಬಳಸಲು ಪುನಃ ಬಳಕೆಯಾಗುತ್ತದೆ. ಇದು ನೀರಿನ ಅಪದ್ರವವನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ.
ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳು: ಹಸಿರು ಕಟ್ಟಡಗಳನ್ನು ನಿರ್ಮಿಸಲು ಮತ್ತು ಪರಿಸರವನ್ನು ಕಾಪಾಡಲು ಉತ್ಕೃಷ್ಟವಾದ ಬಣಗಳ ಆಯ್ಕೆ ಮತ್ತು ಸುಸ್ಥಿರವಾದ ಮಾರ್ಗಗಳನ್ನು ಅಳವಡಿಸಲಾಗಿವೆ.
BMRCL ತನ್ನ ಮೆಟ್ರೋ ಕಾರಿಡಾರ್ಗಳ ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಹಸಿರು ಕಟ್ಟಡ ಅಭ್ಯಾಸಗಳನ್ನು ಜಾರಿಗೆ ತರುತ್ತಿದ್ದು, ಬಂಗಲೂರಿನ ಪರಿಸರ ರಕ್ಷಣೆಗೆ ಬಗ್ಗೆ ತುಂಬಾ ಕಾಳಜಿವಹಿಸುತ್ತದೆ.
BMRCL ಸದರಿ ನಿಲ್ದಾಣಗಳಲ್ಲಿ ಹಲವಾರು ಸುಸ್ಥಿರ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.
ಯಾವೆಲ್ಲಾ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆ?
ನಮ್ಮ ಮೆಟ್ರೋ ಕಾರ್ಯಸಾಧ್ಯತಾ ಅಧ್ಯಯನ ನಡೆಸುತ್ತಿರುವ ಮಾಹಿತಿಯ ಪ್ರಕಾರ ಸರ್ಕಾರ ಒಪ್ಪಿಗೆ ದೊರೆತ ಬಳಿಕ ಚಲ್ಲಘಟ್ಟದಿಂದ ಬಿಡದಿಯಿಂದ ರಾಮನಗರ ಜಿಲ್ಲೆಯವರೆಗೆ (15 ಕಿ.ಮೀ), ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ (ಕನಕಪುರ) ವರೆಗೆ (24 ಕಿ.ಮೀ.), ಕಾಳೇನ ಅಗ್ರಹಾರ ರಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ-ಜಿಗಣಿ-ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ಕಾಡುಗೋಡಿ ಟ್ರೀ ಪಾರ್ಕ್ ವರೆಗೆ (68 ಕಿ.ಮೀ), ಹಾಗೂ ಬೊಮ್ಮಸಂದ್ರದಿಂದ ಅತಿಬೆಲೆವರೆಗೆ (11) ಮತ್ತು ಮಾದವರದಿಂದ ತುಮಕೂರುವರೆಗೆ (52 ಕಿ.ಮೀ) ಮೆಟ್ರೋ ವಿಸ್ತರಣೆಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಯುತ್ತಿದೆ. ಶೀಘ್ರವೇ ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.
\
More From GoodReturns

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications