ಕಡಿಮೆ ವೆಚ್ಚ, ಆರಾಮದಾಯಕ ಪ್ರಯಾಣಕ್ಕಾಗಿ ಹೆಚ್ಚಿನವರು ರೈಲು ಪ್ರಯಾಣಕ್ಕೆ (Train Travel) ಆದ್ಯತೆ ನೀಡುತ್ತಾರೆ. ಅಲ್ಲದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡಬೇಕೆಂದರೆ ಹೆಚ್ಚಿನವರು ರೈಲು ಬುಕ್ ಮಾಡುತ್ತಾರೆ. ಇದೀಗ ಭಾರತೀಯ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದೆ ನೋಡಿ.

ಭಾರತೀಯ ರೈಲ್ವೆ (Indian Railways), ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಅಂದರೆ ಇನ್ಮೇಲೆ ರೈಲು ಹೊರಡುವ ಕೇವಲ 30 ನಿಮಿಷಗಳ ಮೊದಲು ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ನೀಡಿದೆ. ಹೆಚ್ಚುವರಿ ಶುಲ್ಕವಿಲ್ಲದೆಯೇ ಈ ಸೌಲಭ್ಯ, ತುರ್ತು ಪ್ರಯಾಣ ಮಾಡುವವರಿಗೆ ಸಹಕಾರಿಯಾಗಲಿದೆ.
ಪ್ರಯಾಣಿಕರ ಅನುಕೂಲಕ್ಕೆ ಹೊಸ ಸೇವೆ
ಇನ್ನೇನು ಹೊಸ ವರ್ಷ ಬರಲಿದೆ. ಈ ಸಂದರ್ಭದಲ್ಲಿ ಹೆಚ್ಚಿನವರು ಊರಿಗೆ ಹೋಗುವ ಪ್ಲಾನ್ ಮಾಡಿದರೆ, ಇನ್ನೂ ಕೆಲವರು ಕೊನೆಯ ಕ್ಷಣದಲ್ಲಿ ಊರಿಗೆ ತೆರಳುತ್ತಾರೆ. ಆದ್ರೆ ಈ ಸಂದರ್ಭದಲ್ಲಿ ಕೆಲವರು ರೈಲಿನಲ್ಲೇ ಟ್ರಾವೆಲ್ ಮಾಡಬೇಕಾಗುತ್ತದೆ. ಆದರೆ ಅಗತ್ಯವಿದ್ದಾಗ ಕೆಲವೊಮ್ಮೆ ರೈಲು ಟಿಕೆಟ್ಗಳು ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದ್ರೆ ಈ ಸಮಸ್ಯೆ ನಿವಾರಣೆಗೆ, ಭಾರತೀಯ ರೈಲ್ವೆ "Current Booking" ಅಥವಾ "Current Availability" ಸೌಲಭ್ಯವನ್ನು ಪರಿಚಯಿಸಿದೆ. ಈ ಮೂಲಕ ರೈಲು ತಪ್ಪಿಸಿಕೊಂಡವರು, ಪ್ರೀ ಬುಕ್ ಮಾಡದವರು ಅಥವಾ ಕೊನೆಯ ಕ್ಷಣದಲ್ಲಿ ಟ್ರಾವೆಲ್ ಪ್ಲಾನ್ ಮಾಡುವವರಿಗೆ ಸಹಕಾರಿಯಾಗಲಿದೆ.
ಕರೆಂಟ್ ರೈಲು ಬುಕಿಂಗ್, ರೈಲು ಹೊರಡುವ ನಾಲ್ಕು ಗಂಟೆ ಮೊದಲು ತೆರೆದು, ಫೈನಲ್ ರಿಸರ್ವೇಶನ್ ಲೀಸ್ಟ್ (ಹೊರಡುವ 30 ನಿಮಿಷ ಮೊದಲು ಸಿದ್ಧ) ತಯಾರಾಗುವವರೆಗೂ ಲಭ್ಯವಿರುತ್ತದೆ. ಆಸನಗಳ ಲಭ್ಯತೆಯ ಮೇರೆಗೆ, ಪ್ರಯಾಣಕ್ಕೆ ಅರ್ಧ ಗಂಟೆ ಮುಂಚೆಯೂ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ಇದು ನೀಡುತ್ತದೆ.
ಈ ಕೋಟಾದ ಟಿಕೆಟ್ಗಳನ್ನು ಎರಡು ವಿಧದಲ್ಲಿ ಕಾಯ್ದಿರಿಸಬಹುದು:
ಐಆರ್ಸಿಟಿಸಿ (IRCTC) ವೆಬ್ಸೈಟ್/ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ಅಥವಾ ರೈಲು ನಿಲ್ದಾಣಗಳ ಪ್ರಸ್ತುತ ರಿಸರ್ವೇಶನ್ ಕೌಂಟರ್ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು.
ಇನ್ನು ಸೀಟುಗಳು ಲಭ್ಯವಿದ್ಯಾ ಎಂದು ಪರಿಶೀಲಿಸುವಾಗ 'Current Available' ಎಂದು ಕಂಡರೆ, ಟಿಕೆಟ್ ಬುಕ್ ಮಾಡಬಹುದು. ತತ್ಕಾಲ್ ಟಿಕೆಟ್ಗಳಂತೆ ಹೆಚ್ಚುವರಿ ಶುಲ್ಕವಿಲ್ಲ, ಸಾಮಾನ್ಯ ದರದಲ್ಲಿ ಇಲ್ಲಿ ಟಿಕೆಟ್ ಬುಕ್ ಮಾಡುವ ಅವಕಾಶವಿದೆ. ಈ ಸೌಲಭ್ಯ ಸ್ಲೀಪರ್ ಮತ್ತು ಎಸಿ ಸೇರಿದಂತೆ ಎಲ್ಲಾ ವರ್ಗಗಳಲ್ಲೂ ಲಭ್ಯವಿದೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications