ಭಾರತದ ಜಿಡಿಪಿ ಕುಸಿತಕ್ಕೆ ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?
2019-20ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 4.5 ಪರ್ಸೆಂಟ್ ದಾಖಲಾಗಿದೆ. ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಅಂದಾಜಿಸಿದಕ್ಕಿಂತ ಕಡಿಮೆ ಜಿಡಿಪಿ ದರ ಇದಾಗಿದೆ. ದೇಶಾದ್ಯಂತ ಅನೇಕ ನಾಯಕರು, ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು 2ನೇ ತ್ರೈಮಾಸಿಕದ ಜಿಡಿಪಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಆಯ್ದ ನಾಲ್ಕು ಪ್ರಮುಖ ಪ್ರತಿಕ್ರಿಯೆ ಈ ಕೆಳಗಿದೆ.
ಮನಮೋಹನ್ ಸಿಂಗ್, ಮಾಜಿ ಪ್ರಧಾನಿ
ಜಿಡಿಪಿ ಬೆಳವಣಿಗೆಯಲ್ಲಿನ ಕುಸಿತವು ಬಹಳ ಚಿಂತೆಗೀಡು ಮಾಡುವಂತಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಸಮಾಜದ ಸ್ಥಿತಿ ಚಿಂತಾಜನಕವಾಗಿದೆ.
ಸತತ 6ನೇ ತ್ರೈಮಾಸಿಕದಲ್ಲಿ ಇಳಿಕೆ ದಾಖಲಿಸಿದ ಭಾರತದ ಜಿಡಿಪಿ
ಕೆ.ವಿ. ಸುಬ್ರಮಣಿಯನ್, ಮುಖ್ಯ ಆರ್ಥಿಕ ಸಲಹೆಗಾರ
ನಾವು ಪದೇ ಪದೇ ಹೇಳುತ್ತಾ ಇದ್ದೇವೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲವಾಗಿಯೇ ಮುಂದುವರಿದಿದೆ. 3ನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
ವಿಫಲ ಮೋದಿನಾಮಿಕ್ಸ್ ಮತ್ತು ಪಕೋಡಾ ಆರ್ಥಿಕ ದೃಷ್ಟಿಕೋನವು ಭಾರತದ ಆರ್ಥಿಕತೆಯನ್ನು, ಆರ್ಥಿಕ ಹಿಂಜರಿತದ ಕಂದಕಕ್ಕೆ ನೂಕಿದೆ. ವಿಶ್ವಬ್ಯಾಂಕ್, ಐಎಂಎಫ್, ಮೂಡಿಸ್, ಫಿಚ್, ಆರ್ಬಿಐ, ಎಸ್ಬಿಐ ನುಡಿದಂತೆಯೇ ಜಿಡಿಪಿ ಪ್ರಗತಿಯು ಐತಿಹಾಸಿಕ ಕನಿಷ್ಠವಾದ 4.5 ಪರ್ಸೆಂಟ್ಗೆ ಕುಸಿದಿದೆ. ಕಳೆದ 6 ವರ್ಷಗಳಲ್ಲೇ ಹೀನಾಯ ಸ್ಥಿತಿ ಇದು
2ನೇ ತ್ರೈಮಾಸಿಕದಲ್ಲಿ ಜಿಡಿಪಿ ಮತ್ತೂ ಪಾತಾಳಕ್ಕೆ: 4.5 ಪರ್ಸೆಂಟ್ಗೆ ಇಳಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಭಾರತದ ಆರ್ಥಿಕತೆಯ ತೀವ್ರ ಕುಸಿತ ಮತ್ತು ಅದರ ಹಾನಿಕಾರಕ ಪರಿಣಾಮಗಳು ವಿಶೇಷವಾಗಿ ನಮ್ಮ ರೈತರು, ಯುವಕರು ಮತ್ತು ಬಡವರಿಗೆ ಪರಿಣಾಮಗಳನ್ನು ಬೀರಲಿದೆ ಎಂದು ಯಾರೂ ನಿರಾಕರಿಸುವುದಿಲ್ಲ