ಬಜೆಟ್ ಬಗ್ಗೆ ಸುದ್ದಿ ಬರತೊಡಗಿವೆ. ಚಿನ್ನ ಕಡಿಮೆ ಆಗುತ್ತದೆ, ಕಬ್ಬಿಣ- ಉಕ್ಕಿನ ಬೆಲೆಯಲ್ಲಿ ಕಡಿಮೆ, ಇನ್ಷೂರೆನ್ಸ್ ಕಡಿಮೆ ಹೀಗೆ. ಹಾಗಿದ್ದರೆ ನಾವು ಸಂತೋಷ ಪಡಬಹುದಲ್ಲವಾ? ಅಪರೂಪಕ್ಕೋ ಅಥವಾ ಕನಿಷ್ಠ ವರ್ಷಕ್ಕೆ ಒಮ್ಮೆ ಕೂಡ ಖರೀದಿ ಮಾಡದ ಚಿನ್ನ- ಬೆಳ್ಳಿ, ಕಬ್ಬಿಣವನ್ನು ಕಡಿಮೆ ಮಾಡಿದರೆ ಏನು ಮಾಡೋಣ? ಅತಿ ದೊಡ್ಡ ನಿರೀಕ್ಷೆ ಅಂತ ಇದ್ದದ್ದು ಪೆಟ್ರೋಲ್- ಡೀಸೆಲ್, ಆದಾಯ ತೆರಿಗೆ, ಮೊಬೈಲ್ ಫೋನ್, ಚಾರ್ಜರ್, ಡಿಟಿಎಚ್ ಇಂಥವು.
ಸಾಮಾನ್ಯ ಜನರ ಪಾಲಿಗೆ ಅತಿ ದೊಡ್ಡ ಹೊರೆಯಾಗುವುದು ಪೆಟ್ರೋಲ್- ಡೀಸೆಲ್ ಬೆಲೆಯೇ. ಏಕೆಂದರೆ, ಸಾಗಣೆ ವೆಚ್ಚ ಜಾಸ್ತಿ ಆಗುತ್ತಿದ್ದಂತೆಯೇ ತರಕಾರಿ, ಹಾಲು- ಹಣ್ಣು, ದಿನಬಳಕೆ ಪದಾರ್ಥಗಳು, ಅಕ್ಕಿ- ಬೇಳೆ ಸಾಗಾಟ ದರ, ಬಸ್ ಪ್ರಯಾಣ ದರ, ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಸಾಗಾಟ ದರ ಹೀಗೆ ಎಲ್ಲವೂ ಏರಿಕೆ ಆಗುತ್ತದೆ. ಏಕೆಂದರೆ ಭಾರತದಲ್ಲಿ ಸರಕು ಸಾಗಾಟಕ್ಕೆ ಬಳಕೆ ಆಗುವ ಬಹುತೇಕ ಲಾರಿ- ಟ್ರಕ್ ಮತ್ತಿತರ ವಾಣಿಜ್ಯ ವಾಹನಗಳಿಗೆ ಬಳಸುವುದೇ ಡೀಸೆಲ್.
ಇನ್ನು ಆದಾಯ ತೆರಿಗೆ ವಿಚಾರಕ್ಕೆ ಬರುವುದಾದರೆ, ಈಗಿನ ರೀತಿಯಲ್ಲಿ ಸ್ಲ್ಯಾಬ್ ನಲ್ಲಿ ಬದಲಾವಣೆಯೇ ಮಾಡದೆ ಉಳಿಸಿದ ಉದಾಹರಣೆ ಕಳೆದ ಒಂದು ದಶಕದಲ್ಲಿಯಂತೂ ಸಿಗಲ್ಲ. ಪ್ರತಿಯೊಂದಕ್ಕೂ ಜಿಎಸ್ ಟಿ ಕಟ್ಟಿಸಿಕೊಳ್ಳಲಾಗುತ್ತಿದೆ. ಜತೆಗೆ ಪ್ರತಿ ತಿಂಗಳು ಲಕ್ಷ ಕೋಟಿ ರುಪಾಯಿ ದಾಟುತ್ತಿದೆ ಆದಾಯ. ಅಂಥದ್ದರಲ್ಲಿ ಆದಾಯ ತೆರಿಗೆ ಸ್ಲ್ಯಾಬ್- ದರದಲ್ಲಿ ಯಾವ ಬದಲಾವಣೆಯೂ ಮಾಡದಿರುವುದರ ಹಿಂದಿನ "ಉದಾತ್ತ" ಉದ್ದೇಶ ಏನು ಎಂಬುದು ಗೊತ್ತಾಗಲ್ಲ.

ಕೊರೊನಾ ಕಾರಣಕ್ಕೆ ನಗದು ಹರಿದಾಡಲಿ ಎಂದು ಸರ್ಕಾರದಿಂದ ನಾನಾ ಘೋಷಣೆ ಮಾಡಲಾಯಿತು. ಯಾವಾಗ ಹೀಗೆ ನಗದು ಪ್ರಮಾಣದ ಹರಿದಾಟ ಹೆಚ್ಚಾಗುತ್ತದೋ ತಾನಾಗಿಯೇ ಒಂದಿಷ್ಟು ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಅದರ ಬೆನ್ನಿಗೇ ಈಗ ಬಜೆಟ್ ನಲ್ಲಿ ಕೃಷಿ ಸೆಸ್ ಎಂದು ಮತ್ತೆ ಪೆಟ್ರೋಲ್- ಡೀಸೆಲ್ ದರ ಏರಿಸುತ್ತಿರುವುದರಿಂದ ಹಣದುಬ್ಬರ ಇನ್ನೂ ಹೆಚ್ಚಾಗಲಿದೆ.
ಈಗಾಗಲೇ ಕರ್ನಾಟಕದಲ್ಲಿ ವಿದ್ಯುತ್ ದರದಲ್ಲಿ ಏರಿಕೆ ಆಗಿದೆ. ಕೇಂದ್ರ ಬಜೆಟ್ ಪ್ರಕಾರ, ವಿದ್ಯುತ್ ದರ ಇಳಿಕೆ ಆಗುತ್ತದಂತೆ. ಅಷ್ಟರ ಮಟ್ಟಿಗೆ ಆ ಬಗ್ಗೆ ಕುತೂಹಲ ಇದ್ದೇ ಇದೆ. ಇನ್ನು ತಾಮ್ರದ ವಸ್ತುಗಳ ಬೆಲೆಯನ್ನು ಇಳಿಕೆ ಮಾಡುವುದರ ನೇರ ಪ್ರಯೋಜನ ಜನ ಸಾಮಾನ್ಯರಿಗೆ ಹೇಗೆ ಆಗಬಹುದು ಕಾದು ನೋಡಬೇಕಾಗಿದೆ.
ಬಹುತೇಕ ಗಮನಿಸಿದರೆ, ನಿತ್ಯ ಬಳಕೆಯ ಪದಾರ್ಥಗಳೇ ಆದ, ಇದುವರೆಗೂ ಶೇ 10ರಷ್ಟು ಇದ್ದ ಉತ್ಪನ್ನಗಳ ಕೃಷಿ ಸೆಸ್ ಅನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬಟಾಣಿ (ಶೇ 40), ಕಾಬೂಲ್ ಕಡಲೆ (ಶೇ 30), ಕಡಲೆ ಬೇಳೆ (ಶೇ 50), ಚಿಕ್ ಪೀಸ್ (ಶೇ 50), ವಿವಿಧ ಧಾನ್ಯಗಳ ಮೇಲಿನ (ಶೇ 20) ಮೇಲಿನ ಸೆಸ್ ಹೆಚ್ಚಳವಾಗಿದೆ. ಅದೇ ರೀತಿ ಸೇಬಿನ ಬೆಲೆಯೂ ಏರಿಕೆ ಆಗಲಿದೆ.
ಸನ್ನಿವೇಶ ಹೀಗಿರುವಾಗ ಈಗಿನ ಬಜೆಟ್ "ಜನ ಸಾಮಾನ್ಯರಿಗೆ ಹೊರೆಯಲ್ಲ" ಎನ್ನುವ ಅದೇ ಪ್ರತಿ ವರ್ಷದ ಬಜೆಟ್ ಬಾಯಿ ಮಾತನ್ನು ನಂಬುವುದು ಹೇಗೆ?
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications