ಗ್ರಾಹಕ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ 7.34%ಗೆ ಏರಿಕೆ ಆಗಿದೆ. ಅದರ ಹಿಂದಿನ ತಿಂಗಳು, ಆಗಸ್ಟ್ ನಲ್ಲಿ 6.69% ಇತ್ತು. ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಹಣದುಬ್ಬರ ಏರಿಕೆ ಆಗಿದೆ ಎಂಬುದನ್ನು ಸೋಮವಾರದಂದು ಸರ್ಕಾರದ ದತ್ತಾಂಶವು ಬಹಿರಂಗ ಪಡಿಸಿದೆ.
ಈ ವರ್ಷದ ಜನವರಿಯಿಂದ ಈಚೆಗೆ ದಾಖಲಾದ ಹೆಚ್ಚಿನ ಗ್ರಾಹಕ ಹಣದುಬ್ಬರ ಇದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಹಣದುಬ್ಬರದ ಗುರಿ 2- 6 ಪರ್ಸೆಂಟ್. ಈಗಿನ ರೀಟೇಲ್ ದರಗಳ ಏರಿಕೆಯಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಾಲ ವಿತರಣೆ ದರವನ್ನು ಇನ್ನಷ್ಟು ಇಳಿಸಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.
ಗ್ರಾಹಕ ದರ ಸೂಚ್ಯಂಕದಿಂದ (ಸಿಪಿಐ) ನಿರ್ಧಾರ ಆಗುವ ಚಿಲ್ಲರೆ ಹಣದುಬ್ಬರ ದರವು ಆರ್ಥಿಕ ತಜ್ಞರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಆಹಾರ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ 10.68% ಇದೆ. ಅದರ ಹಿಂದಿನ ತಿಂಗಳಾದ ಆಗಸ್ಟ್ ನಲ್ಲಿ 9.05% ಇತ್ತು. ಕೇಂದ್ರ ಬ್ಯಾಂಕ್ ಸಾಮಾನ್ಯವಾಗಿ ಗ್ರಾಹಕ ಹಣದುಬ್ಬರ ದರವನ್ನು ನಿಗಾ ಮಾಡುತ್ತದೆ. ಅದರ ಆಧಾರದಲ್ಲಿ ಹಣಕಾಸು ನೀತಿ ರೂಪಿಸುತ್ತದೆ.

ಕಳೆದ ವಾರ ನಡೆದ ಹಣಕಾಸು ನೀತಿ ಸಭೆಯಲ್ಲಿ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡಿಲ್ಲ. ಕಳೆದ ಕೆಲವು ತಿಂಗಳಿನಿಂದಲೇ ಆರ್ ಬಿಐ ಆರ್ಥಿಕ ಪುನಶ್ಚೇತನದ ಕಡೆಗೆ ದೃಷ್ಟಿ ನೆಟ್ಟಿದೆ. ಇದರ ಜತೆಗೆ ಹಣದುಬ್ಬರ ನಿಯಂತ್ರಣದಲ್ಲೇ ಇರಿಸಿಕೊಳ್ಳುವ ಕಡೆಗೆ ನಿಗಾ ವಹಿಸಿದೆ.
ಐಐಪಿ (ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್)
ಕೈಗಾರಿಕೆ ಉತ್ಪಾದನೆ ಆಗಸ್ಟ್ ನಲ್ಲಿ 8% ಕುಸಿದಿದೆ. ಉತ್ಪಾದನೆ, ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆ ವಲಯದಲ್ಲಿನ ಕುಸಿತದಿಂದ ಹೀಗೆ ಕುಗ್ಗಿದೆ. ಉತ್ಪಾದನಾ ವಲಯ 8.6%, ಗಣಿಗಾರಿಕೆ ಉತ್ಪಾದನೆ 9.8% ಹಾಗೂ ವಿದ್ಯುತ್ 1.8% ಕುಸಿದಿದೆ. ಆಗಸ್ಟ್ 2019ರಲ್ಲಿ 1.4% ಕುಸಿದಿತ್ತು. ಈ ವರ್ಷ ಜುಲೈನಲ್ಲಿ 10.4% ಹಾಗೂ ಜೂನ್ ನಲ್ಲಿ 15.7% ಕುಸಿತ ಕಂಡಿತ್ತು.
ಕೊರೊನಾ ಮುಂಚಿನ ತಿಂಗಳ ಅಂಕಿ- ಅಂಶಗಳ ಜತೆಗೆ ಕೊರೊನಾ ನಂತರದ ತಿಂಗಳ ದತ್ತಾಂಶವನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications