ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಆದಿತ್ಯ ಪುರಿ ಅವರು ಜುಲೈ 21ರಿಂದ 23ರ ಮಧ್ಯೆ 74.2 ಲಕ್ಷ ಷೇರುಗಳನ್ನು 842.87 ಕೋಟಿ ರುಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಿಂದ ತಿಳಿದುಬಂದಿದೆ. ಆದಿತ್ಯ ಪುರಿ ಅಧಿಕಾರಾವಧಿ ಅಕ್ಟೋಬರ್ ಅಂತ್ಯಕ್ಕೆ ಕೊನೆ ಆಗುತ್ತದೆ.
ಜೂನ್ ತ್ರೈಮಾಸಿಕದ ಅಂತ್ಯಕ್ಕೆ ಪುರಿ ಅವರ ಬಳಿ ಎಚ್ ಡಿಎಫ್ ಸಿ ಬ್ಯಾಂಕ್ ನ 0.14% ಷೇರಿನ ಪಾಲಿತ್ತು. ಈಗಿನ ವ್ಯವಹಾರ ಮುಗಿಯುವುದರೊಂದಿಗೆ 3.76 ಲಕ್ಷ ಷೇರುಗಳು ಅಥವಾ 0.01% ಷೇರಿನ ಪಾಲು ಅವರ ಬಳಿ ಉಳಿದುಕೊಂಡಂತಾಗುತ್ತದೆ.
ಎಚ್ ಡಿಎಫ್ ಸಿ ಬ್ಯಾಂಕ್ ವಕ್ತಾರರು ನೀಡಿದ ಮಾಹಿತಿ ಪ್ರಕಾರ, ಈ ಷೇರುಗಳು ಪುರಿ ಅವರಿಗೆ ಬೇರೆ ಬೇರೆ ಬೆಲೆಯಲ್ಲಿ (ಮುಖ ಬೆಲೆಯಲ್ಲಿ ಅಲ್ಲ) ವಿತರಿಸಲಾಗಿತ್ತು. ಆದ್ದರಿಂದ ಅವರು ಈಗ ಮಾರಾಟದಿಂದ ಪಡೆದ ನಿವ್ವಳ ಮೊತ್ತ 840 ಕೋಟಿ ಅಲ್ಲ. ಆ ಷೇರುಗಳ ಖರೀದಿಗೆ ಆದ ವೆಚ್ಚ, ಆ ವ್ಯವಹಾರಕ್ಕೆ ಬಿದ್ದ ತೆರಿಗೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನಲಾಗಿದೆ.
ಆದಿತ್ಯ ಪುರಿ ಉತ್ತರಾಧಿಕಾರಿಗಾಗಿ ಶೋಧ
ಆದಿತ್ಯ ಪುರಿ ಅವರ ಉತ್ತರಾಧಿಕಾರಿಯನ್ನು ಹುಡುಕುವ ಸಲುವಾಗಿ ಶೋಧನಾ ಸಮಿತಿಯನ್ನು ಎಚ್ ಡಿಎಫ್ ಸಿ ಆಡಳಿತ ಮಂಡಳಿ ಕಳೆದ ವರ್ಷ ನವೆಂಬರ್ ನಲ್ಲಿ ರಚಿಸಿತ್ತು. ಅದರಲ್ಲಿ ಸದಸ್ಯರಾಗಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಗೋಪಿನಾಥ್, ಸಂಜೀವ್ ಸಾಚಾರ್, ಎಂ.ಡಿ.ರಂಗನಾಥನ್, ಸಂದೀಪ್ ಪಾರೇಖ್, ಶ್ರೀಕಾಂತ್ ನಾದಮುನಿ, ಕೇಕಿ ಮಿಸ್ತ್ರಿ ಇದ್ದಾರೆ. ಪುರಿ ಸಲಹೆಗಾರರಾಗಿದ್ದರು.
1994ರಿಂದ ಬ್ಯಾಂಕ್ ಕಟ್ಟಿ ಬೆಳೆಸಿದ್ದಾರೆ
ಮುಂದಿನ ವರ್ಷಕ್ಕೆ ಆದಿತ್ಯ ಪುರಿಗೆ 70 ವರ್ಷ ಆಗುತ್ತದೆ. 1994ರಲ್ಲಿ ಬ್ಯಾಂಕ್ ಆರಂಭವಾದ ದಿನದಿಂದ ಅದನ್ನು ಭಾರತದ ಅತ್ಯಂತ ಮೌಲ್ಯಯುತ ಬ್ಯಾಂಕ್ ಎಂದು ಕಟ್ಟಿ ಬೆಳೆಸಿದ್ದರಲ್ಲಿ ಆದಿತ್ಯ ಪುರಿ ಪಾಲಿದೆ. ಜುಲೈ 24ನೇ ತಾರೀಕಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳ ಮೌಲ್ಯ 6.14 ಲಕ್ಷ ಕೋಟಿ ರುಪಾಯಿ ಇದೆ.
ಮೂವರ ಹೆಸರು ಆರ್ ಬಿಐಗೆ ಶಿಫಾರಸು
ಪುರಿ ಉತ್ತರಾಧಿಕಾರಿಯಾಗಿ ಶಶಿಧರ್ ಜಗದೀಶನ್, ಕೈಜಾದ್ ಭರೂಚ (ಇಬ್ಬರೂ ಸದ್ಯಕ್ಕೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕರು) ಹಾಗೂ ಸಿಟಿ ಕಮರ್ಷಿಯಲ್ ಬ್ಯಾಂಕ್ ಗ್ಲೋಬಲ್ ಎಕ್ಸ್ ಕ್ಯೂಟಿವ್ ಆಫೀಸರ್ ಆಗಿರುವ ಸುನೀಲ್ ಗರ್ಗ್ ಈ ಮೂವರ ಹೆಸರನ್ನು ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಶಿಫಾರಸು ಮಾಡಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications