ಬೆಂಗಳೂರಿನಲ್ಲಿ ಭೂಮಿಯ ಬೆಲೆಗಳು ಭಾರೀ ಪ್ರಮಾಣದಲ್ಲಿ ಅಧಿಕವಾಗಿದೆ. ಆದರೆ ಈ ಸಂದರ್ಭದಲ್ಲಿ ಎಂಟು ಖಾಸಗಿ ಸಂಸ್ಥೆಗಳು ತಮ್ಮ ಪ್ರಧಾನ ಭೂಮಿಯನ್ನು ನಮ್ಮ ಮೆಟ್ರೋಗಾಗಿ ಬಿಟ್ಟುಕೊಂಡಿದೆ. ಬೆಂಗಳೂರಿನಲ್ಲಿ ಮೆಟ್ರೋ ಯೋಜನೆಗಾಗಿ ಒಟ್ಟು 16,000 ಚದರ ಮೀಟರ್ ಭೂಮಿಯನ್ನು ಉಚಿತವಾಗಿಯೇ ಬಿಟ್ಟುಕೊಟ್ಟಿದೆ.
ಸಾಮಾನ್ಯವಾಗಿ ಯಾವುದೇ ಸರ್ಕಾರಿ ಯೋಜನೆಗೆ ಭೂಮಿ ಪಡೆಯುವಾಗ ಡಬಲ್ ಹಣವನ್ನು ಭೂಮಿ ಕಳೆದುಕೊಳ್ಳುವವರಿಗೆ ನೀಡಲಾಗುತ್ತದೆ. ಆದರೆ ಈ ಎಂಟು ಸಂಸ್ಥೆಗಳು ಭೂಮಿಯನ್ನು ಉಚಿತವಾಗಿ ನೀಡಿದ ಕಾರಣದಿಂದಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಗೆ ಕನಿಷ್ಠ 175 ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯವಾಗಿದೆ.

ಭೂಮಿ ದಾನ ಮಾಡಿದ ಎಂಟು ಸಂಸ್ಥೆಗಳಿವು
ಎಂಟು ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳು ಯಾವುದೇ ಷರತ್ತುಗಳನ್ನು ವಿಧಿಸದೆ ತಮ್ಮ ಭೂಮಿಯನ್ನು ದಾನ ಮಾಡಿವೆ. ಹೊಸೂರು ರಸ್ತೆಯಲ್ಲಿರುವ ಎಎಂಆರ್ ಟೆಕ್ ಪಾರ್ಕ್ ಇದರ ಮಾಲೀಕ ಎ ಮುನಿರೆಡ್ಡಿ, ಟೋಟಲ್ ಎನ್ವಿರಾನ್ಮೆಂಟ್ ಬಿಲ್ಡಿಂಗ್ ಸಿಸ್ಟಮ್ಸ್, ಪ್ರೆಸ್ಟೀಜ್ ನಾಟಿಂಗ್ ಹಿಲ್ ಇನ್ವೆಸ್ಟ್ಮೆಂಟ್ಸ್ (ಬನ್ನೇರುಘಟ್ಟ ರಸ್ತೆ) ಮತ್ತು ವಿಕಾಸ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ (ಹೊರ ವರ್ತುಲ ರಸ್ತೆಯ ಕಾಡುಬೀಸನಹಳ್ಳಿ) ಈ ನಾಲ್ಕು ಸಂಸ್ಥೆಗಳು ಆಗಿದೆ.
ಈ ನಾಲ್ಕು ಸಂಸ್ಥೆಗಳು ಯಾವುದೇ ವಿತ್ತೀಯ ಪರಿಹಾರವನ್ನು ಪಡೆದುಕೊಂಡಿದೆ. ಮೆಟ್ರೋ ಯೋಜನೆಯು ತಮ್ಮ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುವ 10,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಹಾಯ ಮಾಡುವುದರಿಂದ ಉಚಿತವಾಗಿ ಭೂಮಿಯನ್ನು ಹಂಚಿಕೊಳ್ಳಲು ನಮಗೆ ಯಾವುದೇ ತೊಂದರೆಯಿಲ್ಲ ಎಂದು ಮುನಿರೆಡ್ಡಿ ಅವರ ಮೊಮ್ಮಗ ಶರತ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಬೇರೆ ಯಾವೆಲ್ಲ ಸಂಸ್ಥೆಗಳು?
ಇನ್ನುಳಿದ ನಾಲ್ಕು ಸಂಸ್ಥೆಗಳಲ್ಲಿ ನಮ್ಮ ಮೆಟ್ರೋವು ಉಡುಗೊರೆಯಾಗಿ ನೀಡಿದ ಭೂಮಿಯ ಮೇಲೆ ಖಾಸಗಿ ಸಂಸ್ಥೆಗಳಿಗೆ ವರ್ಷಕ್ಕೆ 1,000 ರೂಪಾಯಿಗಳಂತೆ 99 ವರ್ಷಗಳ ಅವಧಿಗೆ ಹಣವನ್ನು ನೀಡಿದೆ. ಬೆಂಗಳೂರು ಮೂಲದ ಇನ್ಫೋಸಿಸ್, ಬಯೋಕಾನ್, ಆರ್ಎಂಜೆಡ್ ಇನ್ಫೋಟೆಕ್ ಮತ್ತು ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನ (ಎನ್ಟಿಟಿಎಫ್) ಉಳಿದ ನಾಲ್ಕು ಸಂಸ್ಥೆಗಳು ಆಗಿದೆ.
ಖಾಸಗಿ ಸಂಸ್ಥೆಗಳು ಪರೋಕ್ಷವಾಗಿ ತಮ್ಮ ಆಸ್ತಿಯ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಈ ನಿರ್ಧಾರ ಮಾಡಿದೆ ಎಂದು ಕೆಲವರು ಹೇಳಿದರೆ, ಕ್ಯಾಂಪಸ್ಗೆ ಪ್ರವೇಶಿಸುವುದು ಅಥವಾ ಬಳಕೆಯಾಗದ ಭೂಮಿಯನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸುವುದು ಮುಂತಾದ ವಾಣಿಜ್ಯೇತರ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂಬ ಷರತ್ತಿನೊಂದಿಗೆ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications