ಖಾಸಗೀಕರಣಕ್ಕೆ ಒಳಪಟ್ಟ ಬಳಿಕ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಅಸ್ಸಾಂ ನುಮಾಲಿಗಡ ಸಂಸ್ಕರಣ ಘಟಕದ ಸಂಪೂರ್ಣ ಪಾಲನ್ನು ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ಗೆ 9,876 ಕೋಟಿ ರೂ.ಗೆ ಮಾರಾಟ ಮಾಡುವುದಾಗಿ ಪ್ರಕಟಿಸಿದೆ.
ಅಸ್ಸಾಂ ನುಮಾಲಿಗಡ ತೈಲ ಸಂಸ್ಕರಣಾ ಘಟಕದ ಮಾರಾಟವು ಭಾರತದ ಎರಡನೇ ಅತಿದೊಡ್ಡ ಇಂಧನ ರೀಟೇಲ್ ಸಂಸ್ಥೆಯಾಗಿರುವ ಬಿಪಿಸಿಎಲ್ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ.
ನುಮಾಲಿಗಡ ರಿಫೈನರಿ ಲಿಮಿಟೆಡ್ನ್ನು (ಎನ್ಆರ್ಎಲ್) ಸರ್ಕಾರವು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದರ ಭಾಗವಾಗಿ ಬಿಪಿಸಿಎಲ್ ತನ್ನ ಎಲ್ಲಾ ಶೇಕಡಾ 61.65ರಷ್ಟು ಪಾಲುದಾರಿಕೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ.

ಆಯಿಲ್ ಇಂಡಿಯಾ ಲಿಮಿಟೆಡ್, ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಹಾಗೂ ಅಸ್ಸಾಂನ ಸರ್ಕಾರ ಪಾಲುದಾರಿಕೆ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದು, ಬಿಪಿಸಿಎಲ್ ಮಂಡಳಿಯು ಸೋಮವಾರ ಮಾರಾಟಕ್ಕೆ ಸಮ್ಮತಿಸಿದೆ.
"ಮಾರ್ಚ್ 1, 2021 ರಂದು ನಡೆದ ಸಭೆಯಲ್ಲಿ ಬಿಪಿಸಿಎಲ್ ನಿರ್ದೇಶಕರ ಮಂಡಳಿ, ಎನ್ಆರ್ಎಲ್ನಲ್ಲಿ ಬಿಪಿಸಿಎಲ್ ಹೊಂದಿರುವ 445.35 ಕೋಟಿ ಮೊತ್ತದ ಸಂಪೂರ್ಣ ಷೇರುಗಳನ್ನು ಒಐಎಲ್ ಮತ್ತು ಇಐಎಲ್ ಒಕ್ಕೂಟಕ್ಕೆ ಮತ್ತು ಅಸ್ಸಾಂ ಸರ್ಕಾರಕ್ಕೆ ಮಾರಾಟ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಿದೆ" ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಒಟ್ಟು ಪರಿಗಣನೆಯು 9,875.96 ಕೋಟಿ ರೂ. ಒಐಎಲ್ ಮತ್ತು ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ನ ಒಕ್ಕೂಟವು ಶೇಕಡಾ 49 ರಷ್ಟು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಉಳಿದ 13.65 ಶೇಕಡಾವನ್ನು ಅಸ್ಸಾಂ ಸರ್ಕಾರಕ್ಕೆ ಮಾರಾಟ ಮಾಡಲಾಗುವುದು.
ಎನ್ಆರ್ಎಲ್ ಅಸ್ಸಾಂನಲ್ಲಿ ವಾರ್ಷಿಕ 3 ಮಿಲಿಯನ್ ಟನ್ ತೈಲ ಸಂಸ್ಕರಣಾಗಾರವನ್ನು ನಿರ್ವಹಿಸುತ್ತಿದೆ. ಒಐಎಲ್ ಪ್ರಸ್ತುತ ಎನ್ಆರ್ಎಲ್ನಲ್ಲಿ ಶೇ 26ರಷ್ಟು ಷೇರುಗಳನ್ನು ಹೊಂದಿದ್ದರೆ, ಅಸ್ಸಾಂ ಸರ್ಕಾರವು ಶೇಕಡಾ 12.35 ರಷ್ಟನ್ನು ಹೊಂದಿದೆ.
ಇನ್ನು ಬಿಪಿಸಿಎಲ್ ತೈಲ ಸಂಸ್ಕರಣಾ ಘಟಕ ಮಾರಾಟ ಸುದ್ದಿ ಹೊರಬಿದ್ದ ಬಳಿಕ ಇಂದು ಕಂಪನಿಯ ಷೇರುಗಳು ಶೇಕಡಾ 3ಕ್ಕೂ ಅಧಿಕ ಏರಿಕೆಗೊಂಡು 52 ವಾರಗಳ ಗರಿಷ್ಠ 482.40 ರೂಪಾಯಿಗೆ ತಲುಪಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications