ಕೇಂದ್ರ ಬಜೆಟ್ 2025-26 (Union Budget 2025)ರ ಸಾಲಿನ ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡಿಸಲು ಸಜ್ಜಾಗಿದ್ದು,ಕೇಂದ್ರ ಬಜೆಟ್ನತ್ತ ಎಲ್ಲರ ಚಿತ್ತ ನೆಟ್ಟಿದೆ.
ಹೌದು,ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2025 ಅನ್ನು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಹಲ್ವಾ ಕಾರ್ಯಕ್ರಮ ನಡೆಯಲಿದೆ ಹಾಗಾದರೆ ಇದರ ಮಹತ್ವವೇನು? ಇದನ್ನು ಯಾಕೆ ಮಾಡಲಾಗುತ್ತೆ ಎನ್ನುವ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಈಗಲೇ ಬಜೆಟ್ಗೆ ಸಂಬಂಧಿಸಿದಂತೆ ಹಲವಾರು ಚರ್ಚೆಗಳು, ಸಮಾಲೋಚನೆಗಳನ್ನು ಪೂರ್ತಿಗೊಳಿಸಿ ಬಜೆಟ್ ಪ್ರತಿಯನ್ನು ಸಿದ್ಧಪಡಿಸಿದ್ದಾರೆ. ಬಜೆಟ್ ಮಂಡನೆಯ ತಯಾರಿ ಭರಪೂರದಿಂದ ಸಾಗುತ್ತಿದ್ದು,ಈಗಲೇ ಸಾರ್ವಜನಿಕರಿಂದಲೂ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿತ್ತು.ಅವೆಲ್ಲವನ್ನೂ ಕ್ರೋಢೀಕರಿಸಿದ ಸಚಿವಾಲಯದ ಅಧಿಕಾರಿಗಳು ಅರ್ಹ ಸಲಹೆ ಸೂಚನೆಗಳನ್ನು ಸಚಿವರ ಗಮನಕ್ಕೆ ತಂದಿದ್ದಾರೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿದ್ದೇವೆ.
ಬಜೆಟ್ ಪ್ರತಿ ಅಂತಿಮಗೊಳಿಸಿ ಮುದ್ರಣ ಮಾಡುವ ಕೆಲಸ
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಕೆಲವು ದಿನಗಳ ಮೊದಲು ಕೇಂದ್ರ ಬಜೆಟ್ ಪ್ರತಿ ಅಂತಿಮಗೊಳಿಸಿ ಮುದ್ರಣ ಮಾಡುವ ಕೆಲಸ ನಡೆಯುತ್ತದೆ. ಇದನ್ನು ಹಲ್ವಾ ಕಾರ್ಯಕ್ರಮ ಎಂದೇ ಗುರುತಿಸಲ್ಪಟ್ಟ ಹಲ್ವಾ ಹಂಚುವ ಕಾರ್ಯಕ್ರಮವನ್ನು ನಡೆಸುತ್ತಾರೆ. ಇದನ್ನು ಯಾಕಾಗಿ ನಡೆಸುತ್ತಾರೆ ಎಂಬುವುದನ್ನು ಈ ಕೆಳಗಿನಂತೆ ಮಾಹಿತಿಯನ್ನು ನೀಡಲಾಗಿದೆ.
ಹಲ್ವಾ ಕಾರ್ಯಕ್ರಮ ಎಂದರೇನು?
ಬಜೆಟ್ ಅಧಿವೇಶನ ಶುರುವಾಗುವ ಕೆಲವು ದಿನಗಳ ಮೊದಲು ನಡೆಯುವ ಕಾರ್ಯಕ್ರಮವೇ ಹಲ್ಯಾ ಕಾರ್ಯಕ್ರಮ. ಇದು ಬಜೆಟ್ ಪ್ರತಿಯನ್ನು ಸಿದ್ದಪಡಿಸುವುದಕ್ಕೆ ಮುಂಚಿತವಾಗಿ ಆ ಕೆಲಸದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಸಿಹಿ ತಿನಿಸುವ ಕಾರ್ಯಕ್ರಮ ಇದಾಗಿದೆ.
ಹಲ್ವಾ ಕಾರ್ಯಕ್ರಮವಾದ ನಂತರ ಬಜೆಟ್ ಪ್ರತಿ ಸಿದ್ದಪಡಿಸುವ ಸಿಬ್ಬಂದಿಗಳು ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ಕೆಲಸ ಮಾಡುತ್ತಾರೆ. ಬಜೆಟ್ ಪ್ರತಿ ಕುರಿತಾದ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಬಜೆಟ್ ಪ್ರತಿ ಸಿದ್ಧಪಡಿಸುವ ನೌಕರರು ತಮ್ಮ ಜತೆಗೆ ಯಾವುದೇ ಸಂಪರ್ಕ ಸಾಧನೆಗಳನ್ನು ಕೊಂಡೊಯ್ಯುವಂತಿಲ್ಲ
ಹಲ್ವಾ ಕಾರ್ಯಕ್ರಮದ ವಾಡಿಕೆ
ಬಜೆಟ್ ಮುನ್ನ ನಡೆಯುವ ಹಲ್ವಾ ಕಾರ್ಯಕ್ರಮವು ಬಹಳ ವರ್ಷದಿಂದ ನಡೆದುಕೊಂಡು ಬಂದ ವಾಡಿಕೆಯಾಗಿದೆ. ಪ್ರತಿ ಬಜೆಟ್ಗೂ ಮುನ್ನ ಈ ಕಾರ್ಯಕ್ರಮವನ್ನು ಕೇಂದ್ರ ಸಚಿವರೇ ಮುಂದೆ ನಿಂತು ನಡೆಸಿಕೊಂಡುತ್ತಾರೆ. ಆ ದಿನದಂದು ದೊಡ್ಡ ಬಾಣಲೆಯಲ್ಲಿ ಬಿಸಿಬಿಸಿ ಹಲ್ವಾ ಸಿದ್ದಮಾಡಿ ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೇ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಅಂದರೆ ಬಜೆಟ್ ಪ್ರತಿ ಸಿದ್ಧಪಡಿಸುವ ನೌಕರರಿಗೆ ಹಲ್ವಾ ಹಂಚಿ ಬಜೆಟ್ ಮುದ್ರಣ ಪ್ರತಿಯನ್ನು ಶುರುವಾಡುತ್ತಾರೆ.
ಹಣಕಾಸು ಸಚಿವಾಲಯ ಇರುವಂತಹ ನಾರ್ತ್ ಬ್ಲಾಕ್ನ ಬೇಸ್ಮೆಂಟ್ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಹಲ್ವಾ ಪಡೆದುಕೊಂಡ ನೌಕರರು, ನಾರ್ತ್ ಬ್ಲಾಕ್ ಬೇಸ್ಮೆಂಟ್ನಲ್ಲಿರುವ ಮುದ್ರಣಾಲಯದಲ್ಲಿ ಬಜೆಟ್ ಪ್ರತಿ ಸಿದ್ಧಪಡಿಸುವ ಕೆಲಸಕ್ಕೆ ಹೋಗುತ್ತಾರೆ.
ಹಲ್ವಾ ಕಾರ್ಯಕ್ರಮದ ಮಹತ್ವವೇನು?
ಬಜೆಟ್ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ಸೋರಿಕೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾರ್ತ್ ಬ್ಲಾಕ್ ನೆಲಮಾಳಿಗೆಯನ್ನು ಕೋಟೆಯಾಗಿ ಪರಿವರ್ತಿಸಲಾಗುತ್ತದೆ. ಬಜೆಟ್ ತಯಾರಿಕೆ ಅಥವಾ ಮುದ್ರಣದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಸುಮಾರು 100 ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಹೊರ ಜಗತ್ತಿನಿಂದ ದೂರ ಉಳಿಯುತ್ತಾರೆ. ಹಣಕಾಸು ಸಚಿವರು ಬಜೆಟ್ ಮಂಡಿಸುವ ತನಕ ಯಾರೂ ಹೊರಗೆ ಬರುವುದಿಲ್ಲ.
ಬಜೆಟ್ ಪ್ರತಿ ಸೋರಿಕೆಯನ್ನು ತಡೆಯಲು ಇಲೆಕ್ಟ್ರಾನಿಕ್ ಜಾಮರ್, ಸೈಬರ್ ಸೆಕ್ಯುರಿಟಿಗಳನ್ನು ಬಳಸಲಾಗುತ್ತದೆ. ಹಣಕಾಸು ಸಚಿವರು ಮಾತ್ರವೇ ಮುದ್ರಣ ಸ್ಥಳಕ್ಕೆ ಬಂದು ಹೋಗಬಹುದು. ಆದರೆ ಮೊಬೈಲ್ ಫೋನ್ ಕೊಂಡೊಯ್ಯುವಂತೆ ಇಲ್ಲ.
1950ನೇ ಇಸವಿಯಲ್ಲಿ ಬಜೆಟ್ ಸೋರಿಕೆ ನಂತರ ಈ ಕ್ರಮ ಅಳವಡಿಕೆ
1950ರಲ್ಲಿ ಬಜೆಟ್ ಪ್ರತಿಯ ವಿವರ ಸೋರಿಕೆ ಆದ ಬಳಿಕ ಈ ರೀತಿ ಮುಂಜಾಗ್ರತಾ ಕ್ರಮವನ್ನ ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತಿದೆ. 1980ರಲ್ಲಿ ನಾರ್ತ್ ಬ್ಲಾಕ್ನ ಬೇಸ್ಮೆಂಟ್ನಲ್ಲಿ ಮುದ್ರಣಾಲಯ ಸ್ಥಾಪಿಸಲಾಯಿತು. ಅಲ್ಲಿಂದೀಚೆಗೆ ಇದೇ ಮುದ್ರಣಾಲಯದಲ್ಲಿ ಕೇಂದ್ರ ಬಜೆಟ್ ಪ್ರತಿಗಳ ಮುದ್ರಣ ಮಾಡುವ ಪದ್ದತಿಯನ್ನು ಪಾಲನೆ ಮಾಡಿಕೊಂಡು ಬಂದಿದೆ.
ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಯಾವಾಗ ಮಂಡಿಸುತ್ತಾರೆ?
ನಿರ್ಮಲಾ ಸೀತಾರಾಮನ್ ದಶಕದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ.ಈ ಬಾರಿ ಕೂಡ ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ಸಮಯಲ್ಲಿ ಶುರುವಾಗುತ್ತೆ?
ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅವರು ಈಗಲೇ ಆರು ಪೂರ್ಣ ಬಜೆಟ್ಗಳನ್ನು ಮತ್ತು ಎರಡು ಮಧ್ಯಂತರ ಬಜೆಟ್ಗಳು ಸೇರಿದಂತೆ ಇದು ಅವರ ಎಂಟನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications