Devanahalli: ಅಭಿವೃದ್ಧಿಯ ಹಾದಿಯಲ್ಲಿ ಬೆಂಗಳೂರಿನ ದೇವನಹಳ್ಳಿ! ಸರ್ಕಾರದಿಂದ ಮಹತ್ವದ ಕ್ರಮ

1990ರ ದಶಕದಲ್ಲಿ ಬೆಂಗಳೂರಿನ ಹೊರವಲಯದ ಒಂದು ಸಣ್ಣ ರೇಷ್ಮೆ ಕೃಷಿ ಗ್ರಾಮವಾಗಿದ್ದ ದೇವನಹಳ್ಳಿ (Devanahalli), ಈಗ ನಗರದ ಪ್ರಮುಖ ಅಭಿವೃದ್ಧಿ ನಗರಗಳಲ್ಲಿ ಒಂದಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಕಾರ್ಯಾರಂಭ ಮಾಡಿದಾಗಿನಿಂದ, ಇದು ಕಳೆದ ಎರಡು ದಶಕಗಳಲ್ಲಿ ಉದ್ಯೋಗ, ಕೈಗಾರಿಕೆ ಮತ್ತು ಹೂಡಿಕೆಯಲ್ಲಿ ಆರ್ಥಿಕವಾಗಿ ಮುನ್ನಗುತ್ತಿದೆ. ಇದೀಗ ಈ ಬೆಳವಣಿಗೆಗಳನ್ನ ನೋಡಿದ ರಾಜ್ಯ ಸರ್ಕಾರ (Karnataka Govt) ಮಹತ್ವದ ನಿರ್ಧಾರವೊಂದು ಕೈಗೊಂಡಿದೆ.

ದೇವನಹಳ್ಳಿ ಅಭಿವೃದ್ಧಿಗೆ ಸರ್ಕಾರದಿಂದ ಮಹತ್ವದ ನಿರ್ಧಾರ!

ಹೌದು, ಈಗಾಗಲೇ ಬೆಂಗಳೂರಿಗೆ ಹತ್ತಿರವಿರುವ ದೇವನಹಳ್ಳಿ ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣುತ್ತಿದೆ. ಈ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಇದೀಗ ಕರ್ನಾಟಕ ಸರ್ಕಾರವು ಇತ್ತೀಚೆಗೆ "ದೇವನಹಳ್ಳಿ ಸ್ಪೆಷಲ್‌ ಇನ್ವೆಸ್ಟ್‌ಮೆಂಟ್‌ ರೀಜಿಯನ್‌" (Devanahalli Special Investment Region-SIR) ಅನ್ನು ಘೋಷಣೆ ಮಾಡಿದೆ. ಈ SIR ಟ್ಯಾಗ್‌ನೊಂದಿಗೆ ಸುಮಾರು 3,117.9 ಎಕರೆ ಜಮೀನನ್ನು ಒಂದೇ ಕಾನೂನು ಚೌಕಟ್ಟಿನಡಿ ತರುವ ಮೂಲಕ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಹೂಡಿಕೆಗೆ ಅವಕಾಶವನ್ನು ನೀಡುತ್ತಿದೆ.

ಪ್ರಸ್ತಾವಿತ ಏರ್‌ಪೋರ್ಟ್ ಸಿಟಿ, ಇನ್ಫರ್ಮೇಷನ್ ಟೆಕ್ನಾಲಜಿ ಇನ್ವೆಸ್ಟ್‌ಮೆಂಟ್ ರೀಜಿಯನ್ (ITR), ಏರೋಸ್ಪೇಸ್ ಪಾರ್ಕ್ ಮತ್ತು ಉನ್ನತ ಮೌಲ್ಯದ ವಸತಿ ಯೋಜನೆಗಳಿಂದಾಗಿ ದೇವನಹಳ್ಳಿ ಉತ್ತರ ಬೆಂಗಳೂರಿನ ವಿಸ್ತರಣೆಗೆ ಕೇಂದ್ರಬಿಂದುವಾಗಿದೆ. ಜಾಗತಿಕ ಉತ್ಪಾದಕರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಸಂಬಂಧಿತ ಕೈಗಾರಿಕೆಗಳ ಹರಿವು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ್ದು, ಈ ಮೂಲಕ ದೇವನಹಳ್ಳಿ ಉನ್ನತ ಬೆಳವಣಿಗೆಯ ಕಾರಿಡಾರ್ ಆಗಿ ಬಲಪಡಿಸಿದೆ.

ದೇವನಹಳ್ಳಿ ಅಭಿವೃದ್ಧಿಗೆ ಹೊಸ ಪ್ಲಾನ್‌!
ಇದೀಗ ಪ್ರದೇಶದ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು, ರಾಜ್ಯ ಸರ್ಕಾರ 'ದೇವನಹಳ್ಳಿ ವಿಶೇಷ ಹೂಡಿಕೆ ಪ್ರದೇಶ' (SIR) ವನ್ನು ಇತ್ತೀಚೆಗೆ ಅಧಿಸೂಚಿಸಿದೆ. ಇದು 13 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 3,117.9 ಎಕರೆ ಪ್ರದೇಶವನ್ನು ಒಳಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಈ ಉಪಕ್ರಮವನ್ನು ಕೈಗೊಂಡಿದೆ.

ಏನಿದರ ಉದ್ದೇಶ?
ಕೆಐಎಡಿಬಿ ಯ ಈ ಉಪಕ್ರಮದಿಂದಾಗಿ, ದೇವನಹಳ್ಳಿ ಜನರಲ್ ಫೇಸ್ 1, ಜನರಲ್ ಇಂಡಸ್ಟ್ರಿಯಲ್ ಏರಿಯಾ ಫೇಸ್ 2 ಮತ್ತು ಅಧಿನಾರಾಯಣ ಹೊಸಹಳ್ಳಿ ಫೇಸ್ 2 ರಂತಹ ಪ್ರಮುಖ ಕೈಗಾರಿಕಾ ಕ್ಲಸ್ಟರ್‌ಗಳನ್ನು ವಿಶ್ವ ದರ್ಜೆ ಮಟ್ಟದಲ್ಲಿ, ಜೊತೆಗೆ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳೊಂದಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ.

ಕೆಐಎಡಿಬಿ ಅಧಿಕಾರಿಗಳ ಪ್ರಕಾರ, SIR ಅಧಿಸೂಚನೆಯು ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ವ್ಯಕ್ತಪಡಿಸಿದ್ದ ದೀರ್ಘಕಾಲದ ಮೂಲಸೌಕರ್ಯ ಸಮಸ್ಯೆಗಳಿಗೆ ದೊಡ್ಡ ಪರಿಹಾರ ನೀಡುತ್ತದೆ.

ಈ SIR ಮಾಡಿದ್ದು ಏಕೆ?
ಕರ್ನಾಟಕ ಇಂಡಸ್ಟ್ರಿಯಲ್‌ ಏರಿಯಾಸ್‌ ಡೆವಲಪ್‌ಮೆಂಟ್‌ ಬೋರ್ಡ್‌ (KIADB) ಮೂಲಕ ಈ ಯೋಜನೆ ಜಾರಿಗೆ ತರಲಾಗಿದೆ, ಇದರ ಮೂಲಕ ಈಗಾಗಲೇ ಇರುವ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಒಂದೇ ಚೌಕಟ್ಟಿನಲ್ಲಿ ಸೇರಿಸಿ, ಅವುಗಳನ್ನು ಜಾಗತಿಕವಾಗಿ ಗುರುತಿಸುವುದಾಗಿದೆ. ಇನ್ನು ಉದ್ಯಮಿಗಳ, ಕೈಗಾರಿಕೋದ್ಯಮಿಗಳ ದೂರುಗಳಿಗೆ ಪರಿಹಾರ ನೀಡಲಾಗುತ್ತದೆ.

ಸ್ಥಳೀಯ ಗ್ರಾಮ ಪಂಚಾಯಿತಿಗಳು ಈ ಬಗ್ಗೆ ತೆರಿಗೆ ಪಾವತಿಸಿದರೂ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಯಾರೂ ಗಮನ ನೀಡುತ್ತಿರಲಿಲ್ಲ. ಇದರಿಂದ ಉತ್ಪಾದನೆ ಮತ್ತು ಉದ್ಯಮಗಳ ಕೆಲಸಕ್ಕೆ ಸಮಸ್ಯೆಯುಂಟುಮಾಡುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇನ್ಮೇಲೆ ಈ ಎಸ್‌ಐಆರ್‌ನಿಂದಾಗಿ, ಈ ಪ್ರದೇಶಗಳು ಸ್ಥಳೀಯ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಡುವುದಿಲ್ಲ, ಬದಲಾಗಿ ನೇರವಾಗಿ ರಾಜ್ಯ ಸರ್ಕಾರದ (KIADB) ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಅಭಿವೃದ್ಧಿಯೂ ವೇಗವಾಗುತ್ತದೆ, ಯಾವುದೇ ಸಮಸ್ಯೆಯೂ ಬರುವುದಿಲ್ಲ ಎಂಬುದು ಅಭಿಪ್ರಾಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+