ಮುಂಬೈ, ಜನವರಿ 27: Hindenburg report ಬಂದ ನಂತರ ಮಾರುಕಟ್ಟೆ ನಿಯಂತ್ರಕ ಸೆಬಿ ಕಳೆದ ವರ್ಷದಲ್ಲಿ ಅದಾನಿ ಗ್ರೂಪ್ನ ವ್ಯವಹಾರಗಳ ಪರಿಶೀಲನೆಯನ್ನು ಹೆಚ್ಚಿಸಿದೆ. ಅದಾನಿ ಗ್ರೂಪ್ನ ವಿದೇಶಿ ಬಂಡವಾಳ ಹೂಡಿಕೆದಾರರ ಬಗ್ಗೆ ತನ್ನದೇ ಆದ ಪ್ರಾಥಮಿಕ ತನಿಖೆಯನ್ನು ಸೆಬಿ ನಡೆಸುತ್ತಿದೆ. ಹಿಂಡೆನ್ಬರ್ಗ್ ರಿಸರ್ಚ್ ನೀಡಿದ ವರದಿಯನ್ನು SEBI ಅಧ್ಯಯನ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸುದ್ದಿಸಂಸ್ಥೆ 'ರಾಯಟರ್ಸ್' ವರದಿ ಮಾಡಿದೆ. ಅದಾನಿ ಗ್ರೂಪ್ನ ಕಡಲಾಚೆಯ ತೆರಿಗೆ ವ್ಯವಸ್ಥೆಯ ಅಸಮರ್ಪಕ ಬಳಕೆ ಮತ್ತು ಹೆಚ್ಚಿದ ಸಾಲದ ಬಗ್ಗೆ ಸೆಬಿ ಆತಂಕ ವ್ಯಕ್ತಪಡಿಸಿದೆ.
'ಅದಾನಿ ಗ್ರೂಪ್ ನಡೆಸುತ್ತಿರುವ ಎಲ್ಲಾ ವಹಿವಾಟುಗಳನ್ನು SEBI ಪರಿಶೀಲಿಸುತ್ತಿದೆ. ಈ ವಿಚಾರವು ಗೌಪ್ಯವಾಗಿದೆ' ಎಂದು ತಿಳಿದುಬಂದಿದೆ.
ನಾವು ಇಮೇಲ್ ಮೂಲಕ ಪ್ರಶ್ನೆಗಳು ಕೇಳಿದ್ದೇವೆ. ಫೋನ್ ಕರೆಗಳಿನ್ನು ಮಾಡಿದ್ದೇವೆ. ಇದಕ್ಕೆ ಅದಾನಿ ಗ್ರೂಪ್ ಉತ್ತರಿಸಿಲ್ಲ ಎಂದು SEBI ಆರೋಪಿಸಿದೆ.

ಅದಾನಿ ಈ ವಾರದ ಆರಂಭದಲ್ಲಿ ಹಿಂಡೆನ್ಬರ್ಗ್ ವರದಿಯನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ನ್ಯೂಯಾರ್ಕ್ ಮೂಲದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಎಂಬುದನ್ನು ಪರಿಗಣಿಸುವುದಾಗಿ ಅದಾನಿ ಹೇಳಿದ್ದಾರೆ.
ಕಂಪನಿಯ ನಿರ್ದಿಷ್ಟ ವಿಷಯಗಳು ಮತ್ತು ನಡೆಯುತ್ತಿರುವ ತನಿಖೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಚರ್ಚಿಸುವುದಿಲ್ಲ ಎಂದು SEBI ವಕ್ತಾರರು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಎಸಿಸಿ ಲಿಮಿಟೆಡ್ನಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಹೋಲ್ಸಿಮ್ ಲಿಮಿಟೆಡ್ನ ಪಾಲನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡಿತ್ತು. ಆ ಸಂದರ್ಭದಲ್ಲಿ, ಅದಾನಿ ಗ್ರೂಪ್ ವಹಿವಾಟಿಗೆ ಬಳಸಿದ ಕಡಲಾಚೆಯ ವಿಶೇಷ ಉದ್ದೇಶದ ಎಸ್ಪಿವಿಯನ್ನು ಪರಿಶೀಲಿಸಿಲಿಸಲಾಗಿದೆ ಎಂದು SEBI ಹೇಳಿದೆ.

ಇದಕ್ಕೆ ಸಂಬಂಧಿಸಿದ SPV ಯ ಬಳಕೆಯನ್ನು ಮೇ 2022 ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಘೋಷಣೆಯ ಭಾಗವಾಗಿ ಅದಾನಿ ಗ್ರೂಪ್ ಬಹಿರಂಗಪಡಿಸಿದೆ. ಕಡಲಾಚೆಯ ವಹಿವಾಟಿನ ಧನಸಹಾಯದಲ್ಲಿ ಒಳಗೊಂಡಿರುವ 17 ವಿದೇಶಿ ಘಟಕಗಳನ್ನು SEBI ಗುರುತಿಸಿದೆ.
2022 ನೇ ವರ್ಷದ ಕ್ಲಿಯರೆನ್ಸ್ಗಾಗಿ ಅದಾನಿ ಗ್ರೂಪ್ ಸೆಬಿಯನ್ನು ಸಂಪರ್ಕಿಸಿದಾಗ ಈ ಘಟಕಗಳ ಬಗ್ಗೆ ಸ್ಪಷ್ಟತೆ ಕೇಳಲಾಗಿತ್ತು. ಈ ಪ್ರತಿಕ್ರಿಯೆಗಳು ಪರೀಕ್ಷೆಯ ಹಂತದಲ್ಲಿವೆ ಎಂದು ಸೆಬಿ ತಿಳಿಸಿದೆ.

ಅದಾನಿ ಗ್ರೂಪ್ ಕುರಿತು ಹಿಂಡೆನ್ಬರ್ಗ್ನ ವರದಿ ನಡಿದೆ. ಗ್ರೂಪ್ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್ಪ್ರೈಸಸ್ನಿಂದ $2.45 ಶತಕೋಟಿ ದ್ವಿತೀಯ ಷೇರು ಮಾರಾಟದ ನಡುವೆ ಈ ವರದಿ ಪ್ರಕಟಗೊಂಡಿದೆ. ಕಳೆದ ಮೂರು ದಿನಗಳಿಂದ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿವೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications