ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬಂದರೆ ನೂರೆಂಟು ಸಮಸ್ಯೆ ಸಾಮಾನ್ಯ. ಆದರೆ ಮಳೆ ಬಾರದೇ ಇದ್ದರೂ ರಸ್ತೆಗಳಲ್ಲಿ ಓಡಾಡುವವರಿಗೆ ಟೆನ್ಶನ್ ಕೊಡುವುದು ಮರಣ ಗುಂಡಿಗಳು.. ಕಂಡ ಕಂಡಲ್ಲಿ ಸಿಗುವ ರಸ್ತೆ ಗುಂಡಿಗಳಿಂದ ಇಲ್ಲಿವರೆಗೂ ಸಾಕಷ್ಟು ಜನರ ಜೀವಕ್ಕೆ ಹಾನಿಯಾಗಿದೆ. ಎಷ್ಟೇ ದೊಡ್ಡ ಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿದರೂ ಗುಂಡಿಗಳ ಕಾಟ ತಪ್ಪುತ್ತಿಲ್ಲ. ಈ ಬಾರಿ ರಸ್ತೆ ಗುಂಡಿಗಳಿಂದ ಜನರಿಗೆ ಒಂದು ಪರಿಹಾರ ನೀಡಲೇಬೇಕೆಂದು ರಾಜ್ಯ ಸರ್ಕಾರ ಹೊಸ ಯೋಜನೆಗೆ ಮುಂದಾಗಿದೆ. ದೀರ್ಘಕಾಲಿಕವಾಗಿ ನವೀಕರಿಸಲು ಕರ್ನಾಟಕ ಸರ್ಕಾರ 'ಇಕೋಫಿಕ್ಸ್' ಎಂಬ ಹೊಸ ತಂತ್ರಜ್ಞಾನವನ್ನು ರಾಜ್ಯಾದ್ಯಂತ ಅನ್ವಯಿಸಲು ಮುಂದಾಗಿದೆ.

ಹೌದು, ಇತ್ತೀಚೆಗಷ್ಟೇ ಕರ್ನಾಟಕ ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್, ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ರಾಮುಕಾ ಗ್ಲೋಬಲ್ ಸರ್ವೀಸಸ್ನೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ಇಕೋಫಿಕ್ಸ್ ಎಂದರೇನು?
ಇಕೋಫಿಕ್ಸ್ ಎನ್ನುವುದು ಕಬ್ಬಿಣ ಮತ್ತು ಉಕ್ಕಿನ ತ್ಯಾಜ್ಯ ವಸ್ತುಗಳಿಂದ (slag) ತಯಾರಿಸಲಾದ ತಕ್ಷಣದ ರಸ್ತೆ ದುರಸ್ತಿಗೆ ಉಪಯುಕ್ತವಾಗುವ ಮಿಶ್ರಣವಾಗಿದ್ದು, ಇದನ್ನು ವಿಶೇಷವಾಗಿ ಮಳೆಗಾಲದ ನೀರಿನಿಂದ ತುಂಬಿರುವ ಗುಂಡಿಗಳಲ್ಲಿ ಉಪಯೋಗಿಸಬಹುದಾಗಿದೆ. ಇದನ್ನು ಕಡಿಮೆ ಕಾರ್ಮಿಕ ಶ್ರಮದಿಂದ, ಕಡಿಮೆ ಸಮಯದಲ್ಲಿ ಬಳಸಿ ಗುಂಡಿಗಳನ್ನು ದುರಸ್ತಿ ಮಾಡಬಹುದು. ಇದಕ್ಕೆ ಕಾರಣವಾಗಿರುವ ತಂತ್ರಜ್ಞಾನವನ್ನು CSIR-CRRI ಅಭಿವೃದ್ಧಿಪಡಿಸಿದೆ.
ಪೈಲಟ್ ಯೋಜನೆಯ ಯಶಸ್ಸು:
2024ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ, ರಾಜ್ಯ ಹೆದ್ದಾರಿ 265 ರಲ್ಲಿ ಈ ಇಕೋಫಿಕ್ಸ್ ತಂತ್ರಜ್ಞಾನವನ್ನು ಪ್ರಯೋಗಾತ್ಮಕವಾಗಿ ಬಳಸಲಾಗಿತ್ತು. ತಕ್ಷಣದ ದುರಸ್ತಿ, ಕಡಿಮೆ ವೆಚ್ಚ ಹಾಗೂ ಗುಣಮಟ್ಟದ ಫಲಿತಾಂಶಗಳನ್ನು ಕಂಡು ಸರ್ಕಾರ ರಾಜ್ಯಮಟ್ಟದಲ್ಲಿ ಈ ತಂತ್ರಜ್ಞಾನವನ್ನು ವಿಸ್ತರಿಸಲು ತೀರ್ಮಾನಿಸಿದೆ.
ಸಂಚಾರದ ಸಮಸ್ಯೆಗೆ ಪರ್ಯಾಯ ಪರಿಹಾರ:
ಈ ಹೊಸ ಮಿಶ್ರಣದ ಮೂಲಕ, ರಾತ್ರಿ ಸಮಯದಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ ಗುಂಡಿಗಳನ್ನು ಮುಚ್ಚಬಹುದು. ದಿನದಲ್ಲಿ ಸಂಚಾರ ತೀವ್ರವಾಗಿರುವ ರಸ್ತೆಗಳ ದುರಸ್ತಿಗೆ ಇದು ಅತ್ಯಂತ ಸಹಾಯಕವಾಗಲಿದೆ. ಇದು ನಷ್ಟಗೊಳ್ಳುವ ವಾಹನಗಳ ಸಂಖ್ಯೆಯನ್ನೂ ತಗ್ಗಿಸಲಿದೆ ಮತ್ತು ಅಪಘಾತಗಳ ಸಂಭವವನ್ನು ಕೂಡ ಕಡಿಮೆ ಮಾಡಲಿದೆ.
ತಯಾರಿಕಾ ಮತ್ತು ಪೂರೈಕೆ ವಿವರ:
ಇಕೋಫಿಕ್ಸ್ ಅನ್ನು ಬಳ್ಳಾರಿಯ ಜೆಎಸ್ಡಬ್ಲ್ಯೂ ಸಾಥ್ನಿಂದ ರಾಮುಕಾ ಗ್ಲೋಬಲ್ ಸರ್ವೀಸಸ್ ತಯಾರಿಸುತ್ತಿದ್ದು, ಪ್ರತಿ ಕಿಲೋಗ್ರಾಂಗೆ ₹15.70 ಕ್ಕೆ ಕರ್ನಾಟಕದೊಳಗೆ ಪೂರೈಕೆ ಮಾಡಲಾಗುತ್ತಿದೆ. ಇದು ಸಾಂಪ್ರದಾಯಿಕ ದುರಸ್ತಿ ವೆಚ್ಚಕ್ಕಿಂತ ಶೇಕಡಾ 10ರಷ್ಟು ಕಡಿಮೆಯಾಗಿರುವುದು ವಿಶೇಷ.
ತರಬೇತಿ ಮತ್ತು ಲಭ್ಯತೆ:
ರಾಜ್ಯದ ಎಲ್ಲಾ ರಸ್ತೆ ಎಂಜಿನಿಯರ್ಗಳಿಗೆ ಇಕೋಫಿಕ್ಸ್ ಬಳಕೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇದನ್ನು 30 ಕೆಜಿ ಹಾಗೂ 50 ಕೆಜಿ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಯಾವುದೇ ರಸ್ತೆ ಕಾಮಗಾರಿಯ ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದಾಗಿದೆ.
ಇಂತಹ ನೂತನ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಅನುಷ್ಠಾನ ಸರ್ಕಾರದ ಪ್ರಜಾಪರ ಸರ್ಕಾರೀ ಮನೋಭಾವವನ್ನೂ ತೋರಿಸುತ್ತದೆ. ಇಕೋಫಿಕ್ಸ್ ಬಳಕೆ ರಾಜ್ಯದ ರಸ್ತೆಗಳ ಗುಣಮಟ್ಟವನ್ನು ಏರಿಸುವಲ್ಲಿ ಮಹತ್ತರ ಪಾತ್ರವಹಿಸಲಿದೆ. ಜನರು ಸುರಕ್ಷಿತ ಹಾಗೂ ತೊಂದರೆರಹಿತ ಪ್ರಯಾಣ ಅನುಭವಿಸುವ ದಿನಗಳು ದೂರವಿಲ್ಲ.
ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಈ ಇಕೋಫಿಕ್ಸ್ ಯೋಜನೆ ರಾಜ್ಯದ ರಸ್ತೆಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ನಡುವೆ ಸದೃಢ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಒಂದು ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರಿಗೆ ಭದ್ರ ಮತ್ತು ಸುಲಭ ಸಂಚಾರದ ಅನುಭವವನ್ನು ನೀಡುತ್ತದೆ.
ಗುಂಡಿಗಳ ಸಮಸ್ಯೆಯಿಂದ ದಿನವೂ ತೊಂದರೆ ಅನುಭವಿಸುತ್ತಿರುವ ನಾಗರಿಕರಿಗೆ ಇದು ತಕ್ಷಣದ ಪರಿಹಾರವಾಗಿದ್ದು, ಮಳೆಗಾಲದ ಅಪ್ರತಿಕೂಲ ಸ್ಥಿತಿಗಳಲ್ಲಿಯೂ ಈ ಮಿಶ್ರಣವು ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡಲು ನೆರವಾಗುತ್ತಿದೆ. ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಯ ಶಕ್ತಿಯನ್ನು ಬಳಸಿಕೊಂಡು ಸರ್ಕಾರ ಹಾಗೂ ಖಾಸಗಿ ಪಾಲುದಾರ ಸಂಸ್ಥೆಗಳು ಸೇರಿ ತೆಗೆದುಕೊಂಡಿರುವ ಈ ತ್ರಿಪಕ್ಷೀಯ ಒಪ್ಪಂದವು ಇತರೆ ರಾಜ್ಯಗಳಿಗೂ ಮಾದರಿಯಾಗುವ ಸಾಧ್ಯತೆ ಇದೆ.
ಇದರಿಂದ ಮುಂದೆ, ರಾಜ್ಯದ ಎಲ್ಲಾ ಭಾಗಗಳಲ್ಲಿ ಗುಂಡಿಗಳ ಪೀಡೆಯಿಂದ ರಕ್ಷಣೆ ಸಿಗಬಹುದು ಎಂಬ ನಂಬಿಕೆ ಉಂಟಾಗಿದೆ. ಇದೇ ರೀತಿಯಲ್ಲಿ ಸಮರ್ಥ ಯೋಜನೆಗಳನ್ನು ಇನ್ನಷ್ಟು ಜಿಲ್ಲೆಗಳಲ್ಲಿ ವ್ಯಾಪಿಸಿಸಿ, ಇನ್ನು ಹೆಚ್ಚು ನವೀನತೆಗಳೊಂದಿಗೆ ಪ್ರಗತಿಗೆ ದಾರಿ ತೆರೆಯಲಿ ಎಂಬುದು ಸಾರ್ವಜನಿಕರ ಅಪೇಕ್ಷೆ.ಯಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications