ಬಿಎಂಟಿಸಿ ಸಂಸ್ಥೆ ಹೊಸ ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ. ಅದೇನೆಂದರೆ ಬೆಂಗಳೂರು ನಗರದಲ್ಲಿರುವ ಆಧ್ಯಾತ್ಮಿಕ ಪ್ರವಾಸೋದ್ಯಮವಾಗಿರುವ, 'ದಿವ್ಯ ದರ್ಶನ' ಎಂಬ ಹೆಸರಿನ ಹೊಸ ಬಸ್ ಪ್ಯಾಕೇಜ್ ಸೇವೆಯನ್ನ, ಇದೇ ಮೇ 31ರಿಂದ ಪ್ರಾರಂಭಿಸುತ್ತಿದೆ. ಈ ಹೊಸ ಸೇವೆಯು ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

ಅಂದಹಾಗೆ ಈ ದಿವ್ಯ ದರ್ಶನ ಪ್ಯಾಕೇಜ್ನ ಉಪಕ್ರಮವು ಬೆಂಗಳೂರಿನ ಜನತೆಗೆ, ಹಾಗೂಪ್ರವಾಸಿಗರಿಗೆ ಆಧ್ಯಾತ್ಮಿಕ ಅನುಭವದ ಜೊತೆಗೆ ಹಾಸ್ಯಕೂಟದ ಪ್ರಯಾಣವನ್ನೂ ಒದಗಿಸಲಿದೆ.
ಯಶಸ್ವಿ ಪ್ಯಾಕೇಜ್ಗಳ ಹಿನ್ನೆಲೆಯಲ್ಲಿ ಹೊಸ ಯತ್ನ:
ಇನ್ನು ಈಗಾಗಲೇ ಬೆಂಗಳೂರು ದರ್ಶಿನಿ ಮತ್ತು ಈಶ ಫೌಂಡೇಶನ್ ಪ್ರವಾಸಗಳ ಅನುಭವ ಬೆಂಗಳೂರಿನಲ್ಲಿ ಚಾಲ್ತಿ ಇದೆ. ಇದರ ಆಧಾರವಾಗಿಯೇ ಈ ಹೊಸ ಯೋಜನೆ ಶುರುವಾಗಲಿದೆ. ಈ ಸೇವೆಯಲ್ಲಿ ಬಿಎಂಟಿಸಿ ಬಸ್ಗಳು, ದೇವಾಲಯ ಪ್ರವಾಸವನ್ನು ಹೆಚ್ಚು ಸುಲಭಗೊಳಿಸಲು ಮತ್ತು ಆಧ್ಯಾತ್ಮಿಕ ಪ್ರವೃತ್ತಿಗೆ ಉತ್ತೇಜನ ನೀಡಲು ಉದ್ದೇಶಿಸಿದೆ.
ಎಂಟು ದೇವಾಲಯಗಳನ್ನು ಒಳಗೊಂಡ ಬಸ್ ಪ್ಯಾಕೇಜ್:
'ದಿವ್ಯ ದರ್ಶನ' ಪ್ಯಾಕೇಜ್ನಲ್ಲಿ ಭಾಗವಹಿಸುವ ಪ್ರಯಾಣಿಕರು ಒಂದು ದಿನದಲ್ಲಿ ಬೆಂಗಳೂರಿನ ಎಂಟು ಪ್ರಸಿದ್ಧ ದೇವಾಲಯಗಳಿಗೆ ಬೇಟಿ ನೀಡುವ ಅವಕಾಶ ಪಡೆಯುತ್ತಾರೆ. ಹವಾನಿಯಂತ್ರಿತ ಬಸ್ ಸೇವೆ ಇದರ ಪ್ರಮುಖ ಆಕರ್ಷಣೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುವ ಈ ಬಸ್ ಸಂಜೆ 6:05 ಕ್ಕೆ ಮರಳಲಿದೆ.
ಈ ಪ್ಯಾಕೇಜ್ನಲ್ಲಿ ಬೇಟಿ ನೀಡಬಹುದಾದ ದೇವಾಲಯಗಳು:
ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಶ್ರೀ ಷಣ್ಮುಖ ಸ್ವಾಮಿ ದೇವಸ್ಥಾನ, ಶ್ರೀ ದೇವಿ ಕರುಮಾರಿ ಅಮ್ಮನವರ ದೇವಸ್ಥಾನ, ಓಂಕಾರ್ ಹಿಲ್ಸ್ ದೇವಸ್ಥಾನ, ಇಸ್ಕಾನ್ ವೈಕುಂಠ ದೇವಸ್ಥಾನ , ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ ಆಶ್ರಮ, ಬನಶಂಕರಿ ದೇವಸ್ಥಾನಗಳಿಗೆ ದರ್ಶನ ಭಾಗ್ಯ ಸಿಗುತ್ತದೆ.
ಟಿಕೆಟ್ ದರ ಮತ್ತು ಬುಕ್ಕಿಂಗ್ ಮಾಹಿತಿ:
ಈ ಪ್ಯಾಕೇಜ್ನಲ್ಲಿ ದೇವಾಲಯಗಳಿಗೆ ಹೋಗ ಬಯಸುವವರಿಗೆ ಟಿಕೆಟ್ ದರವೂ ನಿಗದಿಯಾಗಿದೆ. ಪ್ರಯಾಣ ಮಾಡಲಿರುವ ವಯಸ್ಕರಿಗೆ ₹450 ಮತ್ತು ಮಕ್ಕಳಿಗೆ ₹350 ರೂ. ಶುಲ್ಕವಿದೆ (ಜಿಎಸ್ಟಿ ಒಳಗೊಂಡು). ಆಸಕ್ತರು www.ksrtc.in ವೆಬ್ಸೈಟ್ ಮೂಲಕ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಎಂಟಿಸಿ ಈ ಕೆಳಕಂಡ ಸಹಾಯವಾಣಿ ಸಂಖ್ಯೆಗಳನ್ನೂ ನೀಡಿದೆ. 080-22483777, 7760991170 ಈ ನಂಬರ್ಗಳಿಗೆ ನೀವು ಕರೆಮಾಡಿ ಮಾಹಿತಿ ಪಡೆಯಬಹುದು.
ಸಾರಿಗೆ ಸಚಿವರಿಂದ ಪ್ರತಿಕ್ರಿಯೆ:
ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸೇವೆಯ ಘೋಷಣೆಯ ಸಂದರ್ಭದಲ್ಲಿ ಮಾತನಾಡಿ, "ಒಂದು ವರ್ಷದಲ್ಲಿ 50,000 ಕ್ಕೂ ಹೆಚ್ಚು ಜನ ಪ್ರಯಾಣಿಸಿದ ಬೆಂಗಳೂರು ದರ್ಶಿನಿ ಮತ್ತು ಈಶಾ ಪ್ಯಾಕೇಜ್ಗಳ ನಂತರ ನಾವು ದಿವ್ಯ ದರ್ಶನ ಸೇವೆಯನ್ನು ಆರಂಭಿಸುತ್ತಿದ್ದೇವೆ. ಇದು ದೇವಾಲಯ ಪ್ರವಾಸವನ್ನು ಸುಲಭ, ಅನುಕೂಲಕರ ಹಾಗೂ ಸಮಗ್ರವಾಗಿಸಲು ಸಹಾಯಮಾಡುತ್ತದೆ," ಎಂದರು.
ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ:
ದಿನನಿತ್ಯದ ಜಿಜ್ಞಾಸೆಯಿಂದ ದೂರ ಸಾಗಲು ಇಚ್ಛಿಸುವವರಿಗಾಗಿ 'ದಿವ್ಯ ದರ್ಶನ' ಹೊಸ ದಾರಿಯೊಂದು. ಧಾರ್ಮಿಕ ಪ್ರವಾಸೋದ್ಯಮ, ಸ್ಥಳೀಯ ಹೈಲೈಟ್ಗಳು ಮತ್ತು ಸುರಕ್ಷಿತ ಸಾರಿಗೆ ಎಲ್ಲವೂ ಇರುತ್ತದೆ. ಶ್ರದ್ಧಾವಂತ ಭಕ್ತರು ಮಾತ್ರವಲ್ಲದೇ, ಕುಟುಂಬಗಳು, ಹಿರಿಯ ನಾಗರಿಕರು ಮತ್ತು ಪ್ರವಾಸೋದ್ಯಮ ಆಸ್ಥಾಪಕರು ಈ ಬಸ್ ಸೇವೆಯನ್ನು ಉತ್ಸಾಹದಿಂದ ಸ್ವೀಕರಿಸುವ ಸಾಧ್ಯತೆ ಇದೆ.
ಇದೇ ಮೊದಲಬಾರಿಗೆ ಬಿಎಂಟಿಸಿ ನಡೆಸುತ್ತಿರುವ 'ದಿವ್ಯ ದರ್ಶನ' ಬಸ್ ಪ್ಯಾಕೇಜ್, ಧಾರ್ಮಿಕ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಸಾರಿಗೆಯ ಸಂಯೋಜನೆಯೊಂದಾಗಿದೆ. ಬೆಂಗಳೂರಿನ ವಿವಿಧ ದೇವಾಲಯಗಳನ್ನು ಒಂದು ದಿನದಲ್ಲಿ ಸುತ್ತಿಬರುವ ಅವಕಾಶವನ್ನು ಈ ಯೋಜನೆ ನೀಡುತ್ತದೆ. ಸಹಜವಾಗಿ ದುಬಾರಿ ಟೆಕ್ಸಿ ಅಥವಾ ಪ್ರೈವೇಟ್ ಟೂರ್ಗೆ ಪರ್ಯಾಯವಾಗಿ, ಕಡಿಮೆ ವೆಚ್ಚದಲ್ಲಿ ಆರಾಮದಾಯಕ ಪ್ರವಾಸಕ್ಕೆ ಇದು ಉತ್ತಮ ಆಯ್ಕೆಯಾಗಿದೆ
More From GoodReturns

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications