ಕುರುಕಲು ತಿಂಡಿ, ಲಘು ಉಪಾಹಾರಗಳಿಗೆ ಪ್ರಸಿದ್ದ ಪಡೆದುಕೊಂಡಿರುವ ಭಾರತದಲ್ಲಿ ಇದರ ಉದ್ಯಮದ ಮೂಲಕ ಈಗಾಗಲೇ ಹಲವು ಸಂಖ್ಯೆಯಲ್ಲಿ ಉದ್ಯಮಿಗಳು ಭಾರೀ ಲಾಭ ಗಳಿಸುತ್ತಿದ್ದು, ವಿದೇಶಗಳಿಗೆ ಕೂಡ ರಫ್ತಾಗುತ್ತಿದೆ. ಹೀಗೆ ವಿದೇಶಿ ರಾಷ್ಟ್ರಗಳಲ್ಲಿ ಭಾರತೀಯ ಉತ್ಪನ್ನಗಳ ಬಗ್ಗೆ ಕ್ರೇಜ್ ಮೂಡಿಸುವ ಮೂಲಕ ಭಾರತದ ತಿಂಡಿ ತಿನಿಸುಗಳನ್ನು ಹೊರಗಿನ ದೇಶಗಳಲ್ಲಿ ಕೂಡ ಪ್ರಚಾರ ನೀಡಿದ್ದಾರೆ. ಒಟ್ಟಿನ್ಲಲಿ ಇದರಿಂದ ಭಾರತಕ್ಕೆ ವಿದೇಶಿ ವಿನಿಮಯ ಗಳಿಕೆಗೆ ನೆರವು ನೀಡುತ್ತಿದ್ದಾರೆ. ಸದ್ಯ ನಾವಿಲ್ಲಿ ಇದೇ ಉದ್ಯಮದ ಮಾಡುತ್ತಿರುವ ಉದ್ಯಮಿ ಬಗ್ಗೆ ಮಾಹಿತಿ ನೀಡಿದ್ದೇವೆ. ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಹಲವಾರು ಲಘು ಉಪಾಹಾರ ತಯಾರಕ ಕಂಪೆನಿಗಳಿವೆ. ಅವುಗಳಲ್ಲಿ ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕೂಡ ಒಂದಾಗಿದೆ. ಸದ್ಯ ಇದೇ ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಮುಖ್ಯಸ್ಥರಾಗಿರುವ ದೀಪಕ್ ಅಗರ್ವಾಲ್ ಅವರು ಭಾರತದ ತಿಂಡಿ ತಿನಿಸುಗಳು ಹಾಗೂ ಲಘು ಉಪಾಹಾರಗಳನ್ನು ಕೇವಲ ದೇಶದಲ್ಲೇ ಅಲ್ಲದೆ ವಿಶ್ವದಲ್ಲೇ ಖ್ಯಾತಿ ಸಿಗುವಂತೆ ಮಾಡಿದ್ದಾರೆ.
ದೀಪಕ್ ಅಗರ್ವಾಲ್ ಅವರು ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಕಂಪೆನಿಯ ಮಾರುಕಟ್ಟೆ ಮೌಲ್ಯವು ಡಿಸೆಂಬರ್ 10ರ ವೇಳೆಗೆ ಬರೊಬ್ಬರಿ 21430 ಕೋಟಿ ರೂ. ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ದೀಪಕ್ ಅವರು ಭಾರತೀಯ ಬಿಲಿಯನೇರ್ ಉದ್ಯಮಿ ಹಾಗೂ ಕಂಪನಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವರತನ್ ಅಗರ್ವಾಲ್ ಅವರ ಪುತ್ರನಾಗಿದ್ದಾರೆ. ಇನ್ನು ಫೋರ್ಬ್ಸ್ ಪ್ರಕಾರ ಶಿವರತನ್ ನಿವ್ವಳ ಮೌಲ್ಯ 1.9 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.

ಕಂಪೆನಿಯ ಆರಂಭ ಹೇಗಿತ್ತು?
ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪೆನಿಯು ಭಾರತದ ಪ್ರಸಿದ್ದ ಲಘು ಉಪಾಹಾರ ತಯಾರಕಾ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನು ಈ ಕಂಪೆನಿಯನ್ನು 1986 ರಲ್ಲಿ ಶಿವದೀಪ್ ಪ್ರಾಡಕ್ಟ್ಸ್ ಎಂಬ ಹೆಸರಿನಿಂದ ಆರಂಭಿಸಲಾಗಿತ್ತು. ಶಿವರತನ್ ಅಗರ್ವಾಲ್ ಅವರ ತಂದೆಯ ಹೆಸರನ್ನು ಆರಂಭದಲ್ಲಿ ಕಂಪೆನಿಗೆ ಇಡಲಾಗಿತ್ತು. ಬಳಿಕ 1993 ರಲ್ಲಿ ಬಿಕಾಜಿ ಬ್ರಾಂಡ್ ಎಂಬ ಹೆಸರಿನಿಂದ ಕಂಪೆನಿಯನ್ನು ಪುನರ್ ಆರಂಭಿಸಲಾಗಿತ್ತು. ಇನ್ನು ದೀಪಕ್ ಬಗ್ಗೆ ಹೇಳುವುದಾದರೆ 2002ರ ಸೆಪ್ಟೆಂಬರ್ 30ರಿಂದ ಕಂಪೆನಿಯ ಪ್ರಮುಖ ನಿರ್ದೇಶಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇನ್ನು ದೀಪಕ್ ಅವರು ಮುಂಬೈನ ಎಸ್ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ನಿಂದ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು (ಕುಟುಂಬ ನಿರ್ವಹಣೆಯ ವ್ಯವಹಾರ) ಪಡೆದುಕೊಂಡಿದ್ದಾರೆ. ಇನ್ನು ದೀಪಕ್ ಅವರು ಆಹಾರ ಉದ್ಯಮದಲ್ಲಿ 21 ವರ್ಷಗಳ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ತನ್ನ ಗಮನವನ್ನು ಭಾರತದ ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಸಿಹಿತಿಂಡಿಗಳ ಮೇಲೆ ಕೇಂದ್ರೀಕರಿಸಿದ್ದಾರೆ. ದೀಪಕ್ ಅವರು ಕಂಪೆನಿಯ ದಿನನಿತ್ಯದ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಅಂಗಸಂಸ್ಥೆಗಳು ಸೇರಿದಂತೆ ವಿವಿಧ ಕಾರ್ಯಾಚರಣೆಯನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಹಲ್ದಿರಾಮ್ ಬ್ರ್ಯಾಂಡ್ ಜೊತೆಗಿನ ನಂಟು
ಇನ್ನು ಭಾರತದ ಪ್ರಸಿದ್ದ ಕುರುಕಲು ತಿಂಡಿ ಹಾಗೂ ಲಘು ಉಪಾಹಾರಗಳ ಕಂಪೆನಿಯಾಗಿ, ವಿಶ್ವ ಮಟ್ಟದಲ್ಲೂ ಖ್ಯಾತಿ ಪಡೆದುಕೊಂಡಿರುವ ಹಲ್ದಿರಾಮ್ ಬ್ರಾಂಡ್ ಬಗ್ಗೆ ಗೊತ್ತಿರದವರು ಯಾರೂ ಇರಲಿಕ್ಕಿಲ್ಲ. ಭಾರತದ ವಿವಿಧ ರೀತಿಯ ಸಾಂಪ್ರದಾಯಿಕ ರೀತಿಯಲ್ಲಿ ಸೇವಿಸಲ್ಪಡುವ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಹಲ್ದಿರಾಮ್ ಬ್ರ್ಯಾಂಡ್ ಪ್ರಸಿದ್ದಿ ಪಡೆದುಕೊಂಡಿದೆ. ಇನ್ನು ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪೆನಿಯ ದೀಪಕ್ ಅವರ ಮುತ್ತಜ್ಜ, ಗಂಗಾಬಿಶನ್ ಅಗರ್ವಾಲ್ ಅವರು ಭಾರತೀಯ ತಿಂಡಿಗಳ ಪ್ರಸಿದ್ಧ ಹಲ್ದಿರಾಮ್ ಬ್ರಾಂಡ್ ಅನ್ನು ಸ್ಥಾಪಿಸಿದ್ದರು. ದೀಪಕ್ ಬಿಕಾಜಿ ಫುಡ್ಸ್ನ ನಿರ್ದೇಶಕಿ ಶ್ವೇತಾ ಅಗರ್ವಾಲ್ ಅವರನ್ನು ವಿವಾಹವಾದರು. ಶ್ವೇತಾ ಅವರು ನವೆಂಬರ್ 2006 ರಿಂದ ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಇನ್ನು ಬಿಕಾಜಿಯನ್ನು ನವೆಂಬರ್ 2022 ರಲ್ಲಿ ಅದರ IPO ಬೆಲೆಗೆ 8 ಪ್ರತಿಶತ ಪ್ರೀಮಿಯಂನಲ್ಲಿ ಪಟ್ಟಿ ಮಾಡಲಾಗಿದ್ದು, ಇದರ ಷೇರಿನ ಬೆಲೆ ಸದ್ಯ 854.80 ರೂ. ಮೌಲ್ಯವನ್ನು ಹೊಂದಿದೆ.
ಅಮಿತಾಬ್ ಬಚ್ಚನ್
ಇನ್ನು ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪೆನಿಯು ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಈ ಮೂಲಕ ವಿಶ್ವಮಟ್ಟದಲ್ಲೂ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ಬಯಸಿದೆ. ಒಟ್ಟಿನಲ್ಲಿ ಬಿಕಾಜಿ ಫುಡ್ಸ್ ಹಾಗೂ ಹಲ್ದಿರಾಮ್ ಕಂಪೆನಿಗಳು ವಿದೇಶದಲ್ಲೂ ಭಾರತದ ಸಾಂಪ್ರದಾಯಿಕ ತಿಂಡಿಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications