bs Yediyurappa ಬಂಧಿಸದಂತೆ ಕೋರ್ಟ್‌ನಿಂದ ಆದೇಶ, ಬಜಾವಾದ ಬಿಎಸ್‌ವೈ

ಬೆಂಗಳೂರು, ಜೂನ್‌ 14: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಅವರಿಗೆ ಬಿಗ್‌ ರಿಲೀಫ್‌ ಅನ್ನು ಕೋರ್ಟ್‌ ನೀಡಿದೆ.

ಪೋಕ್ಸೋ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅಲ್ಲದೆ ಅವರ ಬಂಧನಕ್ಕೂ ವಾರೆಂಟ್‌ ಕೂಡ ಜಾರಿಯಾಗುತ್ತು. ಆದರೆ ಈಗ ಕೋರ್ಟ್‌ ಬಂಧಿಸದಂತೆ ಆದೇಶ ನೀಡಲಾಗಿದೆ.

bs Yediyurappa ಬಂಧಿಸದಂತೆ ಕೋರ್ಟ್‌ನಿಂದ ಆದೇಶ, ಬಜಾವಾದ ಬಿಎಸ್‌ವೈ

ನಿನ್ನೆಯಿಂದಲೇ ಬಿಎಸ್‌ ಯಡಿಯೂರಪ್ಪ ಅವರನ್ನು ಪೊಲೀಸರು ಹುಡುಕಾಡುತ್ತಿದ್ದರು. ಆದರೆ ಬಿಎಸ್‌ವೈ ಮಾತ್ರ ಕರ್ನಾಟಕದಲ್ಲಿ ಇರಲಿಲ್ಲ. ಬಳಿಕ ಮೂಲಗಳ ಪ್ರಕಾರ ದೆಹಲಿಯಲ್ಲಿರುವ ಮಗ, ಸಂಸದ ಬಿವೈ ರಾಘವೇಂದ್ರ ಅವರ ಮನೆಯಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಕೊನೆಗೆ ಅವರು ಅಲ್ಲೂ ಇಲ್ಲ ಎಂದು ಪತ್ತೆಯಾಗಿತ್ತು.

ಇಂದು ಅವರ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯದ ಮುಂದೆ ಬಂದಿತ್ತು. ಬಿಎಸ್‌ವೈ ಅವರ ಪರ ವಕೀಲ ನಾಗೇಶ್‌ ವಾದ ಮಂಡಿಸಿದರು. "ವಿಧಾನಬದ್ಧವಾಗಿ ಬಿಎಸ್‌ವೈ ಅವರಿಗೆ ನೋಟಿಸ್ ನೀಡಲಾಗಿದೆ. ಜೂನ್ 15 ರೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಅದಕ್ಕೂ ಮೊದಲು ಅವರು (ಸಿಐಡಿ) ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ಅದಕ್ಕೆ ಅವರು ಕಾರ್ಯವಿಧಾನವನ್ನು ಅನುಸರಿಸಬೇಕಾಗುತ್ತದೆ. ಅವರು ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಹಾಜರುಪಡಿಸಬೇಕಾಗುತ್ತದೆ. ಅವರು (ನ್ಯಾಯಾಲಯದಲ್ಲಿ), ಇವೆಲ್ಲವೂ ಕಾರ್ಯವಿಧಾನಗಳು ಮತ್ತು ಇಲಾಖೆ ಅದನ್ನು ಮಾಡುತ್ತದೆ" ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದರು.

ಈಗ ಮುಂದಿನ ವಿಚಾರಣೆ ತನಕ ಬಂಧನ ಮಾಡಬೇಡಿ. ಜೂನ್‌ 17ರಂದು ಬಿಎಸ್‌ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್‌ ತಿಳಿಸಿದೆ. ಕೋರ್ಟ್‌ನ ಮುಂದಿನ ವಿಚಾರಣೆವರೆಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ.

ಇದರಿಂದ ಸಿಐಡಿ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿ ಯಡಿಯೂರಪ್ಪನವವರಿಗೆ ತಾತ್ಕಾಲಿಕ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಇನ್ನು ಜೂನ್‌ 17ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕೆಂದು ಯಡಿಯೂರಪ್ಪ ಅವರಿಗೆ ಕೋರ್ಟ್‌ ಸೂಚಿಸಿದ್ದು, ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+