ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಸೆಪ್ಟೆಂಬರ್ 18ರ ಶುಕ್ರವಾರದಂದು ತಾತ್ಕಾಲಿಕವಾಗಿ ನವದೆಹಲಿಯಲ್ಲಿ ನೂರು ಕೋಟಿ ರುಪಾಯಿ ಮೌಲ್ಯದ ಮೂರು ಹೋಟೆಲ್ ಗಳನ್ನು ಮುಟ್ಟುಗೋಲು ಹಾಕಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002 ಅಡಿಯಲ್ಲಿ ಈ ಕ್ರಮ ಜರುಗಿಸಿದೆ. ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣದಲ್ಲಿ ಈ ಬೆಳವಣಿಗೆ ನಡೆದಿದೆ.
ನವದೆಹಲಿಯಲ್ಲಿನ ಹೋಟೆಲ್ ಕಾನ್ ಕ್ಲೇವ್ ಬೌಟಿಕ್, ಹೋಟೆಲ್ ಕಾನ್ ಕ್ಲೇವ್ ಕಂಫರ್ಟ್ ಹಾಗೂ ಕಾನ್ ಕ್ಲೇವ್ ಎಕ್ ಕ್ಯೂಟಿವ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲಿಬ್ರಾ ರಿಯಾಲ್ಟರ್ಸ್, ದೀವಾನ್ ರಿಯಾಲ್ಟರ್ಸ್, ರಾಕೇಶ್ ಕುಮಾರ್ ವಾಧ್ವಾನ್, ರೊಮಿ ಮೆಹ್ರಾ, ಲಿಬ್ರಾ ಹೋಟೆಲ್ಸ್ ಮತ್ತು ಅದರ ನಿರ್ದೇಶಕರಿಗೆ ಈ ಹೋಟೆಲ್ ಗಳು ಸೇರಿದ್ದು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆ ಪ್ರಕಾರ, ಲಿಬ್ರಾ ರಿಯಾಲ್ಟರ್ಸ್ ಮತ್ತು ದೀವಾನ್ ರಿಯಾಲ್ಟರ್ಸ್ ನವರು ಪಿಎಂಸಿ ಬ್ಯಾಂಕ್ ನಿಂದ ವಂಚನೆ ಮಾಡಿ, ಸಾಲದ ರೂಪದಲ್ಲಿ 247 ಕೋಟಿ ರುಪಾಯಿ ಪಡೆದಿತ್ತು. ಎಚ್ ಡಿಐಎಲ್ ಸಮೂಹ ಪಡೆದಿದ್ದ 6117 ಕೋಟಿ ರುಪಾಯಿಯಲ್ಲಿ ಈ ಮೊತ್ತವೂ ಒಳಗೊಂಡಿದೆ ಎಂದು ಇ.ಡಿ. ಹೇಳಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಿಎಂಸಿ ಬ್ಯಾಂಕ್ ವಂಚನೆ ಬಯಲಿಗೆ ಬಂದಿತ್ತು. ಕೆಲವು ಖಾತೆಗಳನ್ನು ಸೃಷ್ಟಿ ಮಾಡಿ, ಆ ಮೂಲಕ ಅದಾಗಲೇ ದಿವಾಳಿ ಆಗಿದ್ದ ಎಚ್ ಡಿಐಎಲ್ ಗೆ 4335 ಕೋಟಿ ರುಪಾಯಿ ಸಾಲವನ್ನು ನೀಡಿ, ಮಾಹಿತಿಯನ್ನು ಮುಚ್ಚಿಟ್ಟಿದ್ದನ್ನು ಆರ್ ಬಿಐ ಕಂಡುಹಿಡಿದಿತ್ತು. ಆರ್ ಬಿಐ ಪ್ರಕಾರ, ಸಮಸ್ಯೆ ಇರುವ ನಲವತ್ನಾಲ್ಕು ಖಾತೆಯನ್ನು ಮುಚ್ಚಿಡಲಾಗಿತ್ತು.
ಎಚ್ ಡಿಐಎಲ್ ಪ್ರವರ್ತಕರಾದ ರಾಕೇಶ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು. ಈ ಹಗರಣದ ಬಗ್ಗೆ ಇ.ಡಿ. ಹಾಗೂ ಮುಂಬೈ ಪೊಲೀಸ್ ನ ಆರ್ಥಿಕ ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications