ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ತೆಗೆದುಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಸಂಬಂಧಪಟ್ಟ ರಾಜತಾಂತ್ರಿಕರಿಗೆ ತಿಳಿಸಲಾಗಿದೆ.
ಕೆನಡಾ ಒಬ್ಬ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದ ಬಳಿಕ ಮತ್ತು ಖಲಿಸ್ತಾನಿ ನಾಯಕನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ ನಂತರ ಭಾರತ ಸರ್ಕಾರವು ಈ ನಿರ್ಧಾರವನ್ನು ಮಾಡಿದೆ. ಖಲಿಸ್ತಾನ್ ಆಂದೋಲನವು ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು, ಖಲಿಸ್ತಾನ್ ಎಂಬ ಜನಾಂಗೀಯ-ಧಾರ್ಮಿಕ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸುವ ಮೂಲಕ ಸಿಖ್ಖರಿಗೆ ಪ್ರತ್ಯೇಕ ದೇಶವನ್ನು ರಚಿಸುವ ಪ್ರಯತ್ನವನ್ನು ಈ ಆಂದೋಲನದ ಮೂಲಕ ಮಾಡಲಾಗುತ್ತದೆ. ಈ ಚಳುವಳಿ ಕೆನಡಾದಲ್ಲಿ ಬಹಳ ಪ್ರಬಲವಾಗಿದೆ.

ಕೆನಡಾದಲ್ಲಿ ಸಿಖ್ ಧರ್ಮಕ್ಕೆ ಸೇರಿದ ಸುಮಾರು 800,000 ಜನರು ವಾಸವಾಗಿದ್ದಾರೆ, ಅಂದರೆ 2021 ರ ಜನಗಣತಿ ಪ್ರಕಾರ ಕೆನಡಾದ ಜನಸಂಖ್ಯೆಯ ಶೇಕಡ 2.1 ರಷ್ಟು ಸಿಖ್ ಧರ್ಮದವರಾಗಿದ್ದಾರೆ. ಇದು ದೇಶದ ವೇಗವಾಗಿ ಬೆಳೆಯುತ್ತಿರುವ ಮತ್ತು ನಾಲ್ಕನೇ-ದೊಡ್ಡ ಧಾರ್ಮಿಕ ಗುಂಪನ್ನು ರೂಪಿಸುತ್ತಿದೆ.
ಕೆನಡಾದಲ್ಲಿ ಅತಿ ಹೆಚ್ಚಾಗಿ ಸಿಖ್ ಧರ್ಮದವರು ಒಂಟಾರಿಯೊದಲ್ಲಿ ವಾಸಿಸುತ್ತಾರೆ. ಅದಾದ ಬಳಿಕ ಬ್ರಿಟಿಷ್ ಕೊಲಂಬಿಯಾ ಮತ್ತು ಆಲ್ಬರ್ಟಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಧಾರ್ಮಿಕರು ನೆಲೆಸಿದ್ದಾರೆ. ಕೆನಾಡವು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಸಿಖ್ ಅನುಪಾತದ (ಶೇಕಡ 2.1) ನೆಲೆಯಾಗಿದೆ. ಭಾರತದ ನಂತರ ವಿಶ್ವದ ಎರಡನೇ ಅತಿದೊಡ್ಡ ಸಿಖ್ ಜನಸಂಖ್ಯೆಯನ್ನು ಕೆನಡಾ ಹೊಂದಿದೆ. ಸಿಖ್ ಜನರು ಕೆನಡಾದಲ್ಲಿ ಆರ್ಥಿಕ ಬೆಳವಣಿಗೆಗೆ ಒಂದಲ್ಲ ಒಂದು ರೂಪದಲ್ಲಿ ಕೊಡುಗೆಯನ್ನು ನೀಡುತ್ತಾರೆ.
ಕೆನಡಾ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ?
ಕೆನಡಾದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲಿ ಶೇಕಡ 0.2 ರಷ್ಟು ವಾರ್ಷಿಕ ದರಲ್ಲಿದೆ. ಜುಲೈನಲ್ಲಿ ಬೆಳವಣಿಗೆಯು ಹೆಚ್ಚಾಗಿ ಸಮಾನಂತರವಾಗಿದೆ. ಇದು ಮುಂಬರುವ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತದ ಆರ್ಥಿಕ ಹಿಂಜರಿತದ ಸಂಭವನೀಯತೆಯನ್ನು ತೋರಿಸುತ್ತದೆ. ಏರುತ್ತಿರುವ ಹಣದುಬ್ಬರವು ಮತ್ತು ಹೆಚ್ಚಿದ ಬಡ್ಡಿದರವು ವಸತಿ ಹೂಡಿಕೆಗೆ ಪ್ರಚೋದಿಸಿದೆ. ಜೂನ್ನಲ್ಲಿ ಕೊನೆಗೊಂಡ ಮೂರು ತಿಂಗಳಲ್ಲಿ ಸತತ ಐದನೇ ತ್ರೈಮಾಸಿಕ ಇಳಿಕೆಯನ್ನು ದಾಖಲಿಸಿದೆ.
ಆರ್ಥಿಕ ಏರಿಳಿತವು ಹೆಚ್ಚು ಪರಿಣಾಮ ಬೀರುವ ವಲಯವು ಉದ್ಯೋಗ ವಲಯವಾಗಿದೆ. 2023 ರಲ್ಲಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಲಕ್ಷಾಂತರ ಉದ್ಯೋಗಗಳನ್ನು ಕಡಿತಗೊಳಿಸಿದ ವರ್ಷವಾಗಿದ್ದರೂ ಕೂಡಾ ಉದ್ಯೋಗ ಕಡಿತದಿಂದ ಹೆಚ್ಚು ಪ್ರಭಾವಿತರಾದವರು ಸಾಮಾನ್ಯವಾಗಿ ವಲಸಿಗರು ಅಥವಾ ತಾತ್ಕಾಲಿಕ ವೀಸಾದಲ್ಲಿರುವ ಜನರು ಆಗಿದ್ದಾರೆ.
ವ್ಯಾಪಾರ ಸಂಬಂಧ ಕುಸಿಯುತ್ತಿದೆ, ಮುಂದೇನು?
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಒತ್ತಡಗಳು ಈಗ ವ್ಯಾಪಾರ ಸಂಬಂಧಗಳಿಗೆ ಬೆದರಿಕೆಯಾಗಿದೆ. ವ್ಯಾಪಾರ ಒಪ್ಪಂದದ ಮಾತುಕತೆಗಳು ಈಗ ಸ್ಥಗಿತಗೊಂಡಿವೆ. ಕೆನಡಾ ಬಿಕ್ಕಟ್ಟಿಗೆ ಕೆಲವು ವಿವರಗಳನ್ನು ನೀಡಿದೆ. ಆದರೆ ಭಾರತವು "ಕೆಲವು ರಾಜಕೀಯ ಬೆಳವಣಿಗೆಗಳನ್ನು" ಉಲ್ಲೇಖಿಸಿದೆ.
ಸ್ಟ್ಯಾಟಿಸ್ಟಿಕ್ಸ್ ಕೆನಡಾದ ಪ್ರಕಾರ, 2022 ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಕೆನಡಾದ ಒಟ್ಟು C$1.52 ಟ್ರಿಲಿಯನ್ಗಳಲ್ಲಿ ಕೇವಲ C$13.7 ಶತಕೋಟಿ ($10.2 ಶತಕೋಟಿ) ಆಗಿದೆ. ಕೊನೆಯಲ್ಲಿ, 2023 ರ ಜಿಡಿಪಿಗೆ ಕೊಡುಗೆ ನೀಡುವ ಅರ್ಧಕ್ಕಿಂತ ಹೆಚ್ಚು ಕೈಗಾರಿಕೆಗಳು ಕುಸಿತವನ್ನು ಕಂಡಿದೆ. ಉದ್ಯೋಗವು ಸಾಧಾರಣ ಕುಸಿತವನ್ನು ನೋಡಿದರೆ, ಅದನ್ನು ಕೆನಡಾದಲ್ಲಿ ಹಿಂಜರಿತ ಎಂದು ಕರೆಯಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications