ವಿಆರ್ಎಸ್ನಿಂದಾಗಿ ಬಿಎಸ್ಎನ್ಎಲ್ಗೆ 1,300 ಕೋಟಿ ಉಳಿತಾಯ
ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಉದ್ಯೋಗಿಗಳಿಗಾಗಿ ಸ್ವಯಂ ನಿವೃತ್ತಿ ಯೋಜನೆಯನ್ನು ನೀಡಿತ್ತು. 78,569 ಉದ್ಯೋಗಿಗಳು ಸ್ವಯಂ ನಿವೃತ್ತಿ ಬಯಸಿ ಅರ್ಜಿಗಳನ್ನು ಹಾಕಿದ್ದು, ಇದರಿಂದಾಗಿ 1,300 ಕೋಟಿ ಉಳಿತಾಯವಾಗುವ ನಿರೀಕ್ಷೆ ಇದೆ.
ಭಾರತ್ ಸಂಚಾರ್ ನಿಗಮ ಲಿಮಿಡೆಟ್ 2020ರ ಜನವರಿಯಲ್ಲಿ ಸ್ವಯಂ ನಿವೃತ್ತಿ ಬಯಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಎಲ್ಲಾ ಅರ್ಜಿಗಳು ವಿಲೇವಾರಿಯಾದರೆ 2020ರ ಆರ್ಥಿಕ ವರ್ಷದಲ್ಲಿ ನಿಗಮಕ್ಕೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಲಿದೆ.
ಬಿಎಸ್ಎನ್ಎಲ್ ಹಾಗು ಎಂಟಿಎನ್ಎಲ್ ಸಂಸ್ಥೆಗಳ ವಿಲೀನ
ಬಿಎಸ್ಎನ್ಎಲ್ ಅಧ್ಯಕ್ಷ ಪಿ. ಕೆ. ಪುರಾವಾರ್ ಈ ಕುರಿತು ಹೇಳಿಕೆ ನೀಡಿದ್ದು, "ಜನವರಿ 31, 2020ಕ್ಕೆ ಅನ್ವಯವಾಗುವಂತೆ ಸ್ವಯಂ ನಿವೃತ್ತಿಯನ್ನು ಜಾರಿಗೊಳಿಸಲಾಗುತ್ತದೆ. ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
BSNLನತ್ತ ಮುಖಮಾಡುತ್ತಿರುವ ಗ್ರಾಹಕರು: ಸಿಗಲಿದ್ಯಾ ಮರುಜೀವ?
ಬಿಎಸ್ಎನ್ಎಲ್ನ ಸ್ವಯಂ ನಿವೃತ್ತಿ ಯೋಜನೆ ಜನವರಿ 31, 2020ರಲ್ಲಿ ಆರಂಭವಾಗಲಿದೆ. ಇದರಿಂದಾಗಿ 1,300 ಕೋಟಿ ಉಳಿತಾಯವಾಗಲಿದೆ ಎಂದು ಅಂದಾಜಿಸಿದೆ.
ಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್ಟೆಲ್, ವೊಡಾಪೋನ್, ಐಡಿಯಾ
ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಸಂಸ್ಥೆಗಳನ್ನು ವಿಲೀನಗೊಳಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಒಂದೇ ವೇದಿಕೆಯಲ್ಲಿ ಎರಡೂ ಸಂಸ್ಥೆಗಳವರು ಒಂದಾಗಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರಿ ಸೌಮ್ಯದ ಬಿಎಸ್ಎನ್ಎಲ್ ಸುಮಾರು 90 ಸಾವಿರ ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿದೆ. ತೀವ್ರ ನಷ್ಟದಿಂದ ಹೊರ ಬರಲು ನಿಗಮ ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಘೋಷಣೆ ಮಾಡಿತ್ತು.
ಖಾಸಗಿ ಸಂಸ್ಥೆಗಳ ಅಗ್ಗದ ದರಗಳು ಮತ್ತು ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆ ಕಾರಣ ಬಿಎಸ್ಎನ್ಎಲ್ ನಷ್ಟಕ್ಕೆ ತುತ್ತಾಗಿತ್ತು. ಆರ್ಥಿಕ ಸಂಕಷ್ಟದಿಂದಾಗಿ 1.76 ಲಕ್ಷ ಸಿಬ್ಬಂದಿಗೆ ಮಾರ್ಚ್ನಲ್ಲಿ ವೇತನ ನೀಡಲು ನಿಗಮ ಪರದಾಟ ನಡೆಸಿತ್ತು.