ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಥಾಳೆಕ್ಕೋಡ್ ಎಂಬ ಗ್ರಾಮ ಪಂಚಾಯಿತಿ ಇದೆ. ಯಾವಾಗ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಘೋಷಣೆ ಆಯಿತೋ ಆಗ ಇಲ್ಲಿ ಒಂದು ಸ್ಪರ್ಧೆ ಘೋಷಣೆ ಮಾಡಿದ್ದಾರೆ. ಯಾವ ಕುಟುಂಬದವರು ಲಾಕ್ ಡೌನ್ ಅವಧಿಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದಿಲ್ಲವೋ ಅಂಥ ಕುಟುಂಬಕ್ಕೆ ಪಂಚಾಯಿತಿಯಿಂದ ಬಹುಮಾನ ಸಿಗುತ್ತದೆ.
ಲಾಕ್ ಡೌನ್ ಮುಗಿದ ಮೇಲೆ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಮೊದಲ ಬಹುಮಾನವಾಗಿ ನಾಲ್ಕು ಗ್ರಾಮ್ ಚಿನ್ನ, ಎರಡನೇ ಬಹುಮಾನ ರೆಫ್ರಿಜರೇಟರ್ ಹಾಗೂ ಮೂರನೇ ಬಹುಮಾನ ವಾಷಿಂಗ್ ಮಷೀನ್. ಅಷ್ಟೇ ಅಲ್ಲ, ಐವತ್ತು ಸಮಾಧಾನಕರ ಬಹುಮಾನಗಳು ಸಹ ಇವೆ.
ಲಾಕ್ ಡೌನ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವವರಿಗೆ ಬಹುಮಾನ ನೀಡಬೇಕು ಅಂತ ನನಗೆ ಅನ್ನಿಸಿತು ಎಂದು ಪಂಚಾಯಿತಿ ಅಧ್ಯಕ್ಷರಾದ ಎ.ಕೆ. ನಾಸರ್ ಹೇಳಿದ್ದಾರೆ. "ಏಪ್ರಿಲ್ 6ನೇ ತಾರೀಕು ಈ ಯೋಜನೆ ಬಗ್ಗೆ ತೀರ್ಮಾನ ಮಾಡಿದೆವು. ಮರುದಿನವೇ ಅದನ್ನು ಜಾರಿಗೆ ತಂದೆವು. ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಸಾವಿರದಷ್ಟು ಕುಟುಂಬಗಳಿವೆ. ನಮ್ಮ ಜನರು ಮನೆಯೊಳಗೆ ಸುರಕ್ಷಿತವಾಗಿರಬೇಕು ಅನ್ನೋದು ನಮ್ಮ ಉದ್ದೇಶ. ಅದಕ್ಕಾಗಿ ಬಹುಮಾನ ನೀಡಲು ನಿರ್ಧರಿಸಿದೆವು. ಗಮನಿಸುವುದಕ್ಕೆ ಜನರನ್ನು ನೇಮಿಸಿದೆವು" ಎಂದಿದ್ದಾರೆ.

ಇದೀಗ ಲಾಕ್ ಡೌನ್ ಅವಧಿ ವಿಸ್ತರಣೆ ಆಗಿದ್ದರಿಂದ ಈ ಸ್ಪರ್ಧೆ ಯಾವಾಗ ಕೊನೆ ಮಾಡಬೇಕು ಎಂಬ ತೀರ್ಮಾನ ಮಾಡಬೇಕು. ಮೇ 3ಕ್ಕೆ ಅಂತಿಮ ಆಗಬಹುದು ಅನ್ನಿಸುತ್ತದೆ. ಇದನ್ನು ನಮ್ಮ ಪಂಚಾಯಿತಿ ತೀರ್ಮಾನಿಸುತ್ತದೆ. ಈ ಸ್ಪರ್ಧೆ ಕೊನೆ ಆದಮೇಲೆ, ಕುಟುಂಬಗಳಿಗೆ ಅಫಿಡವಿಟ್ ಸಲ್ಲಿಸಲು ತಿಳಿಸುತ್ತೇವೆ, ಯಾವ ಕುಟುಂಬ ಮನೆಯಿಂದ ಆಚೆ ಬಂದಿಲ್ಲ ಎಂಬುದನ್ನು ತಿಳಿಸಬೇಕು. ಅಂಥ ಎಲ್ಲ ಕುಟುಂಬಗಳಿಗೆ ಕೂಪನ್ ನೀಡುತ್ತೇವೆ. ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತೇವೆ" ಎಂದು ನಾಸರ್ ತಿಳಿಸಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications