ಆರ್ಥಿಕ ಪುನಶ್ಚೇತನಕ್ಕಾಗಿ ಸರ್ಕಾರದಿಂದ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಆ ಕಾರಣಕ್ಕೆ 2021- 22ರಲ್ಲಿ GDPಯ 3.3% ವಿತ್ತೀಯ ಕೊರತೆ ಗುರಿಯಲ್ಲಿ ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಜೆಟ್ ನಿರೀಕ್ಷೆ ವರದಿಯಲ್ಲಿ CARE ರೇಟಿಂಗ್ಸ್ ಹೇಳಿದೆ.
"2020- 21ರಲ್ಲಿ ವಿತ್ತೀಯ ಕೊರತೆ 7.8ರಿಂದ 8.4% ನಿರೀಕ್ಷೆ ಮಾಡಲಾಗಿತ್ತು. ಈ ವರ್ಷ ಅದು 5ರಿಂದ 5.5 ಪರ್ಸೆಂಟ್ ಆಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ವರ್ಷದ ಕೊನೆಗೆ ಖರ್ಚಿನ ಪ್ರಮಾಣ ಕಡಿಮೆ ಮಾಡುತ್ತಿದ್ದಂತೆ ಅದಿನ್ನೂ ಕಡಿಮೆ ಆಗಬಹುದು. ಕೊರೊನಾ ಮುಂಚಿನ ಗುರಿಯು 2022- 23ಕ್ಕೆ ಜಿಡಿಪಿಗೆ 3.1% ವಿತ್ತೀಯ ಕೊರತೆ ಇತ್ತು. ಆದರೆ ಸರ್ಕಾರದಿಂದ ಹೆಚ್ಚಿನ ವೆಚ್ಚ ಮಾಡುತ್ತಿರುವುದರಿಂದ ಆ ಗುರಿಯ ಪರಿಷ್ಕರಣೆ ಆಗಬೇಕಿದ್ದು, ಸುಸ್ಥಿರ ಆರ್ಥಿಕ ಚೇತರಿಕೆಗೆ ಅದು ಅಗತ್ಯ ಇದೆ," ಎಂದು ವರದಿ ಹೇಳಿದೆ.
ರೇಟಿಂಗ್ ಏಜೆನ್ಸಿಯ ಪ್ರಕಾರ, ಕೊರತೆಯನ್ನು ಹೇಗೆ ಸಂಭಾಳಿಸುವುದು ಎಂಬುದಕ್ಕೆ ಸುಲಭವಾದ ನಕ್ಷೆ ಮಾಡಿಕೊಳ್ಳಬೇಕಿದೆ.

"ವಿತ್ತೀಯ ಕೊರತೆಗೆ ಹಣಕಾಸು ಒದಗಿಸುವುದರ ಮೇಲೆ ಮಾರುಕಟ್ಟೆ ಸಾಲ ಸಂಗ್ರಹವು ನಿಂತಿದೆ. 2020- 21ಕ್ಕೆ ಸಗಟು ಮಾರುಕಟ್ಟೆ ಸಾಲವು 7.8 ಲಕ್ಷ ಕೋಟಿ ರುಪಾಯಿ ಎಂಬ ಬಜೆಟ್ ಮಾಡಿಕೊಳ್ಳಲಾಗಿತ್ತು. ಆ ನಂತರ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಅದನ್ನು ರು. 13.1 ಲಕ್ಷ ಕೋಟಿಗೆ ಪರಿಷ್ಕರಿಸಲಾಯಿತು. 2021- 22ರಲ್ಲಿ ವಿತ್ತೀಯ ಕೊರತೆ ಜಿಡಿಪಿಯ 5- 5.5%, ನಾಮಿನಲ್ ಜಿಡಿಪಿ ಬೆಳವಣಿಗೆ 15% ಮತ್ತು ಮಾರುಕಟ್ಟೆ ಸಾಲದ ಮರುಪಾವತಿ ರು. 3.1 ಲಕ್ಷ ಕೋಟಿ ಹಾಗೂ FY22ಕ್ಕೆ ಒಟ್ಟಾರೆ ಮಾರುಕಟ್ಟೆ ಸಾಲ 10.1- 11.3 ಲಕ್ಷ ಕೋಟಿ ರುಪಾಯಿ ನಿರೀಕ್ಷೆ ಮಾಡುತ್ತೇವೆ," ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.
CARE ರೇಟಿಂಗ್ಸ್ ಪ್ರಕಾರ, ಸರ್ಕಾರದ ಸೆಕ್ಯೂರಿಟೀಸ್ ಗಳ ಪ್ರತಿಫಲದ (Yields) ಮೇಲೆ ಒತ್ತಡ ಹೆಚ್ಚಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications