ಬೆಂಗಳೂರು, ಏಪ್ರಿಲ್ 3: ಹಣಕಾಸಿನ ಬಿಕ್ಕಟ್ಟು ಮತ್ತು ಸರಣಿ ಕಾನೂನು ತೊಡಕುಗಳ ಸಂಕಷ್ಟದ ಹಿನ್ನೆಲೆಯಲ್ಲಿ ಎಜುಟೆಕ್ ಸಂಸ್ಥೆ ಬೈಜೂಸ್ ಶಿಕ್ಷಕರು ಸೇರಿದಂತೆ 500 ಉದ್ಯೋಗಿಗಳನ್ನು ವಜಾಗೊಳಿಸಿದೆ. ಪ್ರಸ್ತುತ ಕಂಪನಿಯು ಸುಮಾರು 13,000 ಉದ್ಯೋಗಿಗಳನ್ನು ಹೊಂದಿದೆ.
ಕೆಲವು ಉದ್ಯೋಗಿಗಳು ಮತ್ತು ಮಾರಾಟ, ಮಾರ್ಕೆಟಿಂಗ್ ಮತ್ತು ಟ್ಯೂಷನ್ ಸೆಂಟರ್ಗಳಾದ್ಯಂತ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಕೆಲವು ಉದ್ಯೋಗಿಗಳು ವಜಾಗೊಳಿಸುವ ಬಗ್ಗೆ ಇಮೇಲ್ಗಳನ್ನು ಸ್ವೀಕರಿಸಿದರೆ, ಇತರರನ್ನು ಫೋನ್ ಕರೆಗಳ ಮೂಲಕ ವಜಾಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಬೈಜೂಸ್ನ ಉದ್ಯೋಗಿಯೊಬ್ಬರು ಕಂಪನಿಯು ಆನ್ಲೈನ್ ಶಿಕ್ಷಕರನ್ನು ಆಫ್ಲೈನ್ನಲ್ಲಿ ಕೆಲಸ ಮಾಡುವಂತೆ ಮತ್ತು ಕಂಪನಿಯ ಟ್ಯೂಷನ್ ಸೆಂಟರ್ಗಳಲ್ಲಿ ಕಲಿಸಲು ಹೇಳುತ್ತಿದೆ. ಅದನ್ನು ಮಾಡಲು ಸಾಧ್ಯವಾಗದವರನ್ನು ಈಗ ವಜಾ ಮಾಡಲಾಗುತ್ತಿದೆ. ಒಡಿಶಾದ ಆನ್ಲೈನ್ ಶಿಕ್ಷಕರನ್ನು ರಾಜಸ್ಥಾನದ ಆಫ್ಲೈನ್ ಟ್ಯೂಷನ್ ಸೆಂಟರ್ಗೆ ಸ್ಥಳಾಂತರಿಸಲು ಮುಂದಾಗುತ್ತಿದೆ. ಇದು ಸಾಧ್ಯವಾಗದ ಕಾರಣ ಅನೇಕರು ರಾಜೀನಾಮೆ ನೀಡುತ್ತಿದ್ದಾರೆ ಮತ್ತು ಕೆಲವರನ್ನು ವಜಾ ಮಾಡುತ್ತಿದ್ದಾರೆ ಎಂದು ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾರೆ.
ಬೈಜೂಸ್ ಇತ್ತೀಚೆಗೆ ತನ್ನ 90% ಬೋಧನಾ ಕೇಂದ್ರಗಳು ಅಂದರೆ 292 ರಲ್ಲಿ 262 ಹೈಬ್ರಿಡ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಹಾಗೂ ಉಳಿದವು ಪುನರ್ರಚನೆಗೆ ಒಳಗಾಗುತ್ತದೆ ಎಂದು ಹೇಳಿದೆ. ವಜಾಗೊಳಿಸುವಿಕೆಯ ಬಗ್ಗೆ ಬೈಜೂಸ್ ವಕ್ತಾರರು, ನಾವು ಅಕ್ಟೋಬರ್ 2023 ರಲ್ಲಿ ಕಾರ್ಯಾಚರಣೆಯ ರಚನೆಗಳನ್ನು ಸರಳೀಕರಿಸಲು, ವೆಚ್ಚದ ಮೂಲವನ್ನು ಕಡಿಮೆ ಮಾಡಲು ಮತ್ತು ಉತ್ತಮ ನಗದು ಹರಿವಿನ ನಿರ್ವಹಣೆಗಾಗಿ ಘೋಷಿಸಲಾದ ವ್ಯಾಪಾರ ಪುನರ್ರಚನೆಯ ಅಂತಿಮ ಹಂತದಲ್ಲಿದ್ದೇವೆ ಎಂದು ಹೇಳಿದ್ದಾರೆ.
ನಾಲ್ಕು ವಿದೇಶಿ ಹೂಡಿಕೆದಾರರು ಕಂಪೆನಿ ವಿರುದ್ದ ಹೂಡಿರುವ ದಾವೆಯಿಂದಾಗಿ ಕಂಪನಿಯು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಸ್ತುತ ಸಂದರ್ಭಗಳನ್ನು ಗಮನಿಸಿದರೆ ಪ್ರತಿಯೊಬ್ಬ ಉದ್ಯೋಗಿ ಮತ್ತು ಪರಿಸರ ವ್ಯವಸ್ಥೆಯು ಅಪಾರ ಒತ್ತಡವನ್ನು ಎದುರಿಸುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications