ಸೋನಿ ಗ್ರೂಪ್ ಕಾರ್ಪ್ ತನ್ನ ಭಾರತ ಘಟಕ ಮತ್ತು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ನಡುವಿನ ಬಹು ನಿರೀಕ್ಷಿತ ವಿಲೀನವು ರದ್ದಾಗುವ ಬಗ್ಗೆ ಈ ಹಿಂದೆ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಇದು ನಿಜವಾಗಿದ್ದು, ಈ ಒಪ್ಪಂದ ಮುರಿದು ಬಿದ್ದಿದೆ.
ಇದಾದ ಬೆನ್ನಲ್ಲೇ ಪುನಿತ್ ಗೋಯೆಂಕಾ ಅವರನ್ನು ಸಿಇಒ ಹುದ್ದೆಯಿಂದ ಹೊರಗಿಡಲು ತನ್ನ ಸಂಸ್ಥೆಯ ಪ್ರಸ್ತಾಪದ ಹೊರತಾಗಿಯೂ ಈಗ 10 ಬಿಲಿಯನ್ ಡಾಲರ್ ಒಪ್ಪಂದವನ್ನು ರದ್ದುಗೊಳಿಸಿರುವ ಹಿಂದೆ ಸೋನಿಯ ಉದ್ದೇಶವನ್ನು ಜೀ ಎಂಟರ್ಟೈನ್ಮೆಂಟ್ ಸಂಸ್ಥಾಪಕ ಸುಭಾಷ್ ಚಂದ್ರ ಪ್ರಶ್ನಿಸಿದ್ದಾರೆ.

ಸೋನಿ ಉದ್ದೇಶಪೂರ್ವಕವಾಗಿ ಒಪ್ಪಂದವನ್ನು ಮುರಿದಿದೆ ಎಂದು ಚಂದ್ರ ಆರೋಪಿಸಿದರು. ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಬೆದರಿಕೆ ಹಾಕಿದರು ಎಂದು ಜೀ ಚೇರ್ಮನ್ ಎಮೆರಿಟಸ್ ಸಂದರ್ಶನದಲ್ಲಿ ಇಕಾನಮಿಕ್ ಟೈಮ್ಸ್ಗೆ ತಿಳಿಸಿದರು. ಝೀಯು ಡೀಲ್ನಲ್ಲಿ ಹೇಳಲಾದ ಎಲ್ಲಾ ಷರತ್ತುಗಳನ್ನು ಝೀ ಪೂರೈಸಿದೆ ಎಂದು ಚಂದ್ರಾ ಹೇಳಿಕೊಂಡಿದ್ದು, ಸೋನಿಯ ಝೀ ಜೊತೆಗೆ ಡೀಲ್ ಅನ್ನು ಮುರಿದು ಝೀ ದುರ್ಬಲ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು.
ಗೋಯೆಂಕಾ ಮತ್ತು ಅವರ ತಂದೆ ಚಂದ್ರು ಅವರು "ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ" ಮತ್ತು "ತಮ್ಮ ಸ್ವಂತ ಲಾಭಕ್ಕಾಗಿ" ನಿಧಿಯನ್ನು ಕಸಿದುಕೊಂಡಿದ್ದಾರೆ ಎಂದು ಜೂನ್ನಲ್ಲಿ ಸೆಬಿ ಹೇಳಿದ ಕೂಡಲೇ ಈ ವಿವಾದ ಪ್ರಾರಂಭವಾಯಿತು.
ನಿಯಂತ್ರಕರು ಅದರ ತನಿಖೆ ನಡೆಯುತ್ತಿರುವಾಗ ಪಟ್ಟಿ ಮಾಡಲಾದ ಸಂಸ್ಥೆಗಳಲ್ಲಿ ಯಾವುದೇ ಕಾರ್ಯನಿರ್ವಾಹಕ ಅಥವಾ ನಿರ್ದೇಶಕ ಸ್ಥಾನಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ನಿರ್ಬಂಧಿಸಿದರು. ಅಕ್ಟೋಬರ್ನಲ್ಲಿ, ಮೇಲ್ಮನವಿ ಪ್ರಾಧಿಕಾರವು ಸೆಬಿಯ ನಿಷೇಧದಿಂದ ಗೋಯೆಂಕಾಗೆ ಭಾಗಶಃ ಪರಿಹಾರವನ್ನು ನೀಡಿತು. ತನಿಖೆಯ ಸಮಯದಲ್ಲಿ ಈ ಸ್ಥಾನಗಳನ್ನು ಹೊಂದಲು ಅವರಿಗೆ ಅವಕಾಶ ನೀಡಿತು.
ವಿಲೀನಗೊಂಡ ಘಟಕದ ನಾಯಕತ್ವದ ಬಗೆಗಿನ ವಿವಾದವು ಇದೆ. ಆದರೆ ಈ ವಿವಾದವು ಇನ್ನು ಕೂಡಾ ಬಗೆಹರಿದಿಲ್ಲ. ಈ ನಡುವೆ ಜಪಾನಿನ ಸಂಘಟಿತ ಸಂಸ್ಥೆಯು ಈ ಒಪ್ಪಂದವನ್ನು ಮುಕ್ತಾಯ ಮಾಡುವ ಯೋಚನೆಯನ್ನು ಮಾಡುತ್ತಿದೆ ಬ್ಲೂಮ್ಬರ್ಗ್ ಈ ಹಿಂದೆ ವರದಿ ಮಾಡಿತ್ತು.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications