ಇ ಕಾಮರ್ಸ್ ಕಂಪನಿಗಳು ತಮ್ಮ ವೆಬ್ಸೈಟ್ಗಳಲ್ಲಿ ಉತ್ಪನ್ನಗಳು ಯಾವ ದೇಶದಲ್ಲಿ ತಯಾರಾಗಿದ್ದಾವೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗ ಇ ಕಾಮರ್ಸ್ ಕಂಪನಿಗಳು ಆದೇಶವನ್ನು ಜಾರಿಗೆ ತರಲು ಕೇಂದ್ರ ಗಡುವು ಕೂಡ ನೀಡಿದೆ.
ಇದೀಗ ಕೇಂದ್ರ ಸರ್ಕಾರ ಇ ಕಾಮರ್ಸ್ ಕಂಪನಿಗಳು ವಿದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳಲ್ಲಿ ಆ ದೇಶದ ಹೆಸರನ್ನು ನಮೂದಿಸದಿದ್ದರೆ ಒಂದು ಲಕ್ಷ ರುಪಾಯಿವರೆಗೆ ದಂಡ ಹಾಗೂ ಜೈಲು ಶಿಕ್ಷೆಯನ್ನು ವಿಧಿಸಲು ಉದ್ದೇಶಿಸಿದೆ.
ವಿದೇಶದಿಂದ ಆಮದಾದ ಉತ್ಪನ್ನಗಳ ಮೇಲೆ ಉತ್ಪನ್ನ ಸಿದ್ದಗೊಂಡ ದೇಶದ ಹೆಸರು ನಮೂದಿಸವುದು ಕಡ್ಡಾಯವಾಗಿರುತ್ತದೆ. ಉಲ್ಲಂಘನೆ ಮಾಡಿದರೆ ಹಂತ ಹಂತವಾಗಿ ದಂಡ ವಿಧಿಸಲಾಗುತ್ತದೆ.
ಮೊದಲ ಬಾರಿಗೆ 25 ಸಾವಿರ ರುಪಾಯಿ ದಂಡ
ಮೊದಲ ಬಾರಿಯ ನಿಮಯ ಉಲ್ಲಂಘನೆಗೆ 25 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 50 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘನೆ ಮಾಡಿದರೆ ಒಂದು ಲಕ್ಷರ ರುಪಾಯಿಯನ್ನು ದಂಡವಾಗಿ ಇ ಕಾಮರ್ಸ್ ಕಂಪನಿಗಳು ಕಟ್ಟಬೇಕಾಗುತ್ತದೆ.
ಆಗಸ್ಟ್ 1 ರೊಳಗೆ
ಇ ಕಾಮರ್ಸ್ ಕಂಪನಿಗಳು ಆಗಸ್ಟ್ 1 ರೊಳಗೆ ಉತ್ಪನ್ನಗಳ ಮಾಹಿತಿ ಜೊತೆಗೆ ಆ ಉತ್ಪನ್ನ ತಯಾರಾಗುವ ದೇಶದ ಹೆಸರಿನ ಲೇಬಲ್ ಹಾಕಬೇಕು ಎಂದು ಆದೇಶ ಮಾಡಿದೆ. ಈಗಾಗಲೇ ಸಂಗ್ರಹಿಸಿರುವ ವಸ್ತುಗಳಿಗೂ ಅಕ್ಟೋಬರ್ 1ರೊಳಗೆ ಮೂಲದ ಬಗ್ಗೆ ಲೇಬಲ್ ಹಚ್ಚಬೇಕು ಎಂದು ತಿಳಿಸಿದೆ. ಈ ಕುರಿತು ಇ ಕಾಮರ್ಸ್ ಕಂಪನಿಗಳೊಂದಿಗೆ ವಾಣಿಜ್ಯ ಇಲಾಖೆ ಸಭೆ ನಡೆಸಿದೆ. ಆದರೆ, ಗಡುವಿಗೆ ಇನ್ನಷ್ಟು ಕಾಲಾವಕಾಶವನ್ನು ಕಂಪನಿಗಳು ಕೇಳಿವೆ ಎಂಬುದು ತಿಳಿದು ಬಂದಿದೆ.
ಕಾಲಾವಕಾಶವನ್ನು ಕಂಪನಿಗಳು ಕೋರಿವೆ
ಅನೇಕ ಉತ್ಪನ್ನಗಳು ಉತ್ಪಾದನೆ ಮತ್ತು ವಿತರಣೆಯ ನಾನಾ ಹಂತಗಳಲ್ಲಿ ಇರುವುದರಿಂದ ಕಾಲಾವಕಾಶವನ್ನು ಕಂಪನಿಗಳು ಕೋರಿವೆ. ಹೀಗಾಗಿ ಅಂತಿಮ ಗಡುವನ್ನು ಸರಕಾರ ಮುಂಬರುವ ದಿನಗಳಲ್ಲಿ ವಿಧಿಸಲಿದೆ.
ದಾಖಲಿಸಬೇಕಾಗಿಲ್ಲ
ನಿಯಮಾವಳಿಗಳ ಪ್ರಕಾರ ಪ್ಯಾಕೇಜ್ ಮಾಡದೆ ಮಾರುವ ಪದಾರ್ಥಗಳ ಮೇಲೆ ಯಾವ ರಾಷ್ಟ್ರದ ಮೂಲ ಎಂದು ದಾಖಲಿಸಬೇಕಾಗಿಲ್ಲ. ಬದಲಾದ ಸನ್ನಿವೇಶದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಕೈಗಾರಿಕಾಭಿವೃದ್ಧಿ ಮಂಡಳಿ (ಡಿಪಿಐಐಟಿ) ಪರಿಶೀಲಿಸಲಿದೆ. ಫ್ಲಿಪ್ಕಾರ್ಟ್ ಆಗಸ್ಟ್ 15ರ ತನಕ ಹಾಗೂ ಅಮೆಜಾನ್ 2-3 ತಿಂಗಳು ಕಾಲಾವಕಾಶ ಕೋರಿದೆ ಎಂದು ವರದಿಯಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications