ಜನವರಿ ಅಂತ್ಯದ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಂದಿರಾ ಕ್ಯಾಂಟೀನ್ ಸಾರ್ವಜನಿಕರಿಗೆ ತೆರೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂದಾಜಿನ ಪ್ರಕಾರ, ಹೊಸ ಕ್ಯಾಂಟೀನ್ ಪ್ರತಿದಿನ ಸುಮಾರು 2,000 ಗ್ರಾಹಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ.
ಈ ಇಂದಿರಾ ಕ್ಯಾಂಟೀನ್ ಮುಖ್ಯವಾಗಿ ವಿಮಾನ ನಿಲ್ದಾಣದ ಕ್ಯಾಬ್ ಚಾಲಕರು ಮತ್ತು ಬಿಎಂಟಿಸಿ ಬಸ್ ಚಾಲಕರಿಗೆ ಪ್ರಯೋಜನವನ್ನು ನೀಡುತ್ತದೆ. 1.35 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಯಾಂಟೀನ್, ಅಡುಗೆ ಕೋಣೆ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದು ಕ್ಯಾಬ್ ಚಾಲಕರ ಸಂಘದ ಬಹುದಿನಗಳ ಬೇಡಿಕೆಯಾಗಿತ್ತು.

ಕ್ಯಾಬ್ ಮತ್ತು ಆಟೋ ಚಾಲಕರ ಸಂಘದ ಒಕ್ಕೂಟವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದ 36 ಬೇಡಿಕೆಗಳಲ್ಲಿ ಒಂದಾಗಿದೆ. ವಿಮಾನ ನಿಲ್ದಾಣ ಮತ್ತು ನಗರದ ನಡುವೆ ಪ್ರಯಾಣಿಸುವ ಒತ್ತಡದ ಕೆಲಸದ ಜೀವನವನ್ನು ಚಾಲಕರು ಅನುಭವಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿರುವ ರೆಸ್ಟೋರೆಂಟ್ಗಳಲ್ಲಿ ದರ ಅಧಿಕವಾದ ಕಾರಣ ಚಾಲಕರಿಗೆ ತೊಂದರೆಯಾಗುತ್ತಿದೆ.
ಬೇಡಿಕೆಯ ನಂತರ ರೆಡ್ಡಿ ಅವರು ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ಟ್ರ್ಯಾಕ್ ಮಾಡಲು ಬಿಬಿಎಂಪಿಗೆ ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಸಿರಾಜ್ ಅಹ್ಮದ್ ಮದನಿ, "ವಿಮಾನ ನಿಲ್ದಾಣದ ಟರ್ಮಿನಲ್ 1 ರ ಬಳಿ ಇರುವ ಪಾರ್ಕಿಂಗ್ 7 ಪ್ರದೇಶದಲ್ಲಿ ಕ್ಯಾಂಟೀನ್ ಅನ್ನು ಸ್ಥಾಪಿಸಲಾಗುವುದು. ಬೆಂಗಳೂರಿನ ಬಿಬಿಎಂಪಿ ವಲಯಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸುವ ಹೊಣೆ ಹೊತ್ತಿದ್ದ ಎಕ್ಸೆಲ್ ಪ್ರೀಕಾಸ್ಟ್ ಸೊಲ್ಯೂಷನ್ಗೆ ಕ್ಯಾಂಟೀನ್ ಸ್ಥಾಪನೆಯ ಗುತ್ತಿಗೆ ನೀಡಲಾಗಿದೆ," ಎಂದು ಹೇಳಿದ್ದಾರೆ.
"ವಿಮಾನ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್ ಒಂದು ಆಯತಾಕಾರದ ರಚನೆಯಾಗಲಿದ್ದು, ಇದು ಅಡುಗೆ ಕೋಣೆ ಮತ್ತು ಕ್ಯಾಂಟೀನ್ ಅನ್ನು ಒಳಗೊಂಡಿರುತ್ತದೆ. ಬಿಬಿಎಂಪಿ ವಲಯಗಳಲ್ಲಿರುವಂತೆಯೇ ನಾವು ಕ್ಯಾಂಟೀನ್ ಅನ್ನು ನಿರ್ವಹಿಸುತ್ತೇವೆ. ಇತರ ಕ್ಯಾಂಟೀನ್ಗಳಿಗೆ ಅನುಗುಣವಾಗಿ ಅದೇ ಮೆನು ಮತ್ತು ದರ ಕಾರ್ಡ್ನೊಂದಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಕ್ಯಾಂಟೀನ್ ತೆರೆದಿರುತ್ತದೆ," ಎಂದು ಮದನಿ ತಿಳಿಸಿದರು.


Click it and Unblock the Notifications