ಯಾವಗಲ್ಲೂ ನಿಮ್ಮ ಆಧಾರ್ ಕಾರ್ಡ್(Aadhaar card)ತಗೆದುಕೊಂಡು ಹೋಗುವಂತಹ ತಾಪತ್ರಯ ಇರುವುದಿಲ್ಲ ಯಾಕೆಂದರೆ ನಿಮ್ಮ ಗುರುತಿನ ಪುರಾವೆಯ ಪರಿಶೀಲನೆಗಾಗಿ ಆಧಾರ್ನ ಭೌತಿಕ ಪ್ರತಿಗಳನ್ನು ಕೊಂಡೊಯ್ಯುವ ಅಥವಾ ಸಲ್ಲಿಸುವ ಪ್ರಮೇಯವನ್ನು ತಪ್ಪಿಸಲು UIDAI ಕ್ಯೂಆರ್ ಕೋಡ್ ಆಧಾರಿತ ಇ-ಆಧಾರ್ (aadhaar qr scanner app)ವ್ಯವಸ್ಥೆಯನ್ನು ಪರಿಚಯವನ್ನು ಮಾಡಿದೆ.
ಹೌದು,ನೀವು ಇನ್ಮುಂದೆ ಕ್ಯೂಆರ್ ಕೋಡ್ ಆಧಾರಿತ ಇ-ಆಧಾರ್ ತೋರಿಸಿ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವುದನ್ನು ಮತ್ತು ಇತರೆ ಕೆಲಸಗಳಿಗೆ ಇ-ಆಧಾರ್ ಕ್ಯೂಆರ್ ಕೋಡ್ ಅನ್ನು ನೀವು ಬಳಕೆಯನ್ನು ಮಾಡಿಕೊಳ್ಳಬಹುದು 2025ರ ಅಂತ್ಯದ ವೇಳೆಗೆ ಈ ಡಿಜಿಟಲ್ ವ್ಯವಸ್ಥೆ ದೇಶಾದ್ಯಂತ ಜಾರಿಗೆ ಬರುವಂತಹ ನಿರೀಕ್ಷೆಯಿದೆ ಎಚ್ಚಾಗಿ ಇದೆ.

ಇತ್ತೀಚಿಗೆ ಅನ್ಲೈನ್ ನಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿದ್ದಪಡಿಯನ್ನು ಮಾಡಲು ಅವಕಾಶವನ್ಉ ಸಹ ನೀಡಲಾಗದೆ. ಇದರಿಂದ ಆಧಾರ್ ಬಳಕೆದಾರರು ಕುಳಿತಿರುವ ಸ್ಥಳದಲ್ಲೇ ಆಧಾರ್ ನವೀಕರಣಗಳನನ್ನು ಮಾಡಬಹುದು ಇದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡವ ಅವಶ್ಯಕತೆ ಇರುವುದಿಲ್ಲ .
ಸದ್ಯಕ್ಕೆ ಇರುವ ಒಂದು ಲಕ್ಷ ಯಂತ್ರಗಳಲ್ಲಿ ಸುಮಾರು 2,000 ಯಂತ್ರಗಳನ್ನು ಹೊಸ ವ್ಯವಸ್ಥೆಗೆ ಬದಲಾವಣೆಯನ್ನು ಮಾಡಲಾಗಿದೆ. ಇನ್ನು ಮುಂದೆ ಆಧಾರ್ ಹೊಂದಿರುವವರು ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ನಂತಹ ಬಯೋಮೆಟ್ರಿಕ್ ಪರಿಶೀಲನೆಗಾಗಿ ನವೆಂಬರ್ನಿಂದ ಕೇವಲ ದಾಖಲಾತಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗುತ್ತದೆ. ಈ ಕ್ರಮವು ಪ್ರಕ್ರಿಯೆಯನ್ನು ಸರಳವಾಗಿದೆ. ಇದು ಭೌತಿಕ ದಾಖಲೆಗಳ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನವೀಕರಣಗಳನ್ನು ತ್ವರಿತವಾಗಿ ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ.
ಯುಐಡಿಎಐ ಜನನ ಪ್ರಮಾಣಪತ್ರ, ಚಾಲನಾ ಪರವಾನಗಿ, ಪಾಸ್ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಪಡಿತರ ಚೀಟಿ ಸೇರಿದಂತೆ ಅಧಿಕೃತ ಸರ್ಕಾರಿ ಡೇಟಾಬೇಸ್ಗಳಿಂದ ನೇರವಾಗಿ ಬಳಕೆದಾರರ ವಿವರಗಳನ್ನು ಪಡೆಯಲಿದೆ. ವಿಳಾಸ ಪರಿಶೀಲನೆಯನ್ನು ಸುಲಭಗೊಳಿಸಲು ವಿದ್ಯುತ್ ಬಿಲ್ ದಾಖಲೆಗಳನ್ನು ಸಂಯೋಜಿಸುವ ಕುರಿತು ಮಾತುಕತೆ ಸಹ ನಡೆಯುತ್ತಿದೆ.
ಮಕ್ಕಳಿಗಾಗಿ ಬಯೋಮೆಟ್ರಿಕ್ ಅಪ್ಡೇಟ್
ಶಾಲಾ ಮಕ್ಕಳಿಗಾಗಿ ಬಯೋಮೆಟ್ರಿಕ್ಗಳನ್ನು ಸಸಹ ಮಾಡಲಾಗುತ್ತಿದೆ. ಇದಕ್ಕಾಗಿ ಶೈಕ್ಷಣಿಕ ಮಂಡಳಿಗಳೊಂದಿಗೆ ಚರ್ಚೆಗಳು ಸಹ ನಡೆಯುತ್ತಿವೆ. 5 ರಿಂದ 7 ವರ್ಷ ಮತ್ತು 15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ನವೀಕರಣ ಮಾಡುವುದು ಸಹ ಕಡ್ಡಾಯವಾಗಿದೆ.
ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸರಳ
ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವುದರ ಜೊತೆಗೆ, ನಕಲಿ ದಾಖಲೆಗಳ ಬಳಕೆಯನ್ನು ತಡೆಯಲು ಯುಐಡಿಎಐ ಪ್ರಯತ್ನವನ್ನು ಮಾಡುತ್ತಿದೆ. ಕ್ಯೂಆರ್ ಕೋಡ್ ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಸಬ್-ರಿಜಿಸ್ಟ್ರಾರ್ ಕಚೇರಿಗಳು ಮತ್ತು ಗುರುತಿನ ದೃಢೀಕರಣಕ್ಕೆ ಬಳಸಲು ಮೌಲ್ಯಮಾಪನ ಮಾಡುತ್ತಿದೆ. ಈ ವ್ಯವಸ್ಥೆಯಲ್ಲಿ ವ್ಯಕ್ತಿಯ ಒಪ್ಪಿಗೆಯೊಂದಿಗೆ ಮಾತ್ರ ವೈಯಕ್ತಿಕ ಮಾಹಿತಿಯನ್ನು ಹಂಚಿ ಮಾಡಲಾಗುತ್ತದೆ.
ಇ-ಆಧಾರ್ ಅಪ್ಲಿಕೇಶನ್ ಬಿಡುಗಡೆಯಿಂದಾಗಿ ಆಧಾರ್ ನವೀಕರಣಗಳು ಸರಳವಾಗುವುದರ ಜೊತಗೆ ವಂಚನೆಗಳನ್ನು ತಡೆಯಲು ಸಹಾಯಕವಾಗುತ್ತದೆ. ಆಧಾರ್ ಬಳಕೆದಾರರು ನಿರಾಳದಿಂದ ಇರಬಹುದು.ಇ-ಆಧಾರ್ ಮೂಕಲ ನಮ್ಮ ವೈಯತ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.ಇದರಂದ ಆಧಾರ್ ಬಳಕೆದಾರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications