ಮಹಿಳೆಯರಿಗೆ ಗುಡ್ ನ್ಯೂಸ್.. ಉಚಿತ ಬಸ್ ಸೇವೆ ಕರ್ನಾಟಕದಂತೆ ಇನ್ಮುಂದೆ ಆಂಧ್ರಪ್ರದೇಶದಲ್ಲೂ ಕೂಡ ಜಾರಿಗೆ ಬರುತ್ತದೆ. ಹೌದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶನಿವಾರ (ಮೇ 17) ತಮ್ಮ ಸರ್ಕಾರದ ಪ್ರಮುಖ ಕಲ್ಯಾಣ ಭರವಸೆಗಳನ್ನು ಈಡೇರಿಸುವ ಬದ್ಧತೆಯ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಮಹಿಳೆಯರಿfಎ ಬಹುನಿರೀಕ್ಷಿತ ಉಚಿತ ಬಸ್ ಪ್ರಯಾಣವು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದ ಪ್ರಾರಂಭವಾಗುತ್ತದೆ ಎಂದು ಘೋಷಣೆಯನ್ನು ಮಾಡಿದ್ದಾರೆ.
ಈ ಕುರಿತು ಕರ್ನೂಲ್ ಜಿಲ್ಲೆಯ ನಂದ್ಯಾಲ್ ಚೆಕ್ಪೋಸ್ಟ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಶೀಘ್ರದಲ್ಲೇ ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ನೀಡುತ್ತೇವೆ. ನಾನು ಇದರ ಬಗ್ಗೆಯೂ ಯೋಚಿಸುತ್ತಿದ್ದೇನೆ. ಅಗತ್ಯವಿದ್ದರೆ, ಆಗಸ್ಟ್ 15 ರಂದು, ಸ್ವಾತಂತ್ರ್ಯ ದಿನದಂದು ನಮ್ಮ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ವ್ಯವಸ್ಥೆ ಮಾಡುವುದು ಈ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಪಕ್ಷದ 'ಸೂಪರ್ ಸಿಕ್ಸ್' ಕಾರ್ಯಸೂಚಿಯಡಿಯಲ್ಲಿ ಮಾಡಿದ ಹಲವಾರು ಚುನಾವಣಾ ಪೂರ್ವ ಬದ್ಧತೆಗಳನ್ನು ನೀಡಿದ್ದರು ಅದನ್ನು ಮತ್ತೆ ಪುನರ್ವಿಮರ್ಶಿಸಿದರು, ಮುಂದಿನ ದಿನಗಳಲ್ಲಿ ಅವುಗಳ ಅನುಷ್ಠಾನವನ್ನು ಪ್ರತಿಜ್ಞೆ ಮಾಡಿದರು. ಈ ಭರವಸೆಗಳಲ್ಲಿ 19 ರಿಂದ 59 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ 1,500 ರೂ ಆರ್ಥಿಕ ನೆರವು, 20 ಲಕ್ಷ ಹೊಸ ಉದ್ಯೋಗಗಳು ಅಥವಾ 3,000 ಮಾಸಿಕ ನಿರುದ್ಯೋಗ ಭತ್ಯೆ ಮತ್ತು ಉಚಿತ ಬಸ್ ಪ್ರಯಾಣಗಳನ್ನು ಒಳಗೊಂಡಿವೆ.
ಸರ್ಕಾರ 'ಸೂಪರ್ ಸಿಕ್ಸ್' ಬ್ಯಾನರ್ ಅಡಿಯಲ್ಲಿ ಇತರ ಯೋಜನೆಗಳಲ್ಲಿ 'ತಲ್ಲಿಕಿ ವಂದನಂ' ಶಾಲೆಗೆ ಹೋಗುವ ಪ್ರತಿ ಮಗುವಿಗೆ ವಾರ್ಷಿಕವಾಗಿ 15,000 ರೂ ಹಾಗೂ 'ದೀಪಂ-2' - ಪ್ರತಿ ಮನೆಗೆ ವಾರ್ಷಿಕವಾಗಿ ಮೂರು ಉಚಿತ ಎಲ್ಪಿಜಿ ಸಿಲಿಂಡರ್ಗಳು ಮತ್ತು 'ಅನ್ನದಾತಾ ಸುಖಿಭವ' ಯೋಜನೆಯ ಅಡಿಯಲ್ಲಿ ಪ್ರತಿ ರೈತನಿಗೆ 20,000 ವಾರ್ಷಿಕ ಬೆಂಬಲ. ದೀಪಂ-2 ಯೋಜನೆಯು 2024-25ರ ಆರ್ಥಿಕ ವರ್ಷಕ್ಕೆ ಭಾಗಶಃ ಬಿಡುಗಡೆಯಾಗಿದೆ ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಸುಮಾರು 5 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಟಿಡಿಪಿ ನೇತೃತ್ವದ ಎನ್ಡಿಎ ಸರ್ಕಾರವು ಇನ್ನೂ ಹೆಚ್ಚಿನ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿಲ್ಲ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ರೈತರ ಬಗೆಗಿನ ಯೋಜನೆಗಳನ್ನು ಕುರಿತು ಸಹ ಮಾತನಾಡಿದ್ದರು. ಅದರಲ್ಲಿ ಅವರು ಅನ್ನದಾತ ಸುಖೀಭವ ಯೋಜನೆಯನ್ನು ಮೂರು ಕಂತುಗಳಲ್ಲಿ ಜಾರಿಗೆ ತರುವುದಾಗಿ ಭರವಸೆಯನ್ನು ಜನರಿಗೆ ನೀಡಿದ್ದಾರೆ.
ನಮ್ಮ ಸರ್ಕಾರ ರೈತರ ಕಲ್ಯಾಣವನ್ನು ಬಯಸುತ್ತದೆ. ನಾನು ರೈತರಿಗೆ ಭರವಸೆ ನೀಡುತ್ತಿದ್ದೇನೆ, ಲಾಭದಾಯಕ ಬೆಲೆಗಳನ್ನು ನೀಡುತ್ತೇನೆ. ರೈತರ ರಕ್ಷಣೆಗೆ ಬರುತ್ತದೆ, ಕೃಷಿಯನ್ನು
ಲಾಭದಾಯಕವಾಗಿಸುತ್ತದೆ ಎಂದು ಅವರು ಮಾತನಾಡಿದರು.
2025-26 ಶೈಕ್ಷಣಿಕ ವರ್ಷದ ಆರಂಭದ ಮೊದಲು 'ತಲ್ಲಿಕಿ ವಂದನಂ' ಯೋಜನೆಯನ್ನು ಜಾರಿಗೆ ತರಲಾಗುವುದು ಮತ್ತು ಎಲ್ಲಾ ಅರ್ಹ ಮಕ್ಕಳು ಭರವಸೆ ನೀಡಿದ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಅವರು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ದೀಪಂ -2 ಯೋಜನೆಯ ಫಲಾನುಭವಿಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುವುದು, ಅಗತ್ಯವಿರುವಂತೆ ಸಿಲಿಂಡರ್ಗಳನ್ನು ಖರೀದಿಸಲು ಅವಕಾಶ ನೀಡಲಾಗುವುದು ಎಂದು ನಾಯ್ಡು ಘೋಷಿಸಿದರು.
ಮೆಗಾ ಜಿಲ್ಲಾ ಆಯ್ಕೆ ಸಮಿತಿ (ಡಿಎಸ್ಸಿ) ಮೂಲಕ 16,400 ಶಿಕ್ಷಕರ ನೇಮಕಾತಿಯನ್ನು 2025-26 ಶೈಕ್ಷಣಿಕ ಅವಧಿಗೆ ಮುಂಚಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಆಂಧ್ರಪ್ರದೇಶವು ಸಾಮಾಜಿಕ ಕಲ್ಯಾಣದತ್ತ ಗಮನ ಹರಿಸುತ್ತಿದೆ 15,000 ರೂ ರಷ್ಟು ಮಾಸಿಕ ಪಿಂಚಣಿಯನ್ನು ನೀಡುವ ಏಕೈಕ ರಾಜ್ಯ ರಾಜ್ಯವಾಗಿದೆ ಎಂದು ಆಂದ್ರ ಸಿಎಂ ನಾಯ್ಡು ಹೇಳಿದರು. ಕಲ್ಯಾಣ ಪಿಂಚಣಿಗಳನ್ನು ಬೆಂಬಲಿಸಲು 33,000 ಕೋಟಿ ಹಂಚಿಕೆ ಮಾಡಲಾಗುತ್ತಿದ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಗುರಿಗಳತ್ತ ತಿರುಗಿ, ರಾಯಲಸೀಮಾ ಪ್ರದೇಶವನ್ನು ತೋಟಗಾರಿಕೆಯಾಗಿ ಪರಿವರ್ತಿಸುವ ದೃಷ್ಟಿಕೋನವನ್ನು ನಾಯ್ತು ಅನಾವರಣಗೊಳಿಸಿದರು.
ಮುಂದಿನ ಐದು ವರ್ಷಗಳಲ್ಲಿ ಕೃಷಿ ಪ್ರದೇಶವನ್ನು 18 ಲಕ್ಷ ಹೆಕ್ಟೇರ್ನಿಂದ 36 ಲಕ್ಷ ಹೆಕ್ಟೇರ್ಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಹಸಿರು ಇಂಧನ ಕೇಂದ್ರವಾಗುವ ರಾಜ್ಯದ ಮಹತ್ವಾಕಾಂಕ್ಷೆಯನ್ನು ಅವರು ಒತ್ತಿ ಹೇಳಿದರು, ಪೋಲಾವರಂ-ಬನಕಚೇರ್ಲಾ ನೀರಾವರಿ ಯೋಜನೆಯ ಪೂರ್ಣಗೊಳಿಸುವಿಕೆಯು ಈ ದಿಕ್ಕಿನಲ್ಲಿ ಒಂದು ಹೆಗ್ಗುರುತು ಸಾಧನೆಯಾಗಲಿದೆ ಎಂಬ ಭರವಸೆಯನ್ನು ಸಹ ನೀಡಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications