ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಸೆಪ್ಟೆಂಬರ್ 18ರ ಶುಕ್ರವಾರದಂದು ತಾತ್ಕಾಲಿಕವಾಗಿ ನವದೆಹಲಿಯಲ್ಲಿ ನೂರು ಕೋಟಿ ರುಪಾಯಿ ಮೌಲ್ಯದ ಮೂರು ಹೋಟೆಲ್ ಗಳನ್ನು ಮುಟ್ಟುಗೋಲು ಹಾಕಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002 ಅಡಿಯಲ್ಲಿ ಈ ಕ್ರಮ ಜರುಗಿಸಿದೆ. ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣದಲ್ಲಿ ಈ ಬೆಳವಣಿಗೆ ನಡೆದಿದೆ.
ನವದೆಹಲಿಯಲ್ಲಿನ ಹೋಟೆಲ್ ಕಾನ್ ಕ್ಲೇವ್ ಬೌಟಿಕ್, ಹೋಟೆಲ್ ಕಾನ್ ಕ್ಲೇವ್ ಕಂಫರ್ಟ್ ಹಾಗೂ ಕಾನ್ ಕ್ಲೇವ್ ಎಕ್ ಕ್ಯೂಟಿವ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲಿಬ್ರಾ ರಿಯಾಲ್ಟರ್ಸ್, ದೀವಾನ್ ರಿಯಾಲ್ಟರ್ಸ್, ರಾಕೇಶ್ ಕುಮಾರ್ ವಾಧ್ವಾನ್, ರೊಮಿ ಮೆಹ್ರಾ, ಲಿಬ್ರಾ ಹೋಟೆಲ್ಸ್ ಮತ್ತು ಅದರ ನಿರ್ದೇಶಕರಿಗೆ ಈ ಹೋಟೆಲ್ ಗಳು ಸೇರಿದ್ದು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆ ಪ್ರಕಾರ, ಲಿಬ್ರಾ ರಿಯಾಲ್ಟರ್ಸ್ ಮತ್ತು ದೀವಾನ್ ರಿಯಾಲ್ಟರ್ಸ್ ನವರು ಪಿಎಂಸಿ ಬ್ಯಾಂಕ್ ನಿಂದ ವಂಚನೆ ಮಾಡಿ, ಸಾಲದ ರೂಪದಲ್ಲಿ 247 ಕೋಟಿ ರುಪಾಯಿ ಪಡೆದಿತ್ತು. ಎಚ್ ಡಿಐಎಲ್ ಸಮೂಹ ಪಡೆದಿದ್ದ 6117 ಕೋಟಿ ರುಪಾಯಿಯಲ್ಲಿ ಈ ಮೊತ್ತವೂ ಒಳಗೊಂಡಿದೆ ಎಂದು ಇ.ಡಿ. ಹೇಳಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಿಎಂಸಿ ಬ್ಯಾಂಕ್ ವಂಚನೆ ಬಯಲಿಗೆ ಬಂದಿತ್ತು. ಕೆಲವು ಖಾತೆಗಳನ್ನು ಸೃಷ್ಟಿ ಮಾಡಿ, ಆ ಮೂಲಕ ಅದಾಗಲೇ ದಿವಾಳಿ ಆಗಿದ್ದ ಎಚ್ ಡಿಐಎಲ್ ಗೆ 4335 ಕೋಟಿ ರುಪಾಯಿ ಸಾಲವನ್ನು ನೀಡಿ, ಮಾಹಿತಿಯನ್ನು ಮುಚ್ಚಿಟ್ಟಿದ್ದನ್ನು ಆರ್ ಬಿಐ ಕಂಡುಹಿಡಿದಿತ್ತು. ಆರ್ ಬಿಐ ಪ್ರಕಾರ, ಸಮಸ್ಯೆ ಇರುವ ನಲವತ್ನಾಲ್ಕು ಖಾತೆಯನ್ನು ಮುಚ್ಚಿಡಲಾಗಿತ್ತು.
ಎಚ್ ಡಿಐಎಲ್ ಪ್ರವರ್ತಕರಾದ ರಾಕೇಶ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು. ಈ ಹಗರಣದ ಬಗ್ಗೆ ಇ.ಡಿ. ಹಾಗೂ ಮುಂಬೈ ಪೊಲೀಸ್ ನ ಆರ್ಥಿಕ ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ.
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications