ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅಧಿಕಾರವಧಿ ಮತ್ತೆ ಐದು ವರ್ಷಗಳ ಕಾಲ ಮುಂದುವರಿದಿದೆ. ಮುಕೇಶ್ ಅಂಬಾನಿ 2029 ರವರೆಗೆ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲಿದ್ದಾರೆ. ಅಂದರೆ ಮುಕೇಶ್ಗೆ ಮತ್ತೊಂದು ಐದು ವರ್ಷಗಳ ಅವಧಿಯನ್ನು ನೀಡಲು ಷೇರುದಾರರ ಅನುಮೋದನೆಯನ್ನು ಕೋರಲಾಗಿದೆ.
ಸಂಸ್ಥೆಯ ನಿಯಮದ ಪ್ರಕಾರ ಯಾವುದೇ ವ್ಯಕ್ತಿಗೆ 70 ವರ್ಷವಾದರೆ ಅವರು ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡುವಂತಿಲ್ಲ. ನಿವೃತ್ತಿಯನ್ನು ಪಡೆಯಬೇಕು. ಪ್ರಸ್ತುತ 66ರ ಹರೆಯದ ಮುಕೇಶ್ ಅಂಬಾನಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸುವಾಗ ಅವರ ವಯಸ್ಸು 70 ವರ್ಷ ವಯಸ್ಸನ್ನು ದಾಟುತ್ತದೆ. ಆ ವಯಸ್ಸಿನ ಮಿತಿಯನ್ನು ಮೀರಿ ಅವರನ್ನು ನೇಮಕ ಮಾಡಲು ಷೇರುದಾರರಿಂದ ವಿಶೇಷ ನಿರ್ಣಯದ ಅಗತ್ಯವಿದೆ.

ಮುಕೇಶ್ ಅಂಬಾನಿ ಅವರು 1977 ರಿಂದ ರಿಲಯನ್ಸ್ ಮಂಡಳಿಯಲ್ಲಿದ್ದಾರೆ ಮತ್ತು ಜುಲೈ 2002 ರಲ್ಲಿ ಅವರ ತಂದೆ ಮತ್ತು ಗುಂಪಿನ ಪಿತಾಮಹ ಧೀರೂಭಾಯಿ ಅಂಬಾನಿ ಅವರ ಮರಣದ ನಂತರ ಕಂಪನಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅಂಬಾನಿ ಸಂಬಳವು ಶೂನ್ಯವಾಗಿದೆ. ಆದರೂ ಕೂಡಾ ದೇಶದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವುದು ಹೇಗೆ, ಇಲ್ಲಿದೆ ವಿವರ.
ಶೂನ್ಯ ವೇತನ ಪಡೆಯುವ ಅಂಬಾನಿ
ಮುಕೇಶ್ ಅಂಬಾನಿ 2008-09ರ ಹಣಕಾಸು ವರ್ಷದಿಂದ 2019-20ರವರೆಗೆ 15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಕಾರಣಿಸಿಕೊಂಡ ಬಳಿಕ ಅಂದರೆ ಹಣಕಾಸು ವರ್ಷ 2020-21ರಿಂದ ಮುಕೇಶ್ ಅಂಬಾನಿ ಯಾವುದೇ ವೇತನವನ್ನು ಪಡೆದುಕೊಳ್ಳುತ್ತಿಲ್ಲ. ಪ್ರಸ್ತುತ ಮುಕೇಶ್ ಅಂಬಾನಿಗೆ ಯಾವುದೇ ಸಂಬಳ ಅಥವಾ ಲಾಭ ಆಧಾರಿತ ಕಮಿಷನ್ ನೀಡಬಾರದು ಎಂದು ರಿಲಯನ್ಸ್ ಮಂಡಳಿ ಶಿಫಾರಸು ಮಾಡಿದೆ.
ಸವಲತ್ತುಗಳು ಏನಿದೆ?
ವ್ಯಾಪಾರ ಪ್ರವಾಸಗಳಲ್ಲಿ ಸಂಗಾತಿ ಮತ್ತು ಸಹಾಯಕರು ಸೇರಿದಂತೆ ಪ್ರಯಾಣ, ಬೋರ್ಡಿಂಗ್ ಮತ್ತು ವಸತಿಗಾಗಿ ತಗಲುವ ವೆಚ್ಚವನ್ನು ಮರುಪಾವತಿ ಪಡೆಯಲು ಅಂಬಾನಿ ಅರ್ಹರಾಗಿರುತ್ತಾರೆ. ಕಂಪನಿಯ ವ್ಯವಹಾರದಲ್ಲಿ ಬಳಸಲು ಕಾರುಗಳನ್ನು ಒದಗಿಸಲಾಗುತ್ತದೆ. ಕಂಪನಿಯು ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆಗಾಗಿಯೂ ಪಾವತಿ ಮಾಡುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ವೇತನ ಮಾತ್ರ ಶೂನ್ಯವಾಗಿದೆ. ಕಳೆದ ವರ್ಷವು ಕೂಡಾ ಮುಕೇಶ್ ಅಂಬಾನಿ ಯಾವುದೇ ಆದಾಯವನ್ನು ಪಡೆದುಕೊಂಡಿಲ್ಲ. ಈ ವರ್ಷವನ್ನು ಸೇರಿಸಿದರೆ ಬಿಲಿಯನೇರ್ ಮುಕೇಶ್ ಅಂಬಾನಿ ಸತತ ಮೂರನೇ ವರ್ಷ ತನ್ನ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ನಿಂದ ಯಾವುದೇ ವೇತನವನ್ನು ಪಡೆದಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications